ಚೀನಾದಲ್ಲಿ 304 ಬಲಿ ಪಡೆದಿದೆ. ಅಲ್ಲದೆ, ಚೀನಾದಿಂದ ಹೊರಗೆ ಅಂದರೆ ಫಿಲಿಪ್ಪೀನ್ಸ್ನಲ್ಲೂ ಒಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಭೀತಿ ಹರಡುತ್ತಿದೆ. ಭಾರತದಲ್ಲೂ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಧೃಡಪಟ್ಟಿದ್ದು, ಇನ್ನೂ ಹಲವರಿಗೆ ಪರೀಕ್ಷೆ ನಡೆಯುತ್ತಿದೆ. ರಾಜ್ಯದಲ್ಲೂ ಹಲವರಿಗೆ ಪರೀಕ್ಷೆ ಮಾಡಲಾಗಿದ್ದು, ಆದರೆ ಈವರೆಗೆ ಒಬ್ಬರಿಗೂ ಸೋಂಕು ತಗುಲಿಲ್ಲ ಎನ್ನುವುದು ಧೃಡಪಟ್ಟಿದೆ. ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.. - ಚೀನಾದ ವುಹಾನ್ನಿಂದ ಭಾರತೀಯರನ್ನು ಕರೆದೊಯ್ಯಲು ತೆರಳಿದ್ದ ಏರ್ ಇಂಡಿಯಾ ವಿಮಾನ ಹೊಸದಿಲ್ಲಿಯಲ್ಲಿ ಲ್ಯಾಂಡ್ ಆಗಿದೆ. ಈ ವಿಮಾನದಲ್ಲಿ 323 ಭಾರತೀಯರು ಹಾಗೂ 7 ಮಂದಿ ಮಾಲ್ಡೀವ್ಸ್ ನಾಗರಿಕರು ಇದ್ದರು. - ಕೇರಳದಲ್ಲಿ ಕೊರೊನಾ ವೈರಸ್ನ ಎರಡನೇ ಪ್ರಕರಣ ಧೃಡಪಟ್ಟಿದೆ. ಚೀನಾಗೆ ತೆರಳಿದ್ದ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದ್ದು, ಇದು ದೇಶದಲ್ಲೂ ಕೊರೊನಾ ವೈರಸ್ನ ಎರಡನೇ ಪ್ರಕರಣವಾಗಿದೆ. - ಕೇರಳದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, 1793 ಮಂದಿಗೆ ತಪಾಸಣೆ ಮಾಡಲಾಗಿದ್ದು, ಈ ಪೈಕಿ 70 ಮಂದಿಯನ್ನು ಪ್ರತ್ಯೇಕವಾಗಿ ಆಸ್ಪತ್ರೆಗಳಲ್ಲಿ ಇಡಲಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ. - ಈ ನಡುವೆ ಕೊರೊನಾ ಸೋಂಕಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಿಯಬಿಟ್ಟು ಜನರಲ್ಲಿ ಭೀತಿ ಉಂಟುಮಾಡಲು ಪ್ರಯತ್ನಿಸಿದ ಕಾರಣಕ್ಕಾಗಿ ಕೇರಳದ ಸೈಬರ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. - ಚೀನಾದಲ್ಲಿ ಕೊರೊನಾ ವೈರಸ್ ಮತ್ತಷ್ಟು ಭೀತಿ ಸೃಷ್ಟಿಸಿದ್ದು, ಶನಿವಾರ ಒಂದೇ ದಿನ 45 ಜನರು ಬಲಿಯಾಗಿದ್ದು, 2,590 ಜನರಿಗೆ ಸೋಂಕು ಹರಡಿದೆ. ಈ ಮೂಲಕ ಸಾವಿನ ಸಂಖ್ಯೆ 304ಕ್ಕೆ ಏರಿಕೆಯಾಗಿದ್ದು, 14,380ಕ್ಕೂ ಅಧಿಕ ಜನರಿಗೆ ಕೊರನಾ ವೈರಸ್ ಸೋಂಕು ತಗುಲಿದರುವುದು ಧೃಡಪಟ್ಟಿದೆ. - ಫಿಲಿಪ್ಪೀನ್ಸ್ನಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಹೊರತುಪಡಿಸಿ ಇತರೆ ದೇಶಗಳಲ್ಲಿ ಕೊರೊನಾಗೆ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ. - ಚೀನಾದಿಂದ ಪ್ರಯಾಣಿಸುವ ವಿದೇಶಿಯರಿಗೆ ನ್ಯೂಜಿಲೆಂಡ್ ಪ್ರವೇಶ ನಿರಾಕರಿಸಿದೆ. - ವುಹಾನ್ನಿಂದ ಶನಿವಾರ ಭಾರತಕ್ಕೆ ಬಂದ 324 ಮಂದಿ ಪೈಕಿ ಒಬ್ಬರಿಗೂ ಈವರೆಗೆ ಕೊರೊನಾ ವೈರಸ್ ಸೋಂಕು ಧೃಡಪಟ್ಟಿಲ್ಲ.
from India & World News in Kannada | VK Polls https://ift.tt/2GRAOHH