ಬೆಂಗಳೂರು: ನಾನು ಸರಕಾರಕ್ಕೆ ಸಲಹೆ ಕೊಟ್ಟರೆ ಅವರು ಬಿಜೆಪಿ ಮೇಲೆ ಸಾಫ್ಟ್ ಕರ್ನರ್ ತೋರಿಸುತ್ತಾರೆ ಎನ್ನುತ್ತಾರೆ. ನಾನು ಸರಕಾರಕ್ಕೆ ಸಲಹೆ ಕೊಟ್ಟಿದ್ದೇನೆ. ಇದಕ್ಕೆ ಬಿಜೆಪಿ ಜತೆ ಕುಮಾರಸ್ವಾಮಿ ಹೋಗುತ್ತಾರೆ, ಐಎಂಎ ಮತ್ತು ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಸಂಕಷ್ಟ ಆಗುತ್ತಿದೆ. ಹೀಗಾಗಿ ಬಿಜೆಪಿ ಜತೆ ಸಾಫ್ಟ್ ಕರ್ನರ್ ವ್ಯಕ್ತಪಡಿಸುತ್ತಿದ್ದಾರೆ ಎಂದೆಲ್ಲಾ ಸುದ್ದಿ ಮಾಡುತ್ತಾರೆ ಎಂದು ಕುಮಾರಸ್ವಾಮಿ ಬೇಸರಿಸಿದರು. ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಸಂವಾದ ನಡೆಸಿದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಅವರ ತಪ್ಪುಗಳನ್ನು ಹುಡುಕುತ್ತಿಲ್ಲ ಎಂಬುದು ತಪ್ಪು. ಕುಮಾರಸ್ವಾಮಿ ಹಿಟ್ ಅಂಡ್ ಎಂದೆಲ್ಲ ಹೇಳುವುದು ತಪ್ಪು. ಸಂವಿಧಾನ ಕೊಟ್ಟಿರುವ ಅಂಗಗಳು ವಿಷಯ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇದು ನನ್ನ ಅನುಭವಕ್ಕೆ ಬಂದಿದೆ ಎಂದರು. ಬೆಳಗಾವಿಯಲ್ಲಿ ಪರಿಸ್ಥಿತಿ ಬಗ್ಗೆ ಹೇಳಿದ್ದೇನೆ. ಆದರೆ ಸರಕಾರದ ಬಗ್ಗೆ ಸಾಫ್ಟ್ ಕರ್ನರ್ ಮಾತು ಹೇಳಿಲ್ಲ. ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಸಿದ್ದರಾಮಯ್ಯ ಅವರ ರೀತಿ ಸರಕಾರದ ವಿರುದ್ಧ ಆಟ್ಯಾಕ್ ಮಾಡಲ್ಲ. ಕೆಲಸ ಆಗಬೇಕು ಎಂದು ಆಟ್ಯಾಕ್ ಮಾಡುವುದರಿಂದ ಮಾಧ್ಯಮದವರಿಗೆ ಸ್ಟೋರಿ ಆಗಬಹುದು ಅಷ್ಟೇ. ಹೀಗಾಗಿ ನಾನು ಸಿದ್ದರಾಮಯ್ಯ ರೀತಿ ಆಟ್ಯಾಕ್ ಮಾಡಲ್ಲ. ನಾನು ಅಂಕಿಅಂಶಗಳನ್ನು ಇಟ್ಟುಕೊಂಡು ಮಾತನಾಡುತ್ತೇನೆ. ಜಾಹೀರಾತು ಸರಕಾರ ಆಗುವುದು ಬೇಡ. ನೇಕಾರರಿಗೆ ಅನುಕೂಲ ಆಗಿರುವುದು ಹೇಳಿ. ಮೀನುಗಾರರ ಕೈ ಸೇರಿದಿಯಾ ಹೇಳಿ. ಸಿದ್ದರಾಮಯ್ಯ ಕಾಲದಲ್ಲಿ ನೇಕಾರರ ಸಾಲ ಮನ್ನ ಆಯ್ತು. ಸಮ್ಮಿಶ್ರ ಸರಕಾರದಲ್ಲಿ ಟೆಕ್ನಿಕಲ್ ಸಮಸ್ಯೆ ಎಂದರು. ಅದನ್ನ ಬಗೆಹರಿಸಿ ಅಂತ ಹೇಳಿದೆ. ಆ ಮೇಲೆ ದುಡ್ಡು ರಿಲೀಸ್ ಆಯ್ತು. ಇದು ಬಿಜೆಪಿ ಸರಕಾರದ ಸಾಧನೆ ಅಲ್ಲ. ಬಿಜೆಪಿ ಸರಕಾರ ಸುಳ್ಳು ಹೇಳುತ್ತಿದೆ. ಬೆಲೆ ನಾಶವಾಗಿರುವ ರೈತ ರಿಕವರಿ ಆಗಲೂ ಎರಡು ವರ್ಷ ಬೇಕು. ಕಬ್ಬಿನ ಗದ್ದೆಗಳಲ್ಲಿ ನೀರು ನಿಂತುಕೊಂಡಿದೆ. 25 ಸಾವಿರ ರೂ. ಪರಿಹಾರ ಕೊಟ್ಟರೆ ಏನು ಪ್ರಯೋಜನ ಇಲ್ಲ. ಸರಕಾರದಲ್ಲಿ ಹಣ ಇಲ್ಲ ಎನ್ನುತ್ತಿದ್ದಾರೆ. ಇದು ಸುಳ್ಳು. 40-50 ಸಾವಿರ ರೂ. ಪರಿಹಾರ ಕೊಡಲು ಸರಕಾರದಲ್ಲಿ ಹಣ ಇದೆ. ಸಾಲಮನ್ನ ಕಾರ್ಯಕ್ರಮಕ್ಕೆ ಕೆಲ ಕಡೆ ತೆರಿಗೆ ಹೆಚ್ಚಿಗೆ ಮಾಡಿದ್ದೇನೆ. ಇದು ಜನಸಾಮಾನ್ಯರಿಗೆ ಸಮಸ್ಯೆ ಆಗದ ರೀತಿಯಲ್ಲಿ ಏರಿಕೆ ಮಾಡಿದ್ದೇನೆ. ಇಂದು ಸಹ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲಮನ್ನ ಆಗಿಲ್ಲವೆಂದು ಮಾಹಿತಿ ಕೊಡುತ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದರು. ಜೆಡಿಎಸ್ ಪಕ್ಷವನ್ನು ಯಾರು ಕೂಡ ಬಿಟ್ಟು ಹೋಗುವುದಿಲ್ಲ. ಎಲ್ಲ ಶಾಸಕರು ನಮ್ಮ ಜತೆಗೆ ಇದ್ದಾರೆ. ಕುಮಾರಸ್ವಾಮಿ ವಿರುದ್ಧ ಮುನಿಸುಕೊಂಡಿರುವವರು ಯಾರು ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
from India & World News in Kannada | VK Polls https://ift.tt/323iyn2