ನಾಲ್ಕೇ ದಿನದಲ್ಲಿ 4 ಕಿಮೀ ರಸ್ತೆ ದುರಸ್ತಿ ಮಾಡಿದ ಬಿಬಿಎಂಪಿ : ಉಳಿದ ರಸ್ತೆಗಳನ್ನೂ ಸರಿಪಡಿಸಿ ಎಂದ ಬೆಂಗಳೂರಿಗರು

ಬೆಂಗಳೂರು: ನಾಲ್ಕೇ ದಿನದಲ್ಲಿ ನಾಲ್ಕು ಕಿಲೋಮೀಟರ್‌ ರಸ್ತೆ ದುರಸ್ತಿ ಮಾಡಿರುವುದಾಗಿ ಬೃಹತ್‌ ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಸಾಧನೆಯನ್ನು ಹೇಳಿಕೊಂಡಿದೆ. ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಸೇಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ ಪೂರ್ಣ ಹಾಳಾಗಿದ್ದ ನಾಲ್ಕು ಕಿಲೋಮೀಟರ್‌ ಉದ್ದದ ರಸ್ತೆಯನ್ನು ತ್ವರಿತವಾಗಿ ದುರಸ್ತಿ ಮಾಡಲಾಗಿದ್ದು, ನಾಲ್ಕು ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಶನಿವಾರ ಟ್ವೀಟ್‌ ಮಾಡಿದೆ. ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ ಕುಮಾರ್‌ ಈ ಕುರಿತು ಫೋಟೋ ಸಮೇತ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ಗೆ ಪ್ರಶಂಸೆ ಹಾಗೂ ಟೀಕೆಗಳೆರಡೂ ವ್ಯಕ್ತವಾಗಿವೆ. ಬೆಂಗಳೂರಿನ ಬಹುಪಾಲು ರಸ್ತೆಗಳು ಹಾಳಾಗಿದ್ದು, ಇದೇ ಮಾದರಿಯಲ್ಲಿ ತ್ವರಿತವಾಗಿ ದುರಸ್ತಿ ಮಾಡುವಂತೆ ಹಲವಾರು ಬೆಂಗಳೂರಿಗರು ಕೋರಿಕೊಂಡಿದ್ದಾರೆ. ಹೆಚ್ಚು ವಾಹನ ದಟ್ಟಣೆಯಿಂದ ಕೂಡಿರುವ ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಸೇಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವಿನ 4 ಕಿಮೀ ರಸ್ತೆಯ ಕಾರ್ಯವನ್ನು 4 ದಿನದಲ್ಲಿ ಪೂರ್ಣಗೊಳಿಸುವುದು ಸುಲಭದ ಕಾರ್ಯವಾಗಿರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಬಿಬಿಎಂಪಿ ತಂಡ 4 ದಿನದಲ್ಲಿ ಪೂರೈಸಿದೆ. ಇದರ ಯಶಸ್ಸಿ ಬಿಬಿಎಂಪಿ ತಂಡಕ್ಕೆ ಸಲ್ಲಬೇಕಿದೆ ಎಂದು ಅನಿಲ್‌ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಇದರೊಟ್ಟಿಗೆ ಹಲವಾರು ಜನ ಇತರೆ ಹಾಳಾಗಿರುವ ರಸ್ತೆಗಳನ್ನೂ ದುರಸ್ತಿ ಮಾಡುವಂತೆ ಟ್ವಿಟ್ಟರ್‌ನಲ್ಲೇ ಕೋರಿಕೊಂಡಿದ್ದಾರೆ. ಧೀರಜ್‌ ಶೆಟ್ಟಿಗಾರ್ ಎಂಬುವವರು 'ಬಿಟಿಎಂ ಲೇಔಟ್‌ ಲೇಕ್‌ ರೋಡ್‌ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಈ ಕುರಿತು ಗಮನಹರಿಸಿ' ಎಂದು ಕೇಳಿಕೊಂಡಿದ್ದಾರೆ. ಬೆಂಗಳೂರಿನ ಮತ್ತೊಬ್ಬ ನಿವಾಸಿ ಅನಿರುದ್ಧ್ ಎಂಬುವವರು ಬಿಬಿಎಂ ಕಾರ್ಯವನ್ನು ಮೆಚ್ಚಿಕೊಂಡಿದ್ದು, ಬನ್ನೇರಘಟ್ಟ ರಸ್ತೆಯಲ್ಲೂ ಇದೇ ಮಾದರಿಯ ಕಾರ್ಯ ಕೈಗೊಳ್ಳಿ ಎಂದಿದ್ದಾರೆ. ರಮೇಶ್ ಸಿಂಗ್‌ ಮತ್ತು ಅಭಿಷೇಕ್‌ ಕುಮಾರ್‌ ಎಂಬುವವರು ಬೆಂಗಳೂರಿನಲ್ಲಿ ಧೂಳಿನಿಂದಾಗುವ ಮಾಲಿನ್ಯವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೋರಿಕೊಂಡಿದ್ದಾರೆ. ಜಯದೇವ್‌ ಫ್ಲೈಓವರ್‌ ಮತ್ತು ಸಿಲ್ಕ್ ಬೋರ್ಡ್‌ ನಡುವೆ ಉಸಿರಾಡಲು ಆಗದಷ್ಟು ಧೂಳಿನ ಮಾಲಿನ್ಯವಿದೆ. ಈ ಧೂಳು ಕುಡಿದು ಸಾಯುವಂತಾಗಿದೆ ಜನರ ಸ್ಥಿತಿ ಎಂದು ಬಿಬಿಎಂಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.


from India & World News in Kannada | VK Polls https://ift.tt/34gWiIn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...