ಮುಂಬಯಿಗೆ 'ನಿಸರ್ಗ'ದೇಟು: 100 ಕಿ.ಮೀ ವೇಗದಲ್ಲಿ ಮುನ್ನುಗ್ಗಿ ಬರುತ್ತಿದೆ ಚಂಡಮಾರುತ!

ಈಗಾಗಲೇ ಕೊರೊನಾ ವೈರಸ್‌ನಿಂದ ತತ್ತರಿಸಿರುವ ಮುಂಬಯಿಗೆ ಶೀಘ್ರದಲ್ಲೇ ಅಪ್ಪಳಿಸಲಿರುವ 'ನಿಸರ್ಗ'ದೇಟು ಯಾವ ಮಟ್ಟಿನ ಪರಿಣಾಮ ಬೀಳಲಿದೆ ಎಂಬ ಬಗ್ಗೆ ಆತಂಕ ಮನೆ ಮಾಡಿದೆ. ಈಗಾಗಲೇ ವಾಣಿಜ್ಯ ನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸುಮಾರು 41,000 ದಾಟಿದೆ. ಇದೀಗ 100 ಕಿ.ಮೀ ವೇಗದಲ್ಲಿ ಮುನ್ನುಗ್ಗಿ ಬರುತ್ತಿರುವ ನಿಸರ್ಗ ಚಂಡಮಾರುತವು ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸುವ ಆತಂಕ ಕಾಡುತ್ತಿದೆ. ಮುಂಬಯಿ ಮತ್ತು ಕರಾವಳಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ.ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಜೊತೆ ನಿಸರ್ಗ ಚಂಡಮಾರುತ ಎದುರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರ ಸರಕಾರವೂ ಪೂರಕ ಸಿದ್ಧತೆ ನಡೆಸಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಚಂಡಮಾರುತ ಹೊಡೆತಕ್ಕೆ ಸಿಲುಕುವ ಪ್ರದೇಶಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಮುಂಬಯಿನಲ್ಲಿ ಮೂರು, ಪಾಲ್ಘರ್‌ನಲ್ಲಿ ಎರಡು ಹಾಗೂ ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದರ್ಗದಲ್ಲಿ ತಲಾ ಒಂದೊಂದು ತಂಡಗಳನ್ನು ರಕ್ಷಣೆಗೆ ನಿಯೋಜಿಸಲಾಗಿದೆ.ನಿಸರ್ಗ ಚಂಡಮಾರುತದ ಪರಿಣಾಮ ಜೂ. 4ರವರೆಗೆ ಭಾರೀ ಮಳೆ: ಕೃಷಿ ಚಟುವಟಿಕೆ ಚುರುಕು

ನಿಸರ್ಗ ಚಂಡಮಾರುತವು ತೀವ್ರ ಅನಾಹುತವನ್ನು ಸೃಷ್ಟಿಸುವ ಶಕ್ತಿಶಾಲಿ ಸೈಕ್ಲೋನ್‌ ಆಗಿದ್ದು, 90-100 ಕಿ.ಮೀ. ವೇಗದಲ್ಲಿ ಅಪ್ಪಳಿಸಬಹುದು ಎಂಬ ನಿರೀಕ್ಷೆ ಇದೆ. ಇದು ಕೇವಲ ಒಂದು ಅಂದಾಜಾಗಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಚಂಡಮಾರುತ ಅಪ್ಪಳಿಸಬಹುದಾದ ಕರಾವಳಿ ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಎನ್‌ಡಿಆರ್‌ಎಫ್‌ ಮಹಾನಿರ್ದೇಶಕ ಎಸ್‌.ಎನ್‌. ಪ್ರಧಾನ್‌ ತಿಳಿಸಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಆದೇಶದ ಮೇಲೆ ಮೀನುಗಾರರಿಗೆ ಸಮುದ್ರ ತೀರದಿಂದ ಮರಳುವಂತೆ ಅಯಾ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ವಿದ್ಯುತ್‌ ಸರಬರಾಜಿನಲ್ಲಿ ಅಡ್ಡಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೇನು 12 ಗಂಟೆಗಳ ಒಳಗೆ ಮುಂಬಯಿಗೆ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನಿಸರ್ಗ ಚಂಡಮಾರುತವು ತಗ್ಗು ಪ್ರದೇಶಗಳ ಮೇಲೆ ಅಪ್ಪಳಿಸುತ್ತದೆ. ಪ್ರಮುಖವಾಗಿ ಮುಂಬಯಿನಂತರ ನಗರಗಳಿಗೆ ದಾಂಗುಡಿ ಇಡುತ್ತದೆ. ಈ ಚಂಡಮಾರುತವು ಭಾರಿ ಮಳೆಯನ್ನು ಹೊತ್ತು ತರುವುದರಿಂದ ಮರಗಳು ಬೀಳುವುದು, ವಿದ್ಯುತ್‌ ಕಂಬಗಳು ಉರುಳುವುದು ಹೀಗೆ ಅನೇಕ ಹಾನಿಗಳು ಸಂಭವಿಸುತ್ತವೆ. 90-100 ಕಿ.ಮೀ ವೇಗದಲ್ಲಿ ಅಪ್ಪಳಿಸುವ ನಿರೀಕ್ಷೆ ಇದೆಯಾದರೂ 125 ಕಿ.ಮೀ ವರೆಗೂ ವೇಗ ಹೆಚ್ಚಾಗಬಹುದು.

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ನಿಸರ್ಗ ಚಂಡಮಾರುತವು ರಾಜ್ಯದಲ್ಲು ಮುಂಗಾರು ಪ್ರವೇಶಕ್ಕೆ ಅನುಕೂಲಕರವಾದ ವಾತಾವರಣ ಸೃಷ್ಟಿಸಿಕೊಟ್ಟಿದೆ. ರಾಜ್ಯಕ್ಕೆ ಇನ್ನೆರಡು ದಿನಗಳಲ್ಲಿ ಮುಂಗಾರು ಆಗಮನವಾಗಲಿದೆ. ಉತ್ತಮ ಮಳೆಯ ಮುನ್ಸೂಟನೆಯು ಸಿಕ್ಕಿದ್ದು ರೈತಾಪಿ ವರ್ಗಕ್ಕೆ ಸಂತಸವನ್ನು ನೀಡಿದೆ. ಮುಂಗಾರಿನಲ್ಲಿ ವಾಡಿಕೆ ಮಳೆ ಸುರಿದರೆ ಅಣೆಕಟ್ಟು, ಕೆರೆ-ಕೊಳ್ಳಗಳು ಭರ್ತಿಯಾಗಲಿವೆ.

ಜೂನ್‌ 4ರವರೆಗೆ ನಿಸರ್ಗ ಚಂಡಮಾರುತದ ಪರಿಣಾಮ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಜೂನ್‌ 2ರಂದು ಜೂ.2ರಂದು ದಕ್ಷಿಣ ಕನ್ನಡ, ಹಾವೇರಿ, ಬೆಳಗಾವಿ, ಬಳ್ಳಾರಿ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಜೂ.3 ಮತ್ತು 4ರಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂ.2ರಂದು ಕರಾವಳಿಗೆ ಆರೆಂಜ್‌ ಅಲರ್ಟ್‌, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.



from India & World News in Kannada | VK Polls https://ift.tt/3coX6Os

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...