ಮಹಾರಾಷ್ಟ್ರದಲ್ಲಿ ಬಿಜೆಪಿ ಎಷ್ಟೇ ಆಪರೇಷನ್‌ ನಡೆಸಿದರೂ ಮ್ಯಾಜಿಕ್‌ ನಂಬರ್‌ ತಲುಪುವುದು ಕಷ್ಟ!

ಹೊಸದಿಲ್ಲಿ: ಮೂರು ವಾರಗಳಿಂದ ಭಾರಿ ರಾಜಕೀಯ ತಿರುವುಗಳಿಗೆ ಸಾಕ್ಷಿಯಾಗಿದ್ದ ಸರಕಾರ ರಚನೆಯ ಕಸರತ್ತು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, , ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿಕೂಟ ಸರಕಾರ ರಚನೆ ನಿಶ್ಚಿತವಾಗಿದೆ. ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಗುರುವಾರ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯು ಎನ್‌ಸಿಪಿ ಜತೆಗೂಡಿ ಶಿವಸೇನೆಗೆ ಬೆಂಬಲ ನೀಡಲು ಸಮ್ಮತಿ ಸೂಚಿಸಿದೆ. ಶುಕ್ರವಾರ ಮುಂಬಯಿಯಲ್ಲಿ ಮೂರೂ ಪಕ್ಷಗಳ ಮುಖಂಡರ ಸಭೆ ನಡೆಯಲಿದ್ದು, ಅಲ್ಲಿ ಮೈತ್ರಿಯ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ. ಮೂರೂ ಪಕ್ಷಗಳ ನಡುವೆ ಅಧಿಕಾರ ಹಂಚಿಕೆ ಸೂತ್ರ ಬಹುತೇಕ ಅಖೈರುಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಈ ಮೈತ್ರಿಕೂಟಕ್ಕೆ 'ಮಹಾ ವಿಕಾಸ ಅಘಾಡಿ' ಎಂದು ಹೆಸರಿಡುವ ಸಾಧ್ಯತೆ ಇದ್ದು, ಐದು ವರ್ಷಗಳವರೆಗೂ ಮುಖ್ಯಮಂತ್ರಿ ಸ್ಥಾನ ಶಿವಸೇನೆಗೆ ಬಿಟ್ಟುಕೊಡಲು ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಒಪ್ಪಿಗೆ ಸೂಚಿಸಿವೆ. ಈ ಎರಡೂ ಪಕ್ಷಗಳಿಗೆ ತಲಾ ಒಂದೊಂದು ಡಿಸಿಎಂ ಸ್ಥಾನ ಸಿಗಲಿದೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್‌ ಕಾರ್ಯಕಾರಿಣಿ ಬೆನ್ನಲ್ಲೇ ಪವಾರ್‌ ಅವರ ದಿಲ್ಲಿ ನಿವಾಸದಲ್ಲಿ ಮತ್ತೆ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಾಯಕರು ಸಭೆ ನಡೆಸಿ ಅಧಿಕಾರ ಹಂಚಿಕೆ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗಿದ್ದು, ಕನಿಷ್ಠ ಸಾಮಾನ್ಯ ಕಾರ್ಯಕ್ರಮದಡಿ ಮೂರೂ ಪಕ್ಷಗಳು ಸರಕಾರ ರಚಿಸಲಿವೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಘೋಷಿಸಿದ ದಿನವೇ ಅಧಿಕಾರ ಹಂಚಿಕೆ ಸೂತ್ರವನ್ನೂ ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚೌಹಾಣ್‌ ತಿಳಿಸಿದ್ದಾರೆ. ನ.30ರೊಳಗೆ ಸರಕಾರ ರಚನೆಜಾರ್ಖಂಡ್‌ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ನ. 30ರಂದು ನಡೆಯಲಿದ್ದು ಅಷ್ಟರೊಳಗೆ ಸರಕಾರ ರಚಿಸುವ ವಿಶ್ವಾಸವನ್ನು ಮೂರೂ ಪಕ್ಷಗಳು ವ್ಯಕ್ತಪಡಿಸಿವೆ. ಶನಿವಾರ ಮೂರೂ ಪಕ್ಷಗಳ ಶಾಸಕರ ಬೆಂಬಲ ಪತ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರಿಗೆ ನೀಡುವ ಸಾಧ್ಯತೆ ಇದೆ. ಸುಭದ್ರ ಸರಕಾರ ರಚಿಸುವುದು ಉದ್ದೇಶ. ಮೂರೂ ಪಕ್ಷಗಳ ಶಾಸಕರ ಬೆಂಬಲ ಇರುವ ಪತ್ರವನ್ನು ಶನಿವಾರ ರಾಜ್ಯಪಾಲರಿಗೆ ನೀಡುತ್ತೇವೆ. ನ.30ರೊಳಗೆ ಸರಕಾರ ರಚಿಸುತ್ತೇವೆ. - ಸಂಜಯ್‌ ರಾವತ್‌, ಶಿವಸೇನೆ ನಾಯಕ ಮಹಾರಾಷ್ಟ್ರದಲ್ಲಿ ಮೂರು ಭಿನ್ನ ಸಿದ್ಧಾಂತದ ಪಕ್ಷಗಳ ಸರಕಾರ ಹೊಸತನಕ್ಕೆ ಸಾಕ್ಷಿಯಾಗಲಿದೆ. ಮೂರೂ ಪಕ್ಷಗಳು ಮಾತುಕತೆ ಮೂಲಕ ಎಲ್ಲ ವಿಚಾರಗಳನ್ನು ಅಂತಿಮಗೊಳಿಸಿವೆ. - ಪೃಥ್ವಿರಾಜ್‌ ಚೌಹಾಣ್‌, ಕಾಂಗ್ರೆಸ್‌ ನಾಯಕ ಮುಂದೇನಾಗಬಹುದು?
  • ಅತಿ ಹೆಚ್ಚು ಸ್ಥಾನ ಗಳಿಸಿದರೂ ಮಹಾರಾಷ್ಟ್ರದಂತಹ ಪ್ರಮುಖ ರಾಜ್ಯದ ಅಧಿಕಾರ ಬಿಜೆಪಿ ಕೈ ತಪ್ಪಲಿದೆ.
  • ಶಿವಸೇನೆ, ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿ ಗಟ್ಟಿಗೊಂಡರೆ ಅವಧಿಪೂರ್ತಿ ಮಾಡುವ ಸಾಧ್ಯತೆಯೂ ಇದೆ.
  • ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಕೆಲಸ ಮಾಡುವುದರಿಂದ ಸಿದ್ಧಾಂತಗಳ ಭಿನ್ನತೆಯಿಂದ ತೊಂದರೆಯಾಗದು.
  • ಬಿಜೆಪಿ ಎಷ್ಟೇ ಆಪರೇಷನ್‌ ನಡೆಸಿದರೂ ಮ್ಯಾಜಿಕ್‌ ನಂಬರ್‌ ತಲುಪುವುದು ಕಷ್ಟ. ಹಾಗಾಗಿ ಸರಕಾರ ಭದ್ರವಿದ್ದೀತು.
  • ಆರ್ಥಿಕ ಕುಸಿತ, ಚುನಾವಣೆ ಹಿನ್ನಡೆಗಳಿಂದಾಗಿ ಬಿಜೆಪಿಯು ಸರಕಾರ ಉರುಳಿಸಲು ಮುಂದಾಗುವ ಸಾಧ್ಯತೆ ಕಡಿಮೆ.
  • ಒಂದೊಮ್ಮೆ ಮಧ್ಯಂತರ ಚುನಾವಣೆ ನಡೆದರೂ ಮಹಾಮೈತ್ರಿಯಿಂದಾಗಿ ಬಿಜೆಪಿಗೆ ಸುಲಭದ ತುತ್ತಲ್ಲ.
  • ದಕ್ಷಿಣ ಭಾರತದಲ್ಲಿಎನ್‌ಡಿಎ ವಿರುದ್ಧ ಹೋರಾಟಕ್ಕೆ ಮಹಾರಾಷ್ಟ್ರ ಮಾದರಿ ಹೊಸ ಅಸ್ತ್ರವಾದೀತು.


from India & World News in Kannada | VK Polls https://ift.tt/336tp08

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...