ಟೀಮ್‌ ಇಂಡಿಯಾ ಕಂಡ ಬೆಸ್ಟ್‌ ಮ್ಯಾಚ್‌ ವಿನ್ನರ್‌ ಹೆಸರಿಸಿದ ಸುನಿಲ್‌ ಗವಾಸ್ಕರ್‌!

ಮುಂಬೈ: 1983ರಲ್ಲಿ ತನ್ನ ಚೊಚ್ಚಲ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಗೆದ್ದು ಜೂನ್‌ 25ಕ್ಕೆ ಬರೋಬ್ಬರಿ 37 ವರ್ಷಗಳು ತುಂಬಿದೆ. ಈ ವಿಶೇಷ ಸಂದರ್ಭದಲ್ಲಿ ಮಾತಿಗಿಳಿದಿರುವ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌, ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿನ ಗ್ರೇಟೆಸ್ಟ್ ಮ್ಯಾಚ್‌ ವಿನ್ನರ್‌ ಯಾರೆಂದು ಹೆಸರಿಸಿದ್ದಾರೆ. "ನನ್ನ ಪ್ರಕಾರ ಕಪಿಲ್‌ ದೇವ್‌ ಭಾರತೀಯ ಕ್ರಿಕೆಟ್‌ ಇತಿಹಾಸದ ಗ್ರೇಟೆಸ್ಟ್‌ ಮ್ಯಾಚ್‌ ವಿನ್ನರ್‌. ಅದು ಏಕೆಂದರೆ ಅವರು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರ ಮೂಲಕವೂ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುತ್ತಿದ್ದರು," ಎಂದು ಸುನಿಲ್‌ ಗವಾಸ್ಕರ್‌ ಖಾಸಗಿ ವೆಬ್‌ಸೈಟ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "1978ರಲ್ಲಿ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ವಿಲ್ಸ್‌ ಟ್ರೋಫಿ ಪಂದ್ಯದಲ್ಲಿ ನಾನು ಮೊದಲ ಬಾರಿ ಕಪಿಲ್‌ ಜೊತೆಗೆ ಆಡಿದ್ದೆ. ಆಸ್ಟ್ರೇಲಿಯಾ ಪ್ರವಾಸದಿಂದ ಆಗಷ್ಟೇ ಹಿಂದಿರುಗಿದ್ದೆವು. ಅಂದು ಕಪಿಲ್‌ ಮತ್ತು ಪ್ರತಿಭಾನ್ವಿತ ಆಲ್‌ರೌಂಡರ್‌ ರಾಜೇಂದ್ರ ಜಡೇಜಾ ಮುಂಬೈ ವಿರುದ್ಧ ಬೌಲಿಂಗ್‌ ಮಾಡುತ್ತಿದ್ದರು," ಎಂದು ಗವಾಸ್ಕರ್‌ ತಮ್ಮ ನೆನಪಿನಾಳ ಕೆದಕಿದ್ದಾರೆ. "ಅಂದು ಕಪಿಲ್‌ ಅದ್ಭುತವಾಗಿ ಬೌಲಿಂಗ್‌ ಮಾಡುತ್ತಿದ್ದರಾದರೂ ಸ್ಟಂಪ್ಸ್‌ಗೆ ಬಹಳ ದೂರದಿಂದ ಚೆಂಡನ್ನು ಎಸೆಯುತ್ತಿದ್ದರು. ಆಗ ಅವರ ಬಳಿ ತೆರಳಿ ಸ್ಟಂಪ್ಸ್‌ಗೆ ಹತ್ತಿರದಲ್ಲಿ ಬೌಲ್‌ ಮಾಡುವಂತೆ ಕೇಳಿದ್ದ. ಅವರ ತಂಡದ ಆಟಗಾರರು ನಾನು ಕಪಿಲ್‌ ಅವರನ್ನು ಸ್ಲೆಡ್ಜ್‌ ಮಾಡುತ್ತಿದ್ದೇನೆ ಅಂದುಕೊಂಡಿದ್ದರು. ಇದಕ್ಕೆ ಕಪಿಲ್‌ ನನ್ನ ಪರವಾಗಿ ಮಾತನಾಡಿ ಅಂಥದ್ದೇನೂ ಇಲ್ಲವೆಂದು ಸ್ಪಷ್ಟ ಪಡಿಸಿದ್ದರು. ಬಳಿಕ ನನ್ನ ಸಲಹೆಯಂತೇ ಬೌಲಿಂಗ್‌ ಮಾಡಿ ಮುಂಬೈ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾದರು," ಎಂದು ಗವಾಸ್ಕರ್‌ ಹೇಳಿದ್ದಾರೆ. "ಅಂದು ನಾನು ಮೊದಲ ಬಾರಿ ಕಪಿಲ್‌ ಅವರನ್ನು ಭೇಟಿಯಾಗಿದ್ದೆ. ಎದುರಾಳಿ ತಂಡದ ಆಟಗಾರನಾಗಿದ್ದರೂ ಕೂಡ ನಾನು ಅವರಿಗೆ ಸಹಾಯ ಮಾಡಿದ್ದೆ. ಇದನ್ನು ಕಪಿಲ್‌ ಸದಾ ಗೌರವಿಸುತ್ತಾರೆ," ಎಂದಿದ್ದಾರೆ. ನಂತರ ಕಪಿಲ್‌ ದೇವ್‌ ಸಾರಥ್ಯದಲ್ಲಿ 1983ರ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಗವಾಸ್ಕರ್‌ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3i0BZWY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...