IPL 2020: ಚಾಂಪಿಯನ್ ಯುವರಾಜ್ ಸಿಂಗ್‌ಗಾಗಿ ಕೆಕೆಆರ್ ಬಿಡ್ ಸಲ್ಲಿಸಲಿದೆಯೇ?

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಆವೃತ್ತಿಯಲ್ಲಿ ಭಾರತದ ವಿಶ್ವಕಪ್ ವಿಜೇತ ಹೀರೊ , ಕೋಲ್ಕೊತಾ ನೈಟ್ ರೈಡರ್ಸ್ ಪರ ಆಡಲಿದ್ದಾರೆಯೇ? ಹೌದು, ಇಂತಹದೊಂದು ಸಂಶಯ ಹುಟ್ಟಿಕೊಳ್ಳುವುದು ಸಹಜ. ಸಿಇಒ ವೆಂಕಿ ಮೈಸೂರು ಅವರ ಟ್ವೀಟ್‌ನಿಂದ ಇಂತಹದೊಂದು ಗೊಂದಲ ಉಂಟಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗಾಗಿನ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ನಡೆಯಲಿದೆ. ಇದರಂತೆ ಎಲ್ಲ ಎಂಡಗಳು ತಮಗೆ ಬೇಡವಾದ ಆಟಗಾರರನ್ನು ಬಿಡುಗಡೆಗೊಳಿಸಿದೆ. ಈ ನಡುವೆ ಕೋಲ್ಕೊತಾ ನೈಟ್ ರೈಡರ್ಸ್ ತಂಡವು, ಹೊಡೆಬಡಿಯ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್‌ರನ್ನು ಕೈಬಿಟ್ಟಿತ್ತು. ಇದು ಮಾಜಿ ಬ್ಯಾಟಿಂಗ್ ಹೀರೊ ಯುವರಾಜ್ ಸಿಂಗ್ ಸೇರಿದಂತೆ ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ಈ ಬಗ್ಗೆ ಕೆಕೆಆರ್ ಮಾಲಿಕ ಶಾರೂಕ್ ಖಾನ್‌ಗೆ ತಾವು ಮೆಸೇಜ್ ಮಾಡುವುದಾಗಿ ಯುವಿ ತಿಳಿಸಿದ್ದರು. ಇದಕ್ಕೀಗ ಕೆಕೆಆರ್ ಸಿಇಒ ವೆಂಕಿ ಮೈಸೂರು ಉತ್ತರ ನೀಡಿದ್ದಾರೆ. ಯುವಿ ಕಾಲೆಳೆದಿರುವ ವೆಂಕಿ ಮೈಸೂರು, ನಿಮ್ಮ ಮೇಲೆ ಬಿಡ್ ಸಲ್ಲಿಸುವ ಸಲುವಾಗಿ ಕ್ರಿಸ್ ಲಿನ್‌ರನ್ನು ಕೈಬಿಡಲಾಗಿದೆ ಎಂದಿದ್ದಾರೆ. ಮಾತು ಮುಂದುವರಿಸಿರುವ ವೆಂಕಿ, ನೀವಿಬ್ಬರು ಚಾಂಪಿಯನ್ ಆಟಗಾರರ ಮೇಲೆ ಪ್ರೀತಿ ಹಾಗೂ ಗೌರವವಿದೆ ಎಂದಿದ್ದಾರೆ. ಕ್ರಿಸ್ ಲಿನ್‌ರನ್ನು ಬಿಡುಗಡೆ ಮಾಡಿರುವುದು ಕೆಕೆಆರ್‌ನ ಅತ್ಯಂತ ಕೆಟ್ಟ ನಿರ್ಧಾರ ಎಂದು ಯುವಿ ಹೇಳಿಕೆ ನೀಡಿದ್ದರು. ಇದಕ್ಕೆ ಪುಷ್ಠಿ ನೀಡುವಂತೆಯೇ ಅಬುದಾಬಿ ಟಿ10 ಕ್ರಿಕೆಟ್‌ನಲ್ಲಿ ಮರಾಠಾ ಅರೇಬಿಯನ್ಸ್ ಪರ 30 ಎಸೆತಗಳಲ್ಲಿ 91 ರನ್ ಚಚ್ಚಿದ್ದರು. ಇದು ಟಿ10 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ನಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯುವಿ, ಇದು ಅವಿಶ್ವಸನೀಯ ಸಾಧನೆ ಎಂದು ಶ್ಲಾಘಿಸಿದ್ದಾರೆ. ಐಪಿಎಲ್‌ನಲ್ಲೇ ಲಿನ್ ಬ್ಯಾಟಿಂಗ್ ವೈಭವವನ್ನು ನೋಡಿದ್ದೇನೆ. ಕೆಕೆಆರ್‌ಗೆ ಬಿರುಸಿನ ಆರಂಭವನ್ನು ಒದಗಿಸಿದ್ದಾರೆ. ಅಂತಹ ಆಟಗಾರನನ್ನು ಏಕೆ ಉಳಿಸಿಲ್ಲ ನನಗೆ ಅರ್ಥವಾಗುತ್ತಿಲ್ಲ. ನನಗನಿಸುತ್ತದೆ ಇದೊಂದು ಕೆಟ್ಟ ನಿರ್ಧಾರ. ಎಸ್‌ಆರ್‌ಕೆಗೆ ಟೆಕ್ಸ್ಟ್ ಮಾಡಬೇಕು ಎಂದು ಹೇಳಿದ್ದರು. ಏತನ್ಮಧ್ಯೆ ಪ್ರತಿಕ್ರಿಯೆ ನೀಡಿರುವ ಕ್ರಿಸ್ ಲಿನ್, ಕೆಕೆಆರ್ ಫ್ರಾಂಚೈಸಿ ಕೈಬಿಟ್ಟಿರುವ ವಿಚಾರದಲ್ಲಿ ತಮ್ಮ ಮನಸ್ಸಿಗೆ ನೋವಾಗಿಲ್ಲ ಎಂದಿದ್ದಾರೆ. ಬಹುನಿರೀಕ್ಷಿತ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ಕೋಲ್ಕೊತಾದಲ್ಲಿ ನಡೆಯಲಿದೆ. ಇದರಂತೆ ಕೆಕೆಆರ್ 13 ಆಟಗಾರರನ್ನು ಬಿಡುಗಡೆಗೊಳಿಸಿದೆ. ನಿಮ್ಮ ಮಾಹಿತಿಗಾಗಿ, ಪ್ರಸಕ್ತ ಸಾಲಿನಲ್ಲಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಎಲ್ಲ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35mYvSr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...