ಮುಂಬಯಿ: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಬಂದು ಹಲವು ದಿನಗಳು ಕಳೆದರೂ ಸರಕಾರ ರಚನೆ ಪ್ರಕ್ರಿಯೆ ತಾರ್ಕಿಕ ಅಂತ್ಯಕ್ಕೆ ತಲುಪಿರಲಿಲ್ಲ. ಈಗ ಬಿಜೆಪಿ ಜತೆಗೂಡಿ ಎನ್ಸಿಪಿಯ ಅಜಿತ್ ಪವಾರ್ ಸರಕಾರ ರಚನೆ ಮಾಡಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಸರಕಾರ ರಚನೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿತ್ತು. ಬಿಜೆಪಿ ಮತ್ತು ಚುನಾವಣೆ ಪೂರ್ವದಿಂದಲೇ ಮೈತ್ರಿ ಮಾಡಿಕೊಂಡಿತ್ತು. ಆದರೆ ಫಲಿತಾಂಶ ಬಂದ ಶಿವಸೇನೆ ವರಸೆ ಬದಲಿಸಿತು. ಬಿಜೆಪಿಯು ಹಿಂದೆ ಸರಿದಿತ್ತು. ಆದರೆ ತೆರೆಮರೆಯಲ್ಲಿ ತನ್ನ ತಂತ್ರ ಹೆಣೆಯುತ್ತಿತ್ತು. ಶಿವಸೇನೆಯ ಹಲವು ಶಾಸಕರು ಕೂಡ ಬಿಜೆಪಿ ಜತೆಗೂಡಿ ಸರಕಾರ ರಚಿಸುವುದೇ ಲೇಸು ಎಂದು ನಾಯಕರ ಮೇಲೆ ಒತ್ತಡ ಹೇರುತ್ತಿದ್ದರು. ಕೆಲವು ಶಿವಸೇನೆಯ ಉದ್ಧವ್, ಸಂಜತ್ ರಾವತ್, ಆದಿತ್ಯ ಠಾಕ್ರೆಯ 'ಅಹಂ'ನಿಂದಾಗಿ ಎಲ್ಲವೂ ಕೈಕೊಟ್ಟಿತು ಎಂದು ಶಿವಸೇನೆಯ ಕೆಲವು ಶಾಸಕರೇ ದೂರಿದ್ದಾರೆ. ಈಗ ಬಿಜೆಪಿ ಸರಕಾರ ರಚನೆ ಮಾಡಿದ್ದರಿಂದ ಶಿವಸೇನೆಯ ಹಲವು ಶಾಸಕರು ಉದ್ಧವ್ಗೆ ಕೈ ಕೊಟ್ಟು ಕಮಲಕ್ಕೆ ಜೈ ಎನ್ನುವ ಸಾಧ್ಯತೆಯೂ ಇದೆ. ಬಿಜೆಪಿಯ ಕೂಡ ಶಿವಸೇನೆಗೆ ಶಾಸಕರು ಬೆಂಬಲ ನೀಡಿದರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಎನ್ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಶನಿವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ದೇವೇಂದ್ರ ಫಡ್ನವಿಸ್ ನೇತೃತ್ವದ ನೂತನ ಸರಕಾರವನ್ನು ಶಿವಸೇನೆಯ 20ಕ್ಕೂ ಹೆಚ್ಚು ಶಾಸಕರು ಬೆಂಬಲಿಸುವ ನಿರೀಕ್ಷೆ ಇದೆ.
from India & World News in Kannada | VK Polls https://ift.tt/2Obh8Dk