ಮತ್ತೆ ಬರಲಿದೆ ಮೈತ್ರಿ ಸರಕಾರ: ಎಚ್‌ಡಿಕೆ ಭವಿಷ್ಯ, ಜೆಡಿಎಸ್‌ ಬೆಂಬಲ ಯಾರಿಗೆ?

ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೆ ಪೂರ್ಣ ಬಹುಮತ ಯಾವ ಪಕ್ಷಕ್ಕೂ ಬರುವುದಿಲ್ಲ. ಮತ್ತೆ ಅದೇ ಪರಿಸ್ಥಿತಿಯುಂಟಾಗುತ್ತದೆ. ಸಮ್ಮಿಶ್ರ ಸರಕಾರ ಖಾಯಂ. ಹೀಗಾಗಿಯೇ ನಾನು ಚುನಾವಣೆ ಬೇಡ ಅಂತ ಹೇಳಿದೆ. ನಮ್ಮ ರಾಜ್ಯದಲ್ಲಿ ಕ್ಲಿಯರ್‌ ಮೆಜಾರಿಟಿ ಯಾರಿಗೂ ಬರಲ್ಲ ಎಂದು ಮಾಜಿ ಸಿಎಂ ತಿಳಿಸಿದರು. ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇತ್ತು. ಆದರೆ ಜನ ಬಿಜೆಪಿ ಮುಖ ನೋಡಿ ಮತ ಹಾಕಿದರು. ಇಂತಹ ಪರಿಸ್ಥಿತಿಯಲ್ಲಿ ನಾವು ಚುನಾವಣೆಗೆ ಹೋದರೆ ಏನಾಗುತ್ತದೆ? ರಾಜ್ಯದ ಜನರನ್ನು ಉಳಿಸಲು ಯಾರೇ ಸರಕಾರ ರಚನೆ ಮಾಡಿದರು ನಾವು ಸಪೋರ್ಟ್ ಮಾಡ್ತೀವಿ. ಆದರೆ ಪರಿಹಾರ ನಾನು ಹೇಳಿದ ರೀತಿ ಆಗಬೇಕು ಅಷ್ಟೇ. ಯಡಿಯೂರಪ್ಪನೇ ಆಗ್ಲಿ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ. ನಮಗೇನು ಅಭ್ಯಂತರವಿಲ್ಲ ಎಂದರು. ರಾಷ್ಟ್ರಪತಿ ಆಡಳಿತ ಬಂದರೆ ನೆರೆ ಸಂತ್ರಸ್ತರು ಏನಾಗಬೇಕು? ಅದನ್ನು ಊಹೆ ಮಾಡಿಕೊಳ್ಳಲು ಸಾಧ್ಯವೇ? ಹೀಗಾಗಿ ಸರಕಾರ ಮುಂದೂವರೆಯಲು ನಾನು ಸಾಥ್ ಕೊಡ್ತೀನಿ ಅಂತ ಹೇಳಿದೆ. 2006ರಲ್ಲಿ ದೇವೇಗೌಡರ ಮಾತಿಗೆ ವಿರುದ್ಧ ನಡೆದುಕೊಂಡೆ. 20-20 ತಿಂಗಳ ಸರಕಾರದಲ್ಲಿ ಅಧಿಕಾರ ಬಿಟ್ಟು ಕೊಡಲು ನಾನು ಹಿಂದೇಟು ಹಾಕಲಿಲ್ಲ. ಅದು ಬಿಟ್ರೆ ಇವತ್ತಿನವರೆಗೂ ನಮ್ಮ ತಂದೆಯ ವಿರುದ್ಧ ನಾನು ಎಂದೂ ನಡೆದಿಲ್ಲ. ತಂದೆಯ ಆದೇಶದಂತೆ ನಾನು ನಡೆದು ಕೊಂಡಿದ್ದೇನೆ. 2009, 2014, 2019ರ ಪ್ರಮುಖ ಘಟನೆಗಳಲ್ಲಿ ನಮ್ಮ ತಂದೆ ಮಾತಿಗೆ ವಿರುದ್ಧ ನಡೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. 15 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಜೆಡಿಎಸ್‌ ಸ್ಪರ್ಧಿಸಲಿದೆ. ನಾವು ಯಾರ ಜತೆಯೂ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಶಾಸಕರು ಮತ್ತು ಪರಿಷತ್ ಸದಸ್ಯರ ಅಸಮಾಧಾನ ಬಗ್ಗೆ ಗೊತ್ತಿಲ್ಲ. ನನ್ನ ಬಳಿ ಬಂದು ಯಾರು ಚರ್ಚೆ ಮಾಡಿಲ್ಲ. ಬಳಿ ಬಂದು ರೋಗ ಏನು ಅಂತ ಹೇಳಿದ್ರೆ ಚಿಕಿತ್ಸೆ ಕೊಡಬಹುದು ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು. ಅಪ್ಪ ಮಕ್ಕಳನ್ನ ಮುಗಿಸುವ ಹೇಳಿಕೆ ಸರಿಪಡಿಸಿಕೊಳ್ತೀನಿ ಅಂತ ಬಿಎಸ್ವೈ ಹೇಳಿಕೆ ವಿಚಾರ ಸಂಬಂಧಿಸಿ ಪ್ರತಿಕ್ರಿಯಿಸಿದ ಕುಮಾಸ್ವಾಮಿ, ರಾಜಕಾರಣದಲ್ಲಿ ಕೆಲವೊಂದು ಮಾತು ಬರುತ್ತವೆ. ಅದನ್ನ ಸರಿಪಡಿಸಿಕೊಳ್ತೀನಿ ಅಂತ ಹೇಳಿರುವುದು ಒಳ್ಳೆಯದು, ಸಂತೋಷ ಎಂದರು. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜ್ ಕೊಟ್ಟಿದ್ದು ದೊಡ್ಡ ರಾಜಕೀಯ ಆಗುತ್ತಿದೆ. ಇದು ಸಿದ್ದರಾಮಯ್ಯ ಕಾಲದಲ್ಲಿ ಆದ ನಿರ್ಧಾರ. ಆದರೆ ಇದಕ್ಕಾಗಿ ದುಡ್ಡು ಇಟ್ಟಿರಲಿಲ್ಲ. ಕನಕಪುರ, ಚಿಕ್ಕಬಳ್ಳಾಪುರ ಎರಡು ಕಡೆ ಮೆಡಿಕಲ್ ಕಾಲೇಜ್ ಮಾಡಲಿ. ಸಿದ್ದರಾಮಯ್ಯ 15 ಕ್ಷೇತ್ರಗಳಲ್ಲಿ ಗೆದ್ದರೆ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್ ಪರಿಸ್ಥಿತಿ ಏನಾಗುತ್ತೆ? ಎಲೆಕ್ಷನ್‌ಗಾಗಿ ಗುದ್ದಲಿ ಪೂಜೆ ಮಾಡಿದ್ದಂತೆ ಆಗುತ್ತದೆ. ಸಿದ್ದರಾಮಯ್ಯ ಐದು ವರ್ಷದಲ್ಲಿ ಕಟ್ಟಿದ ಮನೆಗಳು ಇನ್ನೂ ಪೂರ್ಣ ಆಗಿಲ್ಲ. ನಾನು ಸಿಎಂ ಆಗಿದ್ದಾಗ ಒಂದು ಮನೆ ಕೊಡಲಿಲ್ಲ. ಸಿದ್ದರಾಮಯ್ಯ ಕೊಟ್ಟ ಮನೆಗಳಿಗೆ ಹಣ ಕೊಟ್ಟೆ ಎಂದು ಕುಮಾರಸ್ವಾಮಿ ಹೇಳಿದರು.


from India & World News in Kannada | VK Polls https://ift.tt/36oE88W

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...