ನನಗಲ್ಲ, 'ಆಪರೇಶನ್‌ ಕಮಲ'ಕ್ಕೆ ಎಂಟಿಬಿ ನಾಗರಾಜ್‌ ಸಾಲ ಕೊಟ್ಟಿದ್ದಾನೆ: ಸಿದ್ದರಾಮಯ್ಯ

ಮೈಸೂರು: ಹೊಸಕೋಟೆ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ 'ಆಪರೇಶನ್‌ ಕಮಲ'ಕ್ಕೆ ಸಾಲ ಕೊಟ್ಟಿರುವುದಾಗಿ ವಿಪಕ್ಷ ನಾಯಕ ಹೊಸ ಬಾಂಬ್‌ ಸಿಡಿಸಿದ್ದಾರೆ. ಬಿಜೆಪಿ ಪಾಳಯ ಸೇರಿರುವ ಅನರ್ಹ ಶಾಸಕರ ಪೈಕಿ ಎಂಟಿಬಿ ಒಬ್ಬರೇ ದುಡ್ಡು ಕೊಟ್ಟು ಹೋದ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ತಮ್ಮ ಬಳಿ ಸಾಲ ಪಡೆದಿದ್ದಾರೆ ಎಂಬ ಎಂಟಿಬಿ ನಾಗರಾಜ್‌ ಹೇಳಿಕೆಗೆ ಸಂಬಂಧಿಸಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಯಾರ ಬಳಿಯೂ ಸಾಲ ಪಡೆದಿಲ್ಲ. ಎಂಟಿಬಿ ಕೊಟ್ಟ ಸಾಲದಿಂದ ಆಪರೇಷನ್‌ ಕಮಲ ನಡೆದಿದೆ. ಕೃಷ್ಣ ಬೈರೇಗೌಡ ಸಾಲ ವಾಪಸ್ ಕೊಟ್ಟಿದ್ದಾರೆ. ನಾನು ಸಾಲ ಪಡೆದಿಲ್ಲ. ಎಂಟಿಬಿ ಅನರ್ಹರಾಗಲು ನಾನು ಕಾರಣ ಎಂದು ಅವರ ತಲೆಯಲ್ಲಿದೆ. ಜನರು ಅನರ್ಹರ ಬಗ್ಗೆ ಕೋಪಕೊಂಡಿದ್ದಾರೆ. ಮೈತ್ರಿ ಸರಕಾರ ಪತನಗೊಳ್ಳಲು ಕಾರಣರಾದ 17 ಅನರ್ಹ ಶಾಸಕರ ಪೈಕಿ ಎಂಟಿಬಿ ಒಬ್ಬರೇ ದುಡ್ಡು ಕೊಟ್ಟು ಹೋಗಿದ್ದಾರೆ. ಉಳಿದವರೆಲ್ಲರೂ ಹಣ ಪಡೆದು ಹೋಗಿದ್ದಾರೆ. ಹಣ ಅಧಿಕಾರದ ಆಸೆಗೆ ಹೋಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಅನರ್ಹರನ್ನು ಜನ ಸಹಿಸಲ್ಲ. ಅವರನ್ನು ಪುರಸ್ಕರಿಸುವುದಿಲ್ಲ, ತಿರಸ್ಕರಿಸುತ್ತಾರೆ ಎಂದರು. ಉಪ ಚುನಾವಣೆಯಲ್ಲಿ ಅನರ್ಹರಿಗೆ ಜನರು ತಕ್ಕ ಪಾಠ ಕಳಿಸುತ್ತಾರೆ. ಇವರ ನಯ ವಿನಯದ ಸುಳ್ಳನ್ನು ಜನರು ನಂಬುವುದಿಲ್ಲ. ಜನರು ಪಕ್ಷಾಂತರವನ್ನು ಸಹಿಸಲ್ಲ. ನನ್ನ ಪ್ರಕಾರ 15 ಜನರು ಸೋಲುತ್ತಾರೆ. ಎಷ್ಟೇ ನಯ ವಿನಯದಿಂದ ಸುಳ್ಳು ಹೇಳಿದರೂ ಜನ ಕೇಳಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಎಂಟಿಬಿ ಸಾಲ ಚುನಾವಣೆ ಆಯೋಗದ ಮುಂದೆ ಮರೆ ಮಾಚಿದ್ದೇಕೆ? ಒಂದು ವೇಳೆ ಎಂಟಿಬಿ ನಾಗರಾಜ್‌ ಅವರು ಸಿದ್ದರಾಮಯ್ಯ ಅವರಿಗೆ ಸಾಲ ಕೊಟ್ಟಿದ್ದಾರೆ ಎಂಬುದಾದರೆ ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್‌ನಲ್ಲಿ ನಮೂದಿಸಬೇಕಿತ್ತು ಅಲ್ಲವೇ? ಸಾಲ ಕೊಟ್ಟ ವಿವರವನ್ನು ನಮೂದಿಸದಿದ್ದರೆ ಚುನಾವಣೆ ಆಯೋಗಕ್ಕೆ ಸುಳ್ಳು ಮಾಹಿತಿ ಕೊಟ್ಟಂತಾಗುವುದಿಲ್ಲವೇ? ಎಂಬ ಪ್ರಶ್ನೆಗಳು ಎದುರಾಗಿವೆ. ಕುರುಬ ಸಮುದಾಯಕ್ಕೆ ಅಗೌರವ: ಮಾಧುಸ್ವಾಮಿ ಕ್ಷಮೆ ಕೇಳಬೇಕುಹೊಸದುರ್ಗ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ಸಚಿವ ಮಾಧುಸ್ವಾಮಿ ಅಗೌರವ ವಿವಾದಕ್ಕೆ ಸಂಬಂಧಿಸಿ ಕುರುಬ ಸಮುದಾಯದ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ವೃತ್ತವೊಂದಕ್ಕೆ ಹಾಕಲಾಗಿದ್ದ ಕನಕದಾಸರ ಹೆಸರಿನ ನಾಮಫಲಕ ತೆರವುಗೊಳಿಸಿದ್ದರ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಎರಡು ಗುಂಪುಗಳ ಮಧ್ಯೆ ಉಂಟಾಗಿದ್ದ ಗೊಂದಲ ಬಗೆಹರಿಸಲು ಜಿಲ್ಲಾಡಳಿತ ಸಚಿವ ಜೆಸಿ ಮಾಧುಸ್ವಾಮಿ ಅಧ್ಯಕ್ಷತೆ ಶಾಂತಿ ಸಭೆ ಕರೆದಿತ್ತು. ಈ ಸಭೆಯಲ್ಲಿ ಮಾಧುಸ್ವಾಮಿ ಅವರು ಉದ್ಧಟತನ ಮತ್ತು ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಂಡಿದ್ದಾಗಿ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಸ್ಪಷ್ಟ ಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಸಿಎಂ ಬಿಎಸ್‌ ಯಡಿಯೂರಪ್ಪ ಕ್ಷಮೆ ಕೇಳಿದ್ದಾರೆ. ಆದರೆ ಮಾಧುಸ್ವಾಮಿ ಅವರು ಸಿಎಂ ಬಿಎಸ್‌ವೈ ಕ್ಷಮೆ ಕೇಳುವ ವರೆಗೆ ವಿವಾದವಾಗಿದ್ದಕ್ಕೆ ವಿಷಾಧಿಸುತ್ತೇನೆ ಎಂದಿದ್ದಾರೆ.


from India & World News in Kannada | VK Polls https://ift.tt/2s4fOJU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...