ಕೆರಳಿದ ಕುರುಬ ಸಮುದಾಯ: ಮಾಧುಸ್ವಾಮಿ ಮತ್ತು ಶ್ರೀಈಶ್ವರಾನಂದಪುರಿ ಸ್ವಾಮೀಜಿ ನಡುವೆ ನಡೆದಿದ್ದೇನು?

ಹೊಸದುರ್ಗ: 'ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಭೆಯಲ್ಲಿ ಉದ್ಧಟತನ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಂಡಿದ್ದು ಸತ್ಯ. ಅದನ್ನು ನಾವು ಸಭೆಯಲ್ಲೇ ವಿರೋಧಿಸಿ ಹೊರ ನಡೆದೆವು' ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ. ರಾಜ್ಯದಲ್ಲಿ ಕುರುಬ ಸಮಾಜದಿಂದ ನಡೆಯುತ್ತಿರುವ ಪ್ರತಿಭಟನೆ ಕುರಿತು ವಿಜಯ ಕರ್ನಾಟಕದೊಂದಿಗೆ ಬುಧವಾರ ಶ್ರೀಗಳು ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ವೃತ್ತವೊಂದಕ್ಕೆ ಹಾಕಲಾಗಿದ್ದ ಕನಕದಾಸರ ಹೆಸರಿನ ನಾಮಫಲಕ ತೆರವುಗೊಳಿಸಿದ್ದರ ಹಿನ್ನೆಲೆಯಲ್ಲಿ ಪಟ್ಟಣದಲ್ಲಿಎರಡು ಗುಂಪುಗಳ ಮಧ್ಯೆ ಉಂಟಾಗಿದ್ದ ಗೊಂದಲ ಬಗೆಹರಿಸಲು ಜಿಲ್ಲಾಡಳಿತ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ಕರೆದಿತ್ತು. ಸಭೆಯಲ್ಲಿ ಮಾತನಾಡಿದ ಸಚಿವರು, 'ಹುಳಿಯಾರಿನಲ್ಲಿ ಕನಕ ವೃತ್ತವೇ ಇರಲಿಲ್ಲ. ಕನಕ ವೃತ್ತವನ್ನು ಅನಧಿಕೃತವಾಗಿ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು. ಆಗ ಕನಕ ವೃತ್ತದ ಬಗ್ಗೆ ನಾವು ಮತ್ತು ಸಮಾಜದ ಮುಖಂಡರು ವಾಸ್ತವಾಂಶ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು. ಯಾರ ಮಾತು ಕೇಳದ ಸಚಿವರು, ನಿಮ್ಮ ಮಾತು ಕೇಳಲು ನಾನು ಇಲ್ಲಿಗೆ ಬಂದಿಲ್ಲ. ನಾನು ನಿಜ ಹೇಳುತ್ತೇನೋ, ಸುಳ್ಳು ಹೇಳುತ್ತೇನೋ ಅದನ್ನು ನೀವು ಕೇಳಬೇಕು' ಎಂದು ಏರು ಧ್ವನಿಯಲ್ಲಿ ಹೇಳಿದರು ಎಂದು ಶ್ರೀಗಳು ಅಂದಿನ ಘಟನೆ ವಿವರಿಸಿದರು. 'ನಾವುಗಳು ಮಧ್ಯಪ್ರವೇಶಿಸಿ ಸತ್ಯಾಂಶ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ ಸಚಿವರು ಸರ್ವಾಧಿಕಾರಿ ಧೋರಣೆಯಿಂದ ವರ್ತಿಸಿದರು. ನಮ್ಮ ಮಾತನ್ನು ಪರಿಗಣಿಸದ ಸಚಿವರು, ಕಾನೂನು ಹೋರಾಟ ಮಾಡುತ್ತೇನೆಂದು ಹೇಳಿದಾಗ ಸಭೆಯಲ್ಲಿ ಗೊಂದಲ ಉಂಟಾಗಿ ನಾವುಗಳು ಅಲ್ಲಿಂದ ನಿರ್ಗಮಿಸಿದೆವು' ಎಂದರು. 'ಸಚಿವರು ಎಂದಾಕ್ಷಣ ಅವರು ಹೇಗೆ ಬೇಕಾದರೂ ವರ್ತಿಸಬಹುದಾ, ಅವರು ಹೇಳಿದ್ದನ್ನೇ ಕೇಳಬೇಕಾ, ಸಮಾಜದ ಜನರ ಮಾತಿಗೆ ಬೆಲೆಯಿಲ್ಲವಾ, ಸ್ವಾಮೀಜಿಗಳೊಂದಿಗೆ, ಸಮಾಜದ ಜನರೊಂದಿಗೆ ಉದ್ಧಟತನದಿಂದ ವರ್ತಿಸುವುದು ಎಷ್ಟು ಸರಿ. ಸಚಿವರು ಏರು ಧ್ವನಿಯಲ್ಲಿ ಮಾತನಾಡಿದ್ದು ಸತ್ಯ, ಅವರು ನನ್ನನ್ನು ಏಕವಚನದಲ್ಲಿ ಎಲ್ಲಿಯೂ ಸಂಬೋಧಿಸಿಲ್ಲ. ಆದರೆ ಅವರ ವರ್ತನೆ ಸರಿಯಿರಲಿಲ್ಲ' ಎಂದು ವಿಜಯ ಕರ್ನಾಟಕಕ್ಕೆ ಸ್ಪಷ್ಟಪಡಿಸಿದರು. '2006ರಲ್ಲಿ ಕನಕ ವೃತ್ತ ಎಂದು ನಾಮಕರಣ ಮಾಡಿರುವ ಬಗ್ಗೆ ಅಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ದಾಖಲೆಯಿದೆ. ಅಲ್ಲಿನ ಮತ್ತೊಂದು ಸಮುದಾಯ ಅದೇ ವೃತ್ತಕ್ಕೆ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲು ಸಚಿವರ ಮೇಲೆ ಒತ್ತಡ ತಂದಿದ್ದಾರೆ. ಇದರಿಂದ ಈ ಘಟನೆ ನಡೆದಿದೆ. ನಮಗೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಯಾವುದೇ ಆಕ್ಷೇಪಣೆ ಇಲ್ಲ. ಮತ್ತೊಂದು ವೃತ್ತಕ್ಕೆ ಶ್ರೀಗಳ ಹೆಸರಿಡಲಿ' ಎಂದರು. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಈ ಮೊದಲೇ ಠರಾವು ಪಾಸು ಮಾಡಿರುವಂತೆಯೇ ಕನಕ ವೃತ್ತ ಎಂದು ಮರು ನಾಮಕರಣ ಮಾಡಬೇಕು. ಅಲ್ಲಿನ ಎರಡು ಸಮುದಾಯದವರೂ ಒಗ್ಗಟ್ಟಾಗಿ ಜೀವಿಸಲು ಶಾಂತಿ ಕಾಪಾಡಬೇಕು. - ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ ಹೊಸದುರ್ಗ ಇಂದು ಹಿಳಿಯಾರು ಬಂದ್‌ಸಚಿವ ಹೇಳಿಕೆ ಖಂಡಿಸಿ ಕುರುಬ ಸಮುದಾಯದ ಮುಖಂಡರು ನವೆಂಬರ್‌ 21ರಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ.


from India & World News in Kannada | VK Polls https://ift.tt/346TJbB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...