ಮನೀಶ್‌ ಬಳಗಕ್ಕೆ ಹ್ಯಾಟ್ರಿಕ್‌ ಜಯದ ಧ್ಯಾನ

ಸೈಯದ್‌ ಮುಷ್ತಾಕ ಅಲಿ ಟ್ರೋಫಿ ಟ್ವೆಂಟಿ 20: ಕರ್ನಾಟಕಕ್ಕೆ ಪಂಜಾಬ್‌ ಸವಾಲು ಸೂರತ್‌: ಸತತ ಎರಡು ಗೆಲುವುಗಳ ಆತ್ಮವಿಶ್ವಾಸದಲ್ಲಿರುವ ತಂಡ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ 20 ಕ್ರಿಕೆಟ್‌ ಟೂರ್ನಿಯ ಸೂಪರ್‌ ಲೀಗ್‌ ಹಂತದ ತನ್ನ ಮೂರನೇ ಪಂದ್ಯದಲ್ಲಿ ಭಾನುವಾರ ಬಲಿಷ್ಠ ಪಂಜಾಬ್‌ ತಂಡದ ಸವಾಲು ಎದುರಿಸಲಿದ್ದು, ಹ್ಯಾಟ್ರಿಕ್‌ ಗೆಲುವಿನ ಧ್ಯಾನದಲ್ಲಿದೆ. ತಮಿಳುನಾಡು ಮತ್ತು ಜಾರ್ಖಂಡ್‌ ವಿರುದ್ಧ ಪೂರ್ಣ ಅಂಕ ಸಂಪಾದಿಸಿರುವ ಮನೀಶ್‌ ಪಾಂಡೆ ಬಳಗ, ಒಟ್ಟು 8 ಅಂಕಗಳೊಂದಿಗೆ 'ಬಿ' ಗುಂಪಿನಲ್ಲಿಮೊದಲ ಸ್ಥಾನದಲ್ಲಿದೆ. ಅತ್ತ ಆಡಿದ ಒಂದು ಪಂದ್ಯದಲ್ಲಿ4 ಅಂಕ ಹೊಂದಿರುವ ಪಂಜಾಬ್‌ ದ್ವಿತೀಯ ಸ್ಥಾನದಲ್ಲಿದ್ದು, ಕಳೆದ ಬಾರಿಯ ಚಾಂಪಿಯನ್ನರ ವಿರುದ್ಧ ಪೂರ್ಣ ಅಂಕ ಕಲೆಹಾಕಲು ಎದುರು ನೋಡುತ್ತಿದೆ. ತಮ್ಮ ಹಿಂದಿನ ಪಂದ್ಯದಲ್ಲಿ ಜಾರ್ಖಂಡ್‌ ತಂಡವನ್ನು ಎರಡೂ ತಂಡಗಳು ಮಣಿಸಿ ಮುಖಾಮುಖಿಯಾಗುತ್ತಿರುವುದು ಈ ಪಂದ್ಯದ ವಿಶೇಷ. ನವೆಂಬರ್‌ 29ರಂದು ನಡೆಯಲಿರುವ ಸೆಮಿಫೈನಲ್‌ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮೂರು ವಿಭಾಗಗಳಲ್ಲೂಉತ್ತಮ ಫಾಮ್‌ರ್‍ನಲ್ಲಿದೆ. ಜಾರ್ಖಂಡ್‌ ವಿರುದ್ಧ ಬೌಲರ್‌ಗಳು ದುಬಾರಿಯಾದರೂ ಅಂತಿಮವಾಗಿ ಕೊನೆಯ ಓವರ್‌ನಲ್ಲಿತಂಡಕ್ಕೆ 13 ಗೆಲುವು ತಂದುಕೊಡುವಲ್ಲಿಯಶಸ್ವಿಯಾದರು. ಉತ್ತಮ ಲಯದಲ್ಲಿರುವ ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ಕೆ.ಎಲ್‌ ರಾಹುಲ್‌ ತಂಡದ ಬ್ಯಾಟಿಂಗ್‌ ಆಧಾರ ಸ್ತಂಭವಾದರೆ, ಶ್ರೇಯಸ್‌ ಗೋಪಾಲ್‌, ವಿ. ಕೌಶಿಕ್‌, ಪವನ್‌ ದೇಶಪಾಂಡೆ ಮತ್ತು ಜೆ. ಸುಚಿತ್‌ ಪ್ರಮುಖ ಬೌಲಿಂಗ್‌ ಅಸ್ತ್ರಗಳೆನಿಸಿದ್ದಾರೆ. ಪಂದ್ಯ ಆರಂಭ: ಬೆಳಗ್ಗೆ 9.45ಕ್ಕೆ ಸ್ಥಳ: ಸಿಬಿ ಪಟೇಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ, ಸೂರತ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XEus6l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...