ನಿತ್ಯಾನಂದ ಬಿಡದಿಗೆ ಬಾರದೆ ವರ್ಷವಾಗಿದೆ; ಅದೆಲ್ಲಿ 'ದೀರ್ಘ ತಪಸ್ಸು' ಮಾಡುತ್ತಿದ್ದಾರೆ? ಅಸಲಿ ಕತೆ ಬೇರೆಯಿದೆ!

ಹೊಸದಿಲ್ಲಿ/ರಾಮನಗರ: ಸದಾ ವಿವಾದಗಳ ಮೂಲಕ ಸುದ್ದಿ ಮಾಡುತ್ತಿರುವ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಆಶ್ರಮಕ್ಕೆ ಬಾರದೆ ವರ್ಷ ಕಳೆದಿದೆ. ಕಳೆದ 6 ತಿಂಗಳಿನಿಂದ ನ್ಯಾಯಾಲಯದ ವಿಚಾರಣೆಗೂ ಹಾಜರಾಗಿಲ್ಲ. ಸ್ವಾಮಿಗಳು ಎಲ್ಲಿ ಎಂದು ಕೇಳಿದರೆ ಆಶ್ರಮದಲ್ಲೇ ಉಳಿದುಕೊಂಡಿರುವ ಒಂದಷ್ಟು ಭಕ್ತರು ಕೊಡುವ ಉತ್ತರ 'ದೀರ್ಘ ತಪಸ್ಸು ಮಾಡಲು ನಿತ್ಯಾನಂದ ಸ್ವಾಮಿಗಳು ತೆರಳಿದ್ದಾರೆ'! ಎಂದು. ಉತ್ತರ ಭಾರತ ಯಾತ್ರಾ ಪ್ರವಾಸದಲ್ಲಿದ್ದಾರೆ. ಗುಜರಾತ್‌ನಲ್ಲಿದ್ದಾರೆ ಎಂದೆಲ್ಲಾ ಸಬೂಬುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಈ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಗುಜರಾತ್‌ ಪೊಲೀಸರು ಬಿಚ್ಚಿಟ್ಟಿದ್ದಾರೆ ನಿತ್ಯಾನಂದ ರಹಸ್ಯ! ನಿತ್ಯಾನಂದ ಬಿಡದಿ ಬಿಡಿ, ದೇಶವನ್ನೇ ತೊರೆದು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಗುಜರಾತ್‌ ಪೊಲೀಸರು ಹೇಳಿದ್ದಾರೆ. ತಮ್ಮ ಯೋಗಿನಿ ಸರ್ವಗ್ಯಪೀಠಮ್‌ ಆಶ್ರಮದಲ್ಲಿನ ವಿದ್ಯಾರ್ಥಿಗಳ ಅಪಹರಣ ಹಾಗೂ ಅವರನ್ನು ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಬಳಸಿಕೊಂಡ ಆರೋಪದ ಮೇಲೆ ನಿತ್ಯಾನಂದ ವಿರುದ್ಧ ಗುಜರಾತ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ತನ್ನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗುತ್ತಿದ್ದಂತೆ ನಿತ್ಯಾನಂದ ಸದ್ದಿಲ್ಲದೇ ವಿದೇಶಕ್ಕೆ ಹಾರಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ವಿ. ಆಸಾರಿ ತಿಳಿಸಿದ್ದಾರೆ. ಭಾರತಕ್ಕೆ ಮರಳಿದ ಕೂಡಲೇ ನಿತ್ಯಾನಂದರನ್ನು ಬಂಧಿಸಲಾಗುವುದು. ಅಗತ್ಯಬಿದ್ದಲ್ಲಿ ಈಗಲೂ ಸೂಕ್ತ ಮಾರ್ಗದಲ್ಲಿ ನಿತ್ಯಾನಂದರ ಬೆನ್ನತ್ತಿ ಬಂಧಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ನಿತ್ಯಾನಂದರ ಶಿಷ್ಯರೆನ್ನಲಾದ ಪ್ರಾಣಪ್ರಿಯ ಮತ್ತು ಪ್ರಿಯತತ್ವ ಎನ್ನುವವರನ್ನು ಅಪಹರಣ, ದಾಳಿ ಆರೋಪದ ಮೇರೆಗೆ ಅಹಮದಾಬಾದ್‌ ಗ್ರಾಮೀಣ ಕೋರ್ಟ್‌ ಐದು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿದೆ. ''ನಿತ್ಯಾನಂದ ಬಿಡದಿ ಧ್ಯಾನಪೀಠಕ್ಕೆ ಬರದೇ ವರ್ಷವೇ ಕಳೆದಿದೆ. ಅವರು ಉತ್ತರ ಭಾರತದಲ್ಲಿಸುದೀರ್ಘ ತಪಸ್ಸು ಮಾಡುತ್ತಿದ್ದಾರೆ,'' ಎಂದು ಬಿಡದಿ ಆಶ್ರಮದ ಭಕ್ತರು ತಿಳಿಸಿದ್ದಾರೆ. ಬಿಡದಿ ನ್ಯಾಯಾಲಯಕ್ಕೂ ಆರು ತಿಂಗಳಿನಿಂದ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಮುಂದಿನ ವಿಚಾರಣೆ ಡಿ.9ರಂದು ನಡೆಯಲಿದೆ. ವರದಿ ಕೇಳಿದ ಸಿಬಿಎಸ್‌ಸಿ: ಏತನ್ಮಧ್ಯೆ ಅಹಮದಾಬಾದ್‌ನಲ್ಲಿ ಶಾಲೆ ತೆರೆಯಲು ನಿತ್ಯಾನಂದ ಅವರಿಗೆ ಹತ್ತಾರು ಎಕರೆ ಜಾಗ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಶಿಕ್ಷಣ ಇಲಾಖೆಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನೋಟಿಸ್‌ ಜಾರಿ ಮಾಡಿದೆ. ''ಡಿಪಿಎಸ್‌ ಮಣಿನಗರದಲ್ಲಿ ನಿತ್ಯಾನಂದ ಶಾಲೆ ಆರಂಭಿಸಿದ್ದು, ವಿವಾದಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿನ ಜಾಗವನ್ನು ಅವರು ಗುತ್ತಿಗೆ ಪಡೆದಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮತಿಯನ್ನು ಅವರು ಪಡೆದಿರಲಿಲ್ಲ. ಇದೆಲ್ಲ ಅವರಿಗೆ ಹೇಗೆ ಸಾಧ್ಯವಾಗಿದೆ? ವಿವರವಾದ ವರದಿ ನೀಡಿ,'' ಎಂದು ಸಿಬಿಎಸ್‌ಸಿ ಸೂಚಿಸಿದೆ.


from India & World News in Kannada | VK Polls https://ift.tt/35kmjX6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...