ಹೊಸದಿಲ್ಲಿ: ಕ್ರಿಕೆಟ್ನಿಂದ ದೀರ್ಘ ಸಮಯದ ವಿರಾಮ ತೆಗೆದುಕೊಂಡಿರುವ , ಇತ್ತೀಚೆಗಷ್ಟೇ ನೆಟ್ಸ್ಗೆ ಮರಳುವ ಮೂಲಕ ಟೀಮ್ ಇಂಡಿಯಾಕ್ಕೆ ಮರಳುವ ಸೂಚನೆ ನೀಡಿದ್ದರು. ಇದುವರೆಗೆ ಭಾರತೀಯ ತಂಡ ಮಹೇಂದ್ರ ಸಿಂಗ್ ಧೋನಿ ಅವರಂತಹ ಫಿನಿಶರ್ ಆಟಗಾರರನ್ನು ಪಡೆದಿಲ್ಲ. ಧೋನಿ ಅನುಪಸ್ಥಿತಿಯಲ್ಲಿ ಭಾರತ ತಂಡವು ಇನ್ನಿಂಗ್ಸ್ ಕೊನೆಯಲ್ಲಿ ರನ್ ಗಳಿಸಲು ಚಡಪಡಿಸುತ್ತಿದೆ. ಬಿರುಸಾಗಿ ಬ್ಯಾಟ್ ಬೀಸುವ ಧೋನಿ ವಿಕೆಟ್ ಮಧ್ಯೆ ಚುರುಕುತನದಿಂದ ರನ್ ಕಬಳಿಸುವ ಮೂಲಕ ತಂಡಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ಒದಗಿಸಿಕೊಟ್ಟಿದ್ದಾರೆ. ಆದರೆ ಧೋನಿ ಸ್ಥಾನಕ್ಕೆ ಆಯ್ಕೆಯಾಗಿರುವ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ನಿರೀಕ್ಷೆ ಮುಟ್ಟಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಅಥವಾ ಚೇಸಿಂಗ್ ಮಾಡುವಾಗ ಬ್ಯಾಟ್ಸ್ಮನ್ಗಳು ರನ್ ಗಳಿಸುವ ಆತುರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾರೆ. ಇನ್ನೊಂದೆಡೆ ಕೆಳ ಕ್ರಮಾಂಕದಲ್ಲಿ ಧೋನಿ ಹೆಚ್ಚು ಪ್ರಭಾವಿ ಎನಿಸಿಕೊಂಡಿದ್ದಾರೆ. ಇದೀಗ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಹಿಂದಿನ ಮನೋಸ್ಥಿತಿಯನ್ನು ಧೋನಿ ವಿವರಿಸಿದ್ದಾರೆ. ಪ್ರಾಯೋಗಿಕ ಪರಿಸ್ಥಿತಿಯನ್ನು ಎದುರಿಸುವುದು ಹೆಚ್ಚು ಮುಖ್ಯ. ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ 15ರಷ್ಟು ಎಸೆತಗಳನ್ನು ಮಾತ್ರ ಎದುರಿಸಲಿದ್ದೇನೆ. ಹಾಗೊಂದು ವೇಳೆ 25-30ರನ್ ಗಳಿಸಿದರೂ ತಂಡದ ಪಾಲಿಗೆ ಅತ್ಯುತ್ತಮ ಎಂಬುದನ್ನು ತಿಳಿದುಕೊಂಡಿದ್ದೇನೆ ಎಂದು ವಿವರಿಸಿದರು. ಆದರೆ ಅದೇ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗಬಹುದು ಎಂದರು. ನಿಮ್ಮ ತಂಡಕ್ಕೆ ರನ್ ಗಳಿಸುವ ಯೋಚನೆಯಲ್ಲಿ ದೊಡ್ಡ ಹೊಡೆತಗಳಿಗೆ ಮುಂದಾಗುವೀರಿ. ಇದರಿಂದ ನಿಮ್ಮ ವಿಕೆಟ್ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಗುರಿ ಏನೆಂಬುದನ್ನು ಪ್ರಾಯೋಗಿಕವಾಗಿ ಗುರಿ ನಿಗದಿಪಡಿಸಬೇಕು ಎಂದು ಸೇರಿಸಿದರು. ವಿಶ್ವ ಕ್ರಿಕೆಟ್ನ ಅತ್ಯುತ್ತಮ ಕ್ರಿಕೆಟಿಂಗ್ ಜಾಣ್ಮೆಯನ್ನು ಹೊಂದಿರುವವರಗಲ್ಲಿ ಒಬ್ಬರಾಗಿ 38ರ ಧೋನಿಯನ್ನು ಗುರುತಿಸುತ್ತೇವೆ. ಇದೇ ಸಂದರ್ಭದಲ್ಲಿ ತಮ್ಮಿಂದ ಆಗದಿರುವ ವಿಚಾರದ ಬಗ್ಗೆ ಚಿಂತಿಸದೇ ತಮ್ಮ ನಿಯಂತ್ರಣಕ್ಕೆ ಬರುವ ವಿಷಯಗಳನ್ನು ಮಾತ್ರ ಗಮನ ಹರಿಸುವಂತೆ ಸಲಹೆ ಮಾಡಿದ್ದಾರೆ. ನಾನು ಈಗಾಗಲೇ ಹೇಳಿದಂತೆ, ನಿಯಂತ್ರಿಸಲು ಸಾಧ್ಯವಾಗುವ ವಿಷಯಗಳತ್ತ ಗಮನಹರಿಸುವುದು ಮುಖ್ಯ. ಅದರ ಮೇಲೆ ಪರಿಶ್ರಮ ವಹಿಸಬೇಕು ಮತ್ತು ಈ ಪ್ರಕ್ರಿಯೆ ಯಶಸ್ಸು ಗಳಿಸುವುದು ಅತಿ ಮುಖ್ಯ ಎಂದು ವಿವರಿಸಿದರು. ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿ ಯಾವಾಗ ಕ್ರಿಕೆಟ್ಗೆ ಮರಳಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QDpFjZ