ಗ್ವಾಂಜ್ಜು (ದಕ್ಷಿಣ ಕೊರಿಯಾ): ಪುರುಷರ ವಿಭಾಗದಲ್ಲಿ ವಿಶ್ವದ ನಂ.1 ಶ್ರೇಯಾಂಕ ಪಡೆದ ಮೊತ್ತ ಮೊದಲ ಭಾರತೀಯ ಎಂದೆನಿಸಿಕೊಂಡಿದ್ದ ಚಾಂಪಿಯನ್ ಆಟಗಾರ , ಇದೀಗ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಸಾಲು ಸಾಲಾಗಿ ಆರಂಭಿಕ ಸುತ್ತುಗಳಲ್ಲೇ ಮುಗ್ಗರಿಸುವ ಮೂಲಕ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸೋಲಿನ ಸರಮಾಲೆ ಎದುರಿಸಿದ್ದಾರೆ. ಇದೀಗ ಟೂರ್ನಿಯಲ್ಲೂ ಶ್ರೀಕಾಂತ್ ವೈಫಲ್ಯ ಎದುರಿಸಿದ್ದು, ಎರಡನೇ ಸುತ್ತಿನ ಪಂದ್ಯದಲ್ಲಿ ಇದೇ ಮೊದಲ ಬಾರಿ ತಮ್ಮೆದುರು ಸ್ಪರ್ಧಿಸಿದ ಜಪಾನ್ನ ಆಟಗಾರ ಕೆಂಟ ಸುನೆಯಾಮ ಎದುರು 14-21, 19-21 ಅಂತರದ ನೇರ ಗೇಮ್ಗಳ ಅಂತರದಲ್ಲಿ ಸೋಲುಂಡರು. ಟೂರ್ನಿಯಲ್ಲಿ 6ನೇ ಶ್ರೇಯಾಂಕ ಹೊಂದಿದ್ದ ಶ್ರೀಕಾಂತ್, ಶ್ರೇಯಾಂಕ ರಹಿತ ಆಟಗಾರನೆ ಎದುರು ಕೇವಲ 37 ನಿಮಿಷಗಳ ಅಂತರದಲ್ಲಿ ಸೋತು ಸುಣ್ಣವಾದರು. ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್ನ ಅನುಭವಿ ಆಟಗಾರ ವಿನ್ಸೆಂಟ್ ವಾಂಗ್ ವಿಂಕ್ ಕಿ ಎದುರು 21-18, 21-17 ಅಂತರದ ಗೇಮ್ಗಳ ಆಕರ್ಷಕ ಜಯ ದಾಖಲಿಸಿದ್ದ ಶ್ರೀಕಾಂತ್, ಎರಡನೇ ಸುತ್ತಿನಲ್ಲಿ ಮತ್ತೆ ವೈಫಲ್ಯದ ಹಾದಿ ತುಳಿದಿದ್ದಾರೆ. ಇದೇ ವರ್ಷ ಮಾರ್ಚ್ನಲ್ಲಿ ನಡೆದ ಇಂಡಿಯಾ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದನ್ನು ಬಿಟ್ಟರೆ ಉಳಿದಾವ ಟೂರ್ನಿಗಳಲ್ಲಿ ಶ್ರೀ ಯಶಸ್ಸು ಕಂಡಿಲ್ಲ. ಇದೇ ವೇಳೆ ಕೊರಿಯಾ ಅಂಗಣದಲ್ಲಿ ಭಾರತದ ಮತ್ತೊಬ್ಬ ಆಟಗಾರ ಕೂಡ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. ಅಂತಿಮ 16ರ ಘಟ್ಟದ ಪಂದ್ಯದಲ್ಲಿ ಸಮೀರ್ 19-21, 12-21 ಅಂತರದ ಗೇಮ್ಗಳಿಂದ ಆತಿಥೇಯ ದಕ್ಷಿಣ ಕೊರಿಯಾದ ಆಟಗಾರ ಕಿಮ್ ಡಾಂಗನ್ ಎದುರು ತಲೆ ಬಾಗಿದರು. ಮೊದಲ ಗೇಮ್ನಲ್ಲಿ ಭಾರತೀಯ ಆಟಗಾರ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರೂ, 2ನೇ ಗೇಮ್ನಲ್ಲಿ ದಣಿದಂತೆ ಕಂಡು ಸುಲಭವಾಗಿ ಸೋಲೊಪ್ಪಿಕೊಂಡರು. ಇದಕ್ಕೂ ಮುನ್ನ ಮಹಿಳಾ ಸಿಂಗಲ್ಸ್ನಲ್ಲೂ ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಸೋಲನುಭವಿಸಿದ್ದರು. ಸೈನಾ ಮತ್ತು ಪಿವಿ ಸಿಂಧೂ ಕೂಡ ಸತತ ಟೂರ್ನಿಗಳಲ್ಲಿ ಆರಂಭಿಕ ಹಂತಗಳಲ್ಲೇ ಸೋತು ನಿರ್ಗಮಿಸುತ್ತಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QL20OR