ಹೊಸ ದಿಲ್ಲಿ: ಪಕ್ಷದ ವಕ್ತಾರರನ್ನು ನಿರ್ದಾಕ್ಷಿಣ್ಯವಾಗಿ ಹುದ್ದೆಯಿಂದ ಕಿತ್ತು ಹಾಕಿರುವ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟುವಾಗಿ ಟೀಕಿಸಿದ್ಧಾರೆ. ಕಾಂಗ್ರೆಸ್ ಪಕ್ಷದ ಉಸಿರುಗಟ್ಟುವ ವಾತಾವರಣದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೆಲವು ಹಿರಿಯ ಸದಸ್ಯರು ಹಾಗೂ ಕೆಲವು ಯುವ ಸದಸ್ಯರು ಕೆಲವು ಪ್ರಶ್ನೆಗಳನ್ನು ಎತ್ತಿದರು. ಆದ್ರೆ, ಅವರ ಬಾಯಿ ಮುಚ್ಚಿಸಲಾಯ್ತು ಎಂದು ಇತ್ತೀಚಿನ ವಿದ್ಯಮಾನಗಳನ್ನು ನೆನಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಕ್ತಾರ ಸಂಜಯ್ ಝಾ ಅವರ ವಜಾ ಕುರಿತಾಗಿಯೂ ಅಮಿತ್ ಶಾ ಪ್ರಸ್ತಾಪಿಸಿದ್ದಾರೆ. ಈ ಕುರಿತಾಗಿ ಟ್ವಿಟ್ಟರ್ನಲ್ಲಿ ಇಂಗ್ಲೀಷ್ ದೈನಿಕ ಪತ್ರಿಕೆಗಳ ಎರಡು ಲೇಖನಗಳನ್ನೂ ಹಂಚಿಕೊಂಡಿದ್ದಾರೆ. ಕಳೆದ ವಾರವಷ್ಟೇ ಸಂಜಯ್ ಝಾ ಅವರನ್ನು ಕಾಂಗ್ರೆಸ್ ಪಕ್ಷದ ವಕ್ತಾರ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಅಭಿಷೇಕ್ ದತ್ ಹಾಗೂ ಸಾಧನಾ ಭಾರತಿ ಅವರನ್ನು ರಾಷ್ಟ್ರೀಯ ಮಾಧ್ಯಮ ಸಂವಾದಕರನ್ನಾಗಿ ಕಾಂಗ್ರೆಸ್ ಪಕ್ಷ ನೇಮಕ ಮಾಡಿದೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ಸದಸ್ಯರು ಹಾಗೂ ಕೆಲವು ಯುವ ಸದಸ್ಯರು, ಕೆಲವೊಂದಷ್ಟು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ವೇಳೆ ಅವರ ಬಾಯಿ ಮುಚ್ಚಿಸಲಾಯ್ತು. ಕಾಂಗ್ರೆಸ್ ಪಕ್ಷದ ವಕ್ತಾರರನ್ನಂತೂ ನಿರ್ದಾಕ್ಷಿಣ್ಯವಾಗಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ಸತ್ಯವೇನೆಂದರೆ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಉಸಿರುಗಟ್ಟುವ ವಾತಾವರಣದಲ್ಲಿದ್ದಾರೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಏರಿಕೆ ಮಾಡಿದ ಕರಾಳ ದಿನ ಇದಾಗಿದ್ದು, ಈ ದಿನಕ್ಕೆ 45 ವರ್ಷ ತುಂಬಿದೆ ಎಂದೂ ಅಮಿತ್ ಶಾ ನೆನಪಿಸಿದರು. 1975 ಜೂನ್ 25ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಹೀಗಾಗಿ, ಪಕ್ಷ ಇಂದು ತನ್ನ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಅಮಿತ್ ಶಾ ಚಾಟಿ ಬೀಸಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ಭಾರತದ ಪ್ರಮುಖ ವಿರೋಧ ಪಕ್ಷ. ಇದೀಗ ಕಾಂಗ್ರೆಸ್ ಪಕ್ಷ ತುರ್ತು ಪರಿಸ್ಥಿತಿ ಕಾಲದ ತನ್ನ ಮನಸ್ಥಿತಿಯಿಂದ ಹೊರಗೆ ಬಂದಿದೆಯೇ ಎಂದು ತನ್ನನ್ನು ತಾನು ಪ್ರಶ್ನೆ ಮಾಡಿಕೊಳ್ಳಬೇಕೆಂದು ಎಂದು ಅಮಿತ್ ಶಾ ಆಗ್ರಹಿಸಿದ್ದಾರೆ. ಯಾವುದೋ ಒಂದು ಮನೆತನಕ್ಕೆ ಸೇರದ ಕಾಂಗ್ರೆಸ್ ನಾಯಕರು ಏಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ? ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಏಕೆ ಹತಾಶರಾಗಿದ್ದಾರೆ? ಜನರಿಂದ ಪಕ್ಷ ಏಕೆ ದೂರವಾಗುತ್ತಿದೆ ಎಂದು ಅಮಿತ್ ಶಾ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದಿದ್ದಾರೆ.
from India & World News in Kannada | VK Polls https://ift.tt/2Yxxewo