ಆರ್‌ಸಿಬಿ ತಂಡಕ್ಕೆ ಬೇಡವಾದ ಬೆಂಗಳೂರು, ತಿರುಗಿಬಿದ್ದ ಅಭಿಮಾನಿಗಳು!

ಬೆಂಗಳೂರು: ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಈವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ ಎಂದು ಉಳಿದೆಲ್ಲಾ ಫ್ರಾಂಚೈಸಿ ತಂಡಗಳ ಅಭಿಮಾನಿಗಳು ಹೀಯಾಳಿಸಿದಾಗ ಬೆಂಬಲಕ್ಕೆ ನಿಂತಿದ್ದು ತಂಡದ ಅಪ್ಪಟ ಅಭಿಮಾನಿಗಳು ಎಂದರೆ ತಪ್ಪಾಗಲಾರದು. ಆದರೀಗ ಆರ್‌ಸಿಬಿ ವಿರುದ್ಧ ಆರ್‌ಸಿಬಿ ಅಭಿಮಾನಿಗಳೇ ತಿರುಗಿ ಬಿದ್ದಿದ್ದಾರೆ. ಫ್ರಾಂಚೈಸಿ ತಂಡ ಮಾಡಿರುವ ಎಡಟ್ಟಿಗೆ ಅಭಿಮಾನಿಗಳು ಫುಲ್‌ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ ತಂಡವನ್ನು ಬೆಂಬಲಿಸುವುದನ್ನೇ ನಿಲ್ಲಿಸಿಬಿಡುವ ಬೆದರಿಕೆಯನ್ನೂ ಹಾಕಿದ್ದಾರೆ. ಅಂದಹಾಗೆ ಆರ್‌ಸಿಬಿ ಮಾಡಿಕೊಂಡ ಎಡವಟ್ಟಾದರೂ ಏನು? ಎಂಬ ಪ್ರಶ್ನೆ ಸಹಜ. ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬೆಂಗಳೂರು ಪದದ ಕೈಬಿಟ್ಟು ಕೇವಲ ರಾಯಲ್‌ ಚಾಲೆಂಜರ್ಸ್‌ ಎಂದು ಬದಲಾವಣೆ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಫ್ರಾಂಚೈಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಮ್ಮ ತಂಡದ ಹೆಸರು. ರಾಯಲ್‌ ಚಾಲೆಂಜರ್ಸ್‌ ಅಲ್ಲ. ಮೊದಲು ಬೆಂಗಳೂರು ಪದವನ್ನು ಸೇರಿಸಿ ಇಲ್ಲವಾದರೆ ಇದರ ಪರಿಣಾಮ ಬೇರೆಯದ್ದಾಗಿರುಯತ್ತದೆ ಎಂದು ಟ್ವಿಟರ್‌ನಲ್ಲಿ ಆರ್‌ಸಿಬಿ ಫ್ಯಾನ್ಸ್‌ ರಣ ಕಹಳೆ ಊದಿದ್ದಾರೆ. ಮತ್ತೂ ಕೆಲ ಅಭಿಮಾನಿಗಳು ತಮ್ಮ ಟ್ವೀಟ್‌ನಲ್ಲಿ ತಾವು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿರುವುದು ಅದರಲ್ಲಿ ಬೆಂಗಳೂರು ಎಂಬ ಪದವಿದೆ ಎಂಬ ಕಾರಣಕ್ಕೆ ಮಾತ್ರ. ಬರೀ ರಾಯಲ್‌ ಚಾಲೆಂಜರ್ಸ್‌ ಎಂದಾದರೆ ಈ ತಂಡ ನಮಗೆ ಬೇಡವೇ ಬೇಡ. ಇಂತಹ ಕೆಲಸ ಮಾಡಿದ್ದಕ್ಕೆ ನಾಚಿಕೆಯಾಗಬೇಕು ನಿಮಗೆ ಎಂದೆಲ್ಲಾ ಕಿಡಿ ಕಾರಿದ್ದಾರೆ. ಬೆಂಗಳೂರು ಎಫ್‌ಸಿ ನೋಡಿ ಕಲಿತುಕೊಳ್ಳಿ "ನಮ್ಮ ನಾಡು ನಮ್ಮ ಜಲ ನಮ್ಮ ಊರು ನಮ್ಮ ಜನ ನಮ್ಮ #Karnataka ನಮ್ಮ ಹೆಮ್ಮೆ, ಬೆಂಗಳೂರು ಎಂಬ ಬ್ರಾಂಡ್‌ ಸಲುವಾಗಿ ಅಷ್ಟೇ ನಾವು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದೇವೆ. ಬೆಂಗಳೂರು ಇಲ್ಲ ಅಂದರೆ ಆರ್‌ಸಿಬಿ ಇಲ್ಲ. ಬೆಂಗಳೂರು ಎಫಸಿ ನೋಡಿ ಕಲಿತುಕೊಳ್ಳಿ," ಎಂದು ಮತ್ತೊಬ್ಬ ಅಭಿಮಾನಿ ಆರ್‌ಸಿಬಿಗೆ ಪಾಠ ಹೇಳಿಕೊಟ್ಟಿದ್ದಾರೆ. ಆರ್‌ಸಿಬಿ ವಿರುದ್ಧ ಹರಿದಾಡುತ್ತಿದೆ ಮೆಮ್ಸ್‌"ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ ನಾವು ನಿಮ್ಮನ್ನು ಇಷ್ಟಪಡಲು ಕಾರಣ,ನಿಮ್ಮೊಳ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು,ಸೂರು,ಕ್ರೀಡಾಂಗಣ&ನೀವೆ ಆಗಿದ್ದ "ಬೆಂಗಳೂರು" ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗಂತು ಇರುತ್ತೇವೆ." ಎಂದು ಅಭಿಮಾನಿಯೊಬ್ಬ ಆರ್‌ಸಿಬಿಗೆ ಸಂದೇಶ ಬರೆದಿದ್ದಾನೆ. ಇನ್ನು ಮತ್ತೂ ಕೆಲ ಅಭಿಮಾನಿಗಳು ಆರ್‌ಸಿಬಿ ಟ್ವಿಟರ್‌ ನಿರ್ವಹಿಸುತ್ತಿರುವ ಅಡ್ಮಿನ್‌ಗೆ ತಲೆ ಇಲ್ಲ. ಆತ ಬೆಂಗಳೂರು ಎಫ್‌ಸಿ ತಂಡದ ಅಡ್ಮಿನ್‌ನ ನೋಡಿ ಕಲಿತುಕೊಳ್ಳಬೇಕು ಎಂದೆಲ್ಲಾ ಬುದ್ದಿವಾದ ಹೇಳಿದ್ದಾರೆ. ಐಪಿಎಲ್‌ನ 2020ರ ಆವೃತ್ತಿ ಸಲುವಾಗಿ ಆರ್‌ಸಿಬಿ ತಾನು ಉಳಿಸಿಕೊಂಡ ಆಟಗಾರರು ಮತ್ತು ಬಿಟ್ಟುಕೊಟ್ಟ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಹೊಸ ಆಟಗಾರರ ಖರೀದಿಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಹೆಸರು ಬದಲಾವಣೆಯ ಎಡವಟ್ಟು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2DnVgi1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...