ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗನ ಫೇಸ್‌ಬುಕ್ ಪೋಸ್ಟ್ ವೈರಲ್! ಯತ್ನಾಳ್ ಜೊತೆಗಿನ ಮುಸುಕಿನ ಗುದ್ದಾಟ ಈಗ ಖುಲ್ಲಂಖುಲ್ಲಾ!

ವಿಜಯಪುರ: ‘ನನ್ನ ಜೀವಕ್ಕೆ ಅಪಾಯವಾದರೆ ಅದಕ್ಕೆ ಗಾಂಧಿವೃತ್ತ ಪಿಎಸ್‌ಐ ಶರಣಗೌಡ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾರಣ. ಅಪಾಯಕ್ಕಿಂತಾ ಮುಂಚೆಯೇ ನನಗೆ ನ್ಯಾಯ ಕಲ್ಪಿಸಬೇಕು’ ಹೀಗೆ ಹೇಳಿರೋದು ವಿಜಯಪುರದ ಕಾರ್ಯಕರ್ತ ಬಾಬು ಜಗದಾಳೆ. ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿರುವ ಬಾಬು ಜಗದಾಳೆ, ಮಾಜಿ ಸಚಿವ ಅವರ ಬೆಂಬಲಿಗ. ಈ , ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಬಿಜೆಪಿಯ ಆಂತರಿಕ ಕಚ್ಚಾಟ ಭುಗಿಲೆದ್ದಿದ್ದು, ಅಪ್ಪು ಪಟ್ಟಣಶೆಟ್ಟಿ ಹಾಗೂ ಯತ್ನಾಳ್ ಮಧ್ಯದ ಯುದ್ದ ಬೀದಿಗೆ ಬಂದಂತಾಗಿದೆ. ಅಪ್ಪು ಪಟ್ಟಣಶೆಟ್ಟಿ ಅವರ ಕಟ್ಟಾ ಬೆಂಬಲಿಗನಾಗಿರುವ ಬಾಬು ಜಗದಾಳೆ, ಫೇಸ್‌ಬುಕ್‌ನಲ್ಲಿ ಈ ತರಹದ ಪೋಸ್ಟ್ ಮಾಡಿ, ಜೀವ ರಕ್ಷಣೆ ಹಾಗೂ ನ್ಯಾಯಕ್ಕಾಗಿ ಅಂಗಲಾಚಿದ್ದಾನೆ. ಕೊನೆಗೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಫೇಸ್‌ಬುಕ್ ವಿಡಿಯೋ ಮಾಡಲು ಕಾರಣ ಏನು? ಹಾಲಿ ಶಾಸಕ ಬಸನಗೌಡ ಪಾಟೀಲ ವಿರುದ್ಧ ಹಾಗೂ ಅಪ್ಪು ಪಟ್ಟಣಶೆಟ್ಟಿ ಅವರ ಪರವಾಗಿ ಬಾಬು ಜಗದಾಳೆ ಆಗಾಗ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನ ಮಾಡುತ್ತಿದ್ದ. ಇದೇ ಕಾರಣಕ್ಕಾಗಿ ಗಾಂಧಿವೃತ್ತದ ಪಿಎಸ್‌ಐ ಶರಣಗೌಡ ಅವರು, ಶನಿವಾರ ರಾತ್ರಿ ಬಾಬು ಜಗದಾಳೆಯನ್ನು ಠಾಣೆಗೆ ಕರೆಯಿಸಿ, ವಿಚಾರಣೆ ನಡೆಸಿ ತಾಕೀತು ಮಾಡಿದ್ದರು. ಅದಾದ ಬಳಿಕಈ ರೀತಿ ಒಕ್ಕಣಿಯುಳ್ಳ ಫೇಸ್‌ಬುಕ್ ವಿಡಿಯೋ ಪೋಸ್ಟ್ ಮಾಡಿದ್ದಾನೆ ಬಾಬು ಜಗದಾಳೆ. ಒಕ್ಕಣಿಕೆಯಲ್ಲಿ ಏನೇನಿದೆ? ಜನರು ನಿನಗೆ ಆಕ್ಸಿಡೆಂಟ್ ಮಾಡುವ ಪ್ಲ್ಯಾನ್‌ ಮಾಡ್ತಿದ್ದಾರೆ. ನಾಳೆ ನಿನ್ನ ಹೆಣ ಎತ್ಕೊಂಡು ಪ್ರತಿಭಟನೆ ಮಾಡ್ತಾರೆ. ಆಮೇಲೆ ಮನೆಗೆ ಹೋಗಿ ಮಲಗಿಕೊಳ್ತಾರೆ ಎಂದು ಪಿಎಸ್‌ಐ ಹೇಳಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇಸ್‌ನಡಿ ನನ್ನನ್ನು ಠಾಣೆಗೆ ಕರೆತಂದಿದ್ದ ಪಿಎಸ್‌ಐ ಶರಣಗೌಡ, ನೀ ಯಾರಿಗೆ ಹುಟ್ಟಿದಿ ಎಂದು ಪ್ರಶ್ನಿಸುತ್ತಲೇ ನನಗೆ ಹುಚ್ಚು ನಾಯಿಗೆ ಹೊಡೆದಂಗೆ ಹೊಡೆದರು ಎಂದು ಬಾಬು ಜಗದಾಳೆ ಹೇಳಿದ್ದಾನೆ. ಈ ಪ್ರಕರಣದೊಂದಿಗೆ ಯತ್ನಾಳ್ ಹಾಗೂ ಅಪ್ಪು ಮಧ್ಯದ ಶೀತಲ ಸಮರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೆ ನೋಡಿದ್ರೆ, ಬಾಬು ಜಗದಾಳೆ ರಾದ್ಧಾಂತ ಹೊಸದೇನಲ್ಲ. ಆತನ ವಿರುದ್ಧ 2018ರಲ್ಲಿ ಗಾಂಧಿವೃತ್ತ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಡಿದ ಅಮಲಿನಲ್ಲಿ ಈ ರೀತಿ ಪೋಸ್ಟ್ ಮಾಡುತ್ತಾನೆ. ಕರೆದು ವಿಚಾರಿಸಿದರೆ, ನನ್ನ ಬಳಿ ಸ್ಮಾರ್ಟ್‌ ಇಲ್ಲ. ನನ್ನ ಹೆಸರಿಗೆ ಮಸಿ ಬಳಿಯಲು ಯಾರೋ ನನ್ನ ಹೆಸರಿನ ನಕಲಿ ಖಾತೆ ತೆರೆದು ಈ ರೀತಿ ಮಾಡುತ್ತಾರೆ ಎಂದು ಸಬೂಬು ಹೇಳುತ್ತಾನೆ ಎಂದು ಪೊಲೀಸರು ಹೇಳುತ್ತಾರೆ. ‘ನಾನು ಸುಮ್ಮನಿರಲ್ಲ’: ಅಪ್ಪು ಪಟ್ಟಣಶೆಟ್ಟಿ ವಾರ್ನಿಂಗ್! ಅಧಿಕಾರವಿದೆ ಅನ್ನೋ ಕಾರಣಕ್ಕೆ ನಮ್ಮ ಬೆಂಬಲಿಗರ ಮೇಲೆ ಹಲ್ಲೆ ಮಾಡಿದರೆ ನಾನು ಸುಮ್ಮನಿರಲ್ಲ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕಿಡಿಕಾರಿದ್ದಾರೆ. ಪೊಲೀಸರ ಚಿತ್ರಹಿಂಸೆಗೆ ನಮ್ಮ ಕಾರ್ಯಕರ್ತರು ಹೆದರಲ್ಲ, ಅವರೆಲ್ಲ ಗಟ್ಟಿಯಾಗಿದ್ದಾರೆ ಎಂದು ಹೇಳಿರುವ ಅಪ್ಪು ಪಟ್ಟಣಶೆಟ್ಟಿ, ಗಾಂಧಿ ವೃತ್ತ ಪೊಲೀಸ್ ಠಾಣೆಯ ಪಿಎಸ್‌ಐ ಶರಣಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ.


from India & World News in Kannada | VK Polls https://ift.tt/32h8dEk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...