ಎಂ.ಎಚ್.ನದಾಫ್ ಮುಧೋಳ () ಬಾಗಲಕೋಟೆ: ನಿರುದ್ಯೋಗದ ಹೊಡೆತಕ್ಕೆ ಸಿಕ್ಕ ಪದವೀಧರರು, ಡಿಎಡ್ ಕಲಿತವರು ಹಾಗೂ ಸರಕಾರಿ ಕಾಲೇಜ್ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರೂ ಈಗ ಮಾಡುವ ಗ್ಯಾಂಗ್ ಸೇರಿಕೊಂಡಿದ್ದಾರೆ. ಕಬ್ಬಿನ ಹಂಗಾಮಿನಲ್ಲಿ ಕೃಷಿ ಕಾರ್ಮಿಕರಿಗೆ ಸೀಮಿತವಾಗಿದ್ದ ಕಟಾವು ಕೆಲಸವನ್ನು ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಳ್ಳಿಗಳ ಪದವೀಧರರು ಪರಿಶ್ರಮದಿಂದ ಮಾಡುತ್ತಿದ್ದಾರೆ. ಕಾಯಕದ ಮಹತ್ವವನ್ನು ಸಾರಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 11 ಸಕ್ಕರೆ ಕಾರ್ಖಾನೆ ಹಾಗೂ 1.30 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಪ್ರತಿವರ್ಷ ಮಹಾರಾಷ್ಟ್ರದ ಕಬ್ಬಿನ ಗ್ಯಾಂಗ್ನವರೇ ಇಲ್ಲಿ ಹೆಚ್ಚಾಗಿ ಕಟಾವು ಮಾಡಲು ಬರುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಕಾರಣಕ್ಕೆ ಮಹಾರಾಷ್ಟ್ರದ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಸೇರಿದಂತೆ ಉಳಿದೆಡೆಯಿಂದಲೂ ನಿರುದ್ಯೋಗಿ ಯುವಕರು ಈ ಕೆಲಸಕ್ಕೆ ದಾಂಗುಡಿ ಇಟ್ಟಿದ್ದಾರೆ. ನಡಗುವ ಚಳಿಯಲ್ಲೂ ಬೆವರು ಸುರಿಸುತ್ತಿದ್ದಾರೆ. ಸ್ವಾವಲಂಬಿ ಬದುಕುಇತ್ತೀಚೆಗೆ ಕೃಷಿ ಕಾರ್ಮಿಕರು ಸಿಗುವುದೇ ಕಡುಕಷ್ಟ. ಮೂರೂವರೆ ತಿಂಗಳು ನಡೆಯುವ ಕಬ್ಬು ಕಟಾವು ಹಂಗಾಮಿನಲ್ಲಿ ಉದ್ಯೋಗ ಬಯಸುವವರಿಗೆ ಕೆಲಸ ಸಿಗುತ್ತದೆ. ಹಗಲು, ರಾತ್ರಿ ಎನ್ನದೆ ಕಟಾವು ಮಾಡಿ ಲೋಡ್ ಮಾಡಲಾಗುತ್ತಿದೆ. ಈ ಎಲ್ಲ ಕೆಲಸಗಳಲ್ಲಿ ಶಿಕ್ಷಣ ಪಡೆದ ನಿರುದ್ಯೋಗಿಗಳು ತೊಡಗಿಕೊಂಡಿದ್ದಾರೆ. ಇವರನ್ನು ನೋಡಿದರೆ ಇಂಥದ್ದನ್ನು ಓದಿದರೆ ಇಂಥ ಕೆಲಸ ಸಿಗುತ್ತದೆ ಎಂಬ ನಂಬಿಕೆಗೆ ಯಾವುದೇ ಆಧಾರವಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಉದ್ಯೋಗಕ್ಕೆ ವಲಸೆ ಸಾಮಾನ್ಯ. ಕಿತ್ತೂರು ಕರ್ನಾಟಕ ಭಾಗದವರು ಉಡುಪಿ, ಮಂಗಳೂರು, ಗೋವಾಗಳಿಗೆ ದುಡಿಯಲು ಹೋಗುತ್ತಾರೆ. ಈಗ ಕಲ್ಯಾಣ ಕರ್ನಾಟಕದ ಹಳ್ಳಿಗಾಡಿನ ನಿರುದ್ಯೋಗಿ ಯುವಕರು ಕಬ್ಬು ಕಟಾವಿಗೆ ಬಂದಿದ್ದಾರೆ. ನಮ್ದು ದುಡಿಯುವ ವರ್ಗ, 3 ವರ್ಷಗಳಿಂದ ಸರಕಾರಿ ಪದವಿ ಕಾಲೇಜ್ದಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಕಳೆದ ತಿಂಗಳಿನಿಂದ ಹಲವು ಬೇಡಿಕೆ ಈಡೇರಿಕೆಗೆ ತರಗತಿ ಬಹಿಷ್ಕಾರ ಮಾಡಿದ್ದೇವೆ. ನೌಕರಿ ಆತಂಕ ತಂದಿದೆ. ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೆಲಸವಾದರೆ ಸೈ ಎಂದು ಇಲ್ಲಿಗೆ ಬಂದಿದ್ದೇವೆ. ಶಂಕರ, ಅತಿಥಿ ಉಪನ್ಯಾಸಕ, ಲಿಂಗಸ್ಗೂರು ಈ ಬಾರಿ ರಾಯಚೂರು, ಯಾದಗಿರಿ, ಕೊಪ್ಪಳ, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳ ಹಲವು ಪ್ರದೇಶಗಳಿಂದ ವಿದ್ಯಾವಂತರು ಬಂದು ಕಬ್ಬು ಕಟಾವಿನಲ್ಲಿ ತೊಡಗಿರುವುದು ಅಚ್ಚರಿ ಮೂಡಿಸಿದೆ. ಮಲ್ಲೇಶ ಹೊಸಕೋಟಿ, ಸುಪರ್ವೈಸರ್, ಜಮಖಂಡಿ
from India & World News in Kannada | VK Polls https://ift.tt/3FaANun