ಭಾರತದ ಚೊಚ್ಚಲ ವಿಶ್ವಕಪ್‌ ಸಾಧನೆಗೆ 37 ವರ್ಷಗಳು!

ಹೊಸದಿಲ್ಲಿ: ಕಪಿಲ್ ದೇವ್‌ ನಾಯಕತ್ವದ ಭಾರತ ತಂಡ 1983ರ ಜೂನ್‌ 25 ರಂದು (ಇಂದಿನ ದಿನ) ಇಂಗ್ಲೆಂಡ್‌ನ ಲಾರ್ಡ್ಸ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್‌ ತಂಡವನ್ನು ಫೈನಲ್‌ ಹಣಾಹಣಿಯಲ್ಲಿ ಮಣಿಸಿ ಚೊಚ್ಚಲ ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡಿತ್ತು. ಭಾರತದ ಈ ಐತಿಹಾಸಿಕ ಸಾಧನೆಗೆ ಇಂದಿಗೆ 37 ವರ್ಷಗಳು ತುಂಬಿದೆ.ವಿಶ್ವಕಪ್‌ ಫೈನಲ್‌ ಕಾದಾಟದಲ್ಲಿ ಸುನೀಲ್‌ ಗವಾಸ್ಕರ್‌, ಕೆ. ಶ್ರೀಕಾಂತ್‌, ಮೊಹೀಂದರ್‌ ಅಮರ್‌ನಾಥ್‌, ಯಶ್ಪಾಲ್‌ ಶರ್ಮಾ, ಎಸ್‌.ಎಸ್‌ ಪಾಟೀಲ್‌, ಕಪಿಲ್‌ ದೇವ್(ನಾಯಕ), ಕೃತಿ ಅಜಾದ್‌, ರೋಜರ್‌ ಬಿನ್ನಿ, ಮದನ್ ಲಾಲ್‌, ಸೈಯದ್‌ ಕಿರ್ಮಾನಿ ಹಾಗೂ ಬಲ್ವೀಂದರ್‌ ಸಿಂಗ್‌, ಭಾರತ ಅಂತಿಮ 11ರಲ್ಲಿ ಆಡಿದ್ದರು. ಕರ್ನಾಟಕದಿಂದ ರೋಜರ್‌ ಬಿನ್ನಿ ಹಾಗೂ ವಿಕೆಟ್‌ ಕೀಪರ್‌ ಸೈಯದ್‌ ಕಿರ್ಮಾನಿ ಕಣಕ್ಕೆ ಇಳಿದಿದ್ದರು. ಭಾರತ ತಂಡ ಚೊಚ್ಚಲ ವಿಶ್ವಕಪ್‌ ಗೆಲ್ಲುತ್ತಿದ್ದಂತೆ ದೇಶದ ಕ್ರಿಕೆಟ್‌ ಭವಿಷ್ಯ ಬದಲಾಯಿತು. ಕ್ರಿಕೆಟ್‌ ಅನ್ನು ಆರಾಧಿಸುವ ಅಭಿಮಾನಿಗಳ ಸಂಖ್ಯೆಯಲ್ಲಿ ಏರಿಕೆಯಾಯ್ತು ಹಾಗೂ ಪ್ರತಿಯೊಬ್ಬ ಮಗುವಿಗೂ ತಾನು ಕ್ರಿಕೆಟಿಗನಾಗಬೇಕೆಂದ ಆಸೆ ಚಿಗುರಿತು. ಅಂದಿನಿಂದ ಭಾರತದಲ್ಲಿ ಕ್ರಿಕೆಟ್‌ನ ಹೊಸ ಶಕೆ ಆರಂಭವಾಯಿತು.

ಫೈನಲ್‌ ಹಣಾಹಣಿಯಲ್ಲಿ ಟಾಸ್‌ ಗೆದ್ದ ವೆಸ್ಟ್ ಇಂಡೀಸ್‌, ಮೊದಲು ಭಾರತಕ್ಕೆ ಬ್ಯಾಟಿಂಗ್‌ ಮಾಡುವಂತೆ ಆಹ್ವಾನಿಸಿತು. ಕಪಿಲ್‌ ದೇವ್ ನಾಯಕತ್ವದ ಭಾರತ ತಂಡ 54.4 ಓವರ್‌ಗಳಿಗೆ 183 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಲೆದುಕೊಂಡಿತು. ವಿಂಡೀಸ್ ಪರ ಅತ್ಯುತ್ತಮ ಬೌಲಿಂಗ್‌ ಮಾಡಿದ್ದ ಆಂಡಿ ರಾಬರ್ಟ್ಸ್‌ ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದರು, ಎಂ. ಮಾರ್ಷಲ್‌, ಮಿಚೆಲ್‌ ಹೋಲ್ಡಿಂಗ್‌ ಹಾಗೂ ಲಾರಿ ಗೋಮ್ಸ್‌ ತಲಾ ಎರಡೆರಡು ವಿಕೆಟ್‌ಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ಭಾರತದ ಪರ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ್ದ ಕೃಷ್ಣಮಾಚಾರಿ ಶ್ರೀಕಾಂತ್‌ 38 ರನ್‌ ಗಳಿಸಿದ್ದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ 30ರ ಗಡಿ ದಾಟುವಲ್ಲಿ ವಿಫಲರಾಗಿದ್ದರು.

ಬಹುಬೇಗ ಏಕದಿನ ತಂಡಕ್ಕೆ ಬಂದ ಬುಮ್ರಾ, ಟೆಸ್ಟ್ ಕ್ರಿಕೆಟ್‌ ಆಡಲು 2 ವರ್ಷ ಕಾಯಬೇಕಾಯ್ತು!

184 ರನ್‌ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್‌ ತಂಡವನ್ನು ಭಾರತ ಆರಂಭದಲ್ಲಿಯೇ ನಿಯಂತ್ರಿಸಿತ್ತು. ವಿಂಡೀಸ್ ದಂತಕತೆ ವಿವಿಯನ್‌ ರಿಚರ್ಡ್ಸ್ ಅವರ ಮುಖ್ಯ ವಿಕೆಟ್‌ ಅನ್ನು ಮದನ್‌ ಲಾಲ್‌ ಪಡೆಯುವ ಮೂಲಕ ವೆಸ್ಟ್ ಇಂಡೀಸ್‌ ತಂಡದ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ರಿಚರ್ಡ್ಸ್ ಕೇವಲ 33 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ವಿಂಡೀಸ್‌ 57 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ, ಶಿಸ್ತುಬದ್ಧ ಬೌಲಿಂಗ್‌ ದಾಳಿ ಮುಂದುವರಿಸಿದ ಭಾರತ, ಎದುರಾಳಿ ತಂಡವನ್ನು 76 ರನ್‌ಗಳಿಗೆ 6 ವಿಕೆಟ್‌ ಕೆಡವಿತು. ಅಂತಿಮವಾಗಿ ಭಾರತ ಪಂದ್ಯವನ್ನು ಗೆದ್ದು ಚೊಚ್ಚಲ ವಿಶ್ವಕಪ್‌ಗೆ ಮುತ್ತಿಟ್ಟಿತು

'ಗೇಲ್‌ ಔಟ್‌ ಮಾಡಲು ಧೋನಿ ಸಲಹೆ ನೆರವಾಯ್ತು' ಎಂಎಸ್‌ಡಿ ಸಹಾಯ ನೆನೆದ ನದೀಮ್‌

ಮೊಹೀಂದರ್‌ ಅಮರ್‌ನಾಥ್‌ ಅವರು ಮಿಚೆಲ್‌ ಹೋಲ್ಡಿಂಗ್‌ ಅವರ ಕೊನೆಯ ವಿಕೆಟ್‌ ಪಡೆಯುತ್ತಿದ್ದಂತೆ ಭಾರತ ಚೊಚ್ಚಲ ವಿಶ್ವಕಪ್‌ ಪ್ರಶಸ್ತಿ ಮುಡುಗೇರಿಸಿಕೊಂಡಿತು. ಫೈನಲ್‌ ಪಂದ್ಯದಲ್ಲಿ ವಿಂಡೀಸ್‌ 140 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 43 ರನ್‌ಗಳಿಂದ ಗೆಲುವಿನ ಕೇಕೆ ಹಾಕಿತು. ಪಂದ್ಯದ ಬಳಿಕ ಲಾರ್ಡ್ಸ್ ಅಂಗಳದ ಬಾಲ್ಕನಿಯಲ್ಲಿ ನಾಯಕ ಕಪಿಲ್‌ ದೇವ್‌ ವಿಶ್ವಕಪ್‌ ಎತ್ತಿಹಿಡಿದಿದ್ದರು. ಈಗಲೂ ಈ ಫೋಟೊ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಅಚ್ಚುಮೆಚ್ಚಾಗಿ ಉಳಿದಿದೆ. ಆಲ್‌ರೌಂಡರ್‌ ಪ್ರದರ್ಶನದಿಂದ ಮೊಹೀಂದರ್ ಅಮರ್‌ನಾಥ್‌ ( 26 ರನ್‌ ಹಾಗೂ 3 ವಿಕೆಟ್‌) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

25 ಸಾವಿರ ರೂ. ಬೋನಸ್‌ ಪಡೆದು ಥ್ರಿಲ್‌ ಆಗಿದ್ದ ಟೀಮ್‌ ಇಂಡಿಯಾ ಆಟಗಾರರು!

ಮೊಟ್ಟ ಮೊದಲ ಬಾರಿ ವಿಶ್ವಕಪ್‌ ಟೂರ್ನಿಯನ್ನು 1975ರಲ್ಲಿ ಆಯೋಜಿಸಲಾಗಿತ್ತು. ನಂತರ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವಕಪ್‌ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. 1975 ಮತ್ತು 1979ರಲ್ಲಿ ಆರಂಭಿಕ ಎರಡೂ ವಿಶ್ವಕಪ್‌ ಪ್ರಶಸ್ತಿಗಳನ್ನು ವೆಸ್ಟ್‌ ಇಂಡೀಸ್‌ ಗೆದ್ದಿತ್ತು ಹಾಗೂ 1983ರಲ್ಲಿ ರನ್ನರ್ ಅಪ್‌ ಆಗಿತ್ತು. ಭಾರತ ಇದುವರೆಗೂ ಎರಡು ಐಸಿಸಿ ವಿಶ್ವಕಪ್‌(1983 ಮತ್ತು 2011) ಮುಡಿಗೇರಿಸಿಕೊಂಡಿದೆ. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಭಾರತ 2011ರಲ್ಲಿ 28 ವರ್ಷಗಳ ಬಳಿಕ ವಿಶ್ವಕಪ್‌ ಗೆದ್ದಿತ್ತು. ಆಸ್ಟ್ರೇಲಿಯಾ ತಂಡ ಒಟ್ಟು ಐದು ಬಾರಿ ವಿಶ್ವಕಪ್‌(1987, 1999, 2003,2007 ಹಾಗೂ 2015) ಮುಡುಗೇರಿಸಿಕೊಂಡಿದೆ.

'ಭಾರತದ ಗ್ರೇಟೆಸ್ಟ್‌ ಟೆಸ್ಟ್‌ ಬ್ಯಾಟ್ಸ್‌ಮನ್‌', ಸಚಿನ್‌ಗೆ ಸಡ್ಡು ಹೊಡೆದ ರಾಹುಲ್‌ ದ್ರಾವಿಡ್‌!



from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31ghIGI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...