ರೈಲ್ವೆ ಕೋಚ್‌ ಸಿದ್ಧವಾಗಿದ್ದರೂ ಮನವಿ ಸಲ್ಲಿಸದ ಸರಕಾರ, ಬೊಗಸೆಯಲ್ಲೇ ನೀರು ಬಾವಿಗಾಗಿ ಸುತ್ತಾಟ!

ಮಂಜುನಾಥ ನಾಗಲೀಕರ್‌ ಬೆಂಗಳೂರು: ಒಂದೆಡೆ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಶಂಕಿತರನ್ನು ಕ್ವಾರಂಟೈನ್‌ ಮಾಡಲು ಸೌಲಭ್ಯಗಳ ಕೊರತೆ ಇದೆ ಎಂದು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಪರದಾಡುತ್ತಿದ್ದರೆ, ಇನ್ನೊಂದೆಡೆ ಮುಂಜಾಗ್ರತಾ ಕ್ರಮವಾಗಿ ರೈಲ್ವೆ ಇಲಾಖೆಯು ರೈಲ್ವೆ ಕೋಚ್‌ಗಳನ್ನು ಐಸೋಲೇಷನ್‌ ವಾರ್ಡ್‌ಗಳಾಗಿ ಪರಿವರ್ತಿಸಿ ಕೆಲ ತಿಂಗಳುಗಳೇ ಕಳೆದರೂ ರೈಲ್ವೆ ಕೋಚ್‌ಗಳನ್ನು ಬಳಸಿಕೊಳ್ಳಲು ರೈಲ್ವೆ ಇಲಾಖೆಗೆ ಮನವಿಯನ್ನೇ ಸಲ್ಲಿಸದಿರುವುದು ಬೆಳಕಿಗೆ ಬಂದಿದೆ. ತಲಾ 12ರಿಂದ 14 ಬೆಡ್‌ಗಳ ವ್ಯವಸ್ಥೆ ಕಲ್ಪಿಸಬಹುದಾದ 80 ಕೋಚ್‌ಗಳು ಬೆಂಗಳೂರಿನ ವಿವಿಧ ನಿಲ್ದಾಣಗಳಲ್ಲಿ ನಿಂತಿವೆ. ರಾಜ್ಯ ಸರಕಾರವು ಕೇಂದ್ರ ಆರೋಗ್ಯ ಇಲಾಖೆ ಮತ್ತು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದರೆ ಕೂಡಲೇ ಕೋಚ್‌ಗಳು ಲಭ್ಯವಾಗುತ್ತವೆ. ಬಾಧಿತರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಬಹುದು. ಲಕ್ಷಣಗಳು ಇಲ್ಲದೇ ಇರುವ ಸೋಂಕಿತರನ್ನು ರೈಲು ಕೋಚ್‌ಗಳಲ್ಲಿನ ಬೆಡ್‌ಗಳಲ್ಲಿರಿಸಿ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದ ಅನಗತ್ಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ದಟ್ಟಣೆ ತಪ್ಪುತ್ತದೆ. ರೈಲ್ವೆ ಇಲಾಖೆಯು ಕೇಂದ್ರ ಸರಕಾರದ ಮನವಿ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಸಿದ್ಧಪಡಿಸಿರುವ ಕಾರಣ ಈ ಅವಕಾಶವನ್ನು ರಾಜ್ಯ ಸರಕಾರ ಬಳಸಿಕೊಳ್ಳಬಹುದಾಗಿದೆ. ಬೆಂಗಳೂರಿನಲ್ಲಿ ಐಸೋಲೇಷನ್‌, ಕ್ವಾರಂಟೈನ್‌ ಮಾಡಲು ಮೂಲಸೌಕರ್ಯ ಕೊರತೆ ಇದೆ ಎಂದು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಗೋಳಾಡುತ್ತಿದ್ದಾರೆ. ಆದರೆ, 'ಬೊಗಸೆಯಲ್ಲೇ ನೀರಿಟ್ಟುಕೊಂಡು ಬಾವಿಗಾಗಿ ಸುತ್ತಾಡಿದರು' ಎಂಬ ಮಾತು ಬಿಬಿಎಂಪಿ ಮತ್ತು ರಾಜ್ಯ ಸರಕಾರಕ್ಕೇ ಹೇಳಿ ಮಾಡಿಸಿದಂತಿದೆ. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಂಯೋಜನೆಯೊಂದಿಗೆ ಪ್ಲಾನ್‌ ಮಾಡಿದರೆ ಈ ಬೆಡ್‌ಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ. ಏನೇನು ಸೌಲಭ್ಯ? ಫ್ಯಾನ್‌, ಶೌಚಾಲಯ, ಒಬ್ಬರು ಅಟೆಂಡರ್‌ ಕೂಡ ಇರುವಂತಹ ಉತ್ತಮ ವ್ಯವಸ್ಥೆ ರೈಲ್ವೆ ಕೋಚ್‌ಗಳಲ್ಲಿದೆ. ಸದಾ ಕಾಲ ವಿದ್ಯುತ್‌, ನೀರಿನ ಸಂಪರ್ಕವೂ ಇರುತ್ತದೆ. ಹೀಗಾಗಿ, ಆರೋಗ್ಯವಾಗಿರುವ ಕೊರೊನಾ ಪಾಸಿಟಿವ್‌ ರೋಗಿಗಳಿಗೆ ಇಲ್ಲಿಚಿಕಿತ್ಸೆ ನೀಡಲು ಸಾಧ್ಯವಿದೆ. ''ಬೆಂಗಳೂರು ಸೇರಿ ನೈರುತ್ಯ ರೈಲ್ವೆ ವಲಯದಲ್ಲಿ230ಕ್ಕೂ ಹೆಚ್ಚು ಕೋಚ್‌ಗಳು ಲಭ್ಯ ಇವೆ. ಅಗತ್ಯತೆ ಅನುಸಾರ ಕೋಚ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು. ಸಾಕಷ್ಟು ಹಿಂದೆಯೇ ಕೋಚ್‌ಗಳು ಸಿದ್ಧವಾಗಿವೆ. ಆದರೆ, ರಾಜ್ಯ ಸರಕಾರದಿಂದ ಇದುವರೆಗೆ ಯಾವುದೇ ಮನವಿ ಬಂದಿಲ್ಲ,'' ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶೋಕ ವರ್ಮಾ 'ವಿಕ'ಕ್ಕೆ ತಿಳಿಸಿದರು. 80 ಕೋಚ್‌ಗಳನ್ನು ಕೊರೊನಾ ಐಸೋಲೇಷನ್‌ ವಾರ್ಡ್‌ಗಳಾಗಿ ಸಿದ್ಧಪಡಿಸಿಡಲಾಗಿದೆ. ರಾಜ್ಯ ಸರಕಾರ ಮನವಿ ಮಾಡಿದರೆ ಯಾವುದೇ ಸಂದರ್ಭದಲ್ಲಿಕೋಚ್‌ಗಳನ್ನು ಸೇವೆಗೆ ಬಳಸಿಕೊಳ್ಳಬಹುದು. - ಅಶೋಕ ವರ್ಮಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ, ನೈರುತ್ಯ ರೈಲ್ವೆ ಬೆಂಗಳೂರು


from India & World News in Kannada | VK Polls https://ift.tt/3eyTmvE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...