ರಾಜ್ಯದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಜಾರಿಯಲ್ಲಿದೆ. ಆದರೆ ಕಳೆದ ಕೆಲವು ದಿನಗಳಿಂದ ಪರಿಸ್ಥಿತಿ ಕೈಮೀರಿ ಹೋಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಈ ಮಹಾಮಾರಿಯನ್ನು ಮೆಟ್ಟಿನಿಲ್ಲುವುದು ಕೇವಲ ಸರ್ಕಾರದ ಜಾವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬರ ವ್ಯಕ್ತಿಯ ಪಾತ್ರವೂ ಇದರಲ್ಲಿ ಮಹತ್ವದ್ದಾಗಿದೆ. ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರ, ಇಲಾಖೆ, ಅಧಿಕಾರಿಗಳ ತಪ್ಪುಗಳನ್ನು ಮಾತ್ರ ಬೊಟ್ಟು ಮಾಡಿಕೊಂಡು ಕುಳಿತರೆ ಕೊರೊನಾ ದೂರವಾಗುವುದಿಲ್ಲ. ಕಾನೂನು ಪಾಲನೆ ಹಾಗೂ ನಾಗರಿಕರ ಜಾವಾಬ್ದಾರಿಯುತ ವರ್ತನೆ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೊರೊನಾ ವಾರಿಯರ್ ಆಗುವ ಅಗತ್ಯವಿದೆ.ಕೊರೊನಾ ನಿಯಂತ್ರಣ ಮಾಡುವುದು ಕೇವಲ ಅಧಿಕೃತ ಕೊರೊನಾ ವಾರಿಯರ್ಗಳ ಕೆಲಸ ಮಾತ್ರವಲ್ಲ. ನಮ್ಮೆಲ್ಲರ ಜಾವಾಬ್ದಾರಿಯೂ ಹೌದು. ನಿಯಮಗಳ ಉಲ್ಲಂಘನೆ ಹಾಊ ಬೇಜಾವಾಬ್ದಾರಿತನದಿಂದ ಸೋಂಕು ಹರಡಲು ನಾವು ಕಾರಣವಾಗುತ್ತಿದ್ದೇವೆ. ತಮ್ಮ ಸಣ್ಣ ತಪ್ಪುಗಳ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ನಮ್ಮ ಕುಟುಂಬದ ಸದಸ್ಯರು ಹಾಗೂ ಇತರರನ್ನು ಅಪಾಯಕ್ಕೆ ದೂಡಬಲ್ಲದು. ಇದರ ಎಚ್ಚರಿಕೆ ನಮ್ಮಲ್ಲಿ ಇರಬೇಕು. ಇಲ್ಲದೆ ಇದ್ದಲ್ಲಿ ಸೋಂಕು ನಿಯಂತ್ರಣ ಖಂಡಿತಾ ಸಾಧ್ಯವಿಲ್ಲ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,000ದ ಗಡಿ ದಾಟಿದೆ. ಹೀಗಿದ್ದರೂ ಜನರು ಇನ್ನು ಅಪಾಯದ ಅರಿವಲ್ಲದಂತೆ ವರ್ತನೆ ಮಾಡುತ್ತಿದ್ದಾರೆ. 100 ದಿನಗಳ ಕಾಲ ಲಾಕ್ಡೌನ್ ಅವಧಿಯಲ್ಲಿ ಒಂದಿಷ್ಟು ನಿಯಮಗಳ ಪಾಲನೆ ನಡೆಯುತ್ತಿತ್ತು. ಆದರೆ ಇದೀಗ ಎಲ್ಲವೂ ಮರೆತು ಹೋದಂತಿದೆ. ಜನರು ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಅಂತರ ಪಾಲನೆ ಮಾಡುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಳುಗುತ್ತಾರೆ. ಆಟೋಗಳಲ್ಲಿ, ವಾಹನಗಳಲ್ಲಿ ಪ್ರಯಾಣ ಮಾಡುವಾಗಲೂ ಕೊರೊನಾದ ಅರಿವಿಲ್ಲದಂತೆ ವರ್ತನೆ ಮಾಡುತ್ತಿದ್ದಾರೆ. ಆದರೆ ಇದು ಮತ್ತಷ್ಟು ಅಪಾಯಕ್ಕೆ ಕಾರಣವಾಗಬಲ್ಲದು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಕೊರೊನಾದಂತಹ ಮಹಾಮಾರಿಯನ್ನು ತಡೆಗಟ್ಟಲು ಪ್ರಯೊಬ್ಬರ ಸಹಕಾರ ಅಗತ್ಯ. ಸೋಂಕಿನ ಹೊಣೆಯನ್ನು ಯಾರೊಬ್ಬರ ಮೇಲೆ ಹೊರಿಸಿ ಸುಮ್ಮನಾಗುವುದು ಬೇಜಾವಾಬ್ದಾರಿತನ. ಈ ನಿಟ್ಟಿನಲ್ಲಿ ಸೋಂಕು ಹರಡದಂತೆ ಸ್ವತಃ ನಾವು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಸಲಹೆ ಸೂಚನೆಗಳನ್ನು ಪಾಲನೆ ಮಾಡಬೇಕು. ತಾವು ಸ್ವತಃ ಪಾಲನೆ ಮಾಡುವುದರ ಮೂಲಕ ಇತರರಿಗೂ ಮಾದರಿಯಾಗಬೇಕು. ಪ್ರತಿಯೊಬ್ಬರು ಕೊರೊನಾ ನಿಯಂತ್ರಣ ಮಾಡುವ ಸ್ವಯಂಸೇವಕರಂತೆ ವರ್ತಿಸಬೇಕಿದೆ. ಕೊರೊನಾ ವಾರಿಯರ್ಸ್ಗಳ ಜೊತೆಗೆ ಸಹಕಾರ ನೀಡಬೇಕಾಗಿದೆ. ಈ ಮೂಲಕ ಎಲ್ಲರು ಜೊತೆಗೂಡಿ ಕೊರೊನಾದ ವಿರುದ್ಧ ಹೋರಾಡಬೇಕಾಗಿದೆ.
from India & World News in Kannada | VK Polls https://ift.tt/3dBvmH8