ದ್ರಾಕ್ಷಿ ನಾಡು ಚಿಕ್ಕಬಳ್ಳಾಪುರದಲ್ಲೇ ಇಲ್ಲ ದ್ರಾಕ್ಷಿ ರಸ ಸಂಸ್ಕರಣಾ ಘಟಕ!

- ಎಂ. ಕೃಷ್ಣಪ್ಪ, ಕೆಎನ್‌ಹಳ್ಳಿ ಸಿಲ್ಕ್‌, ಮಿಲ್ಕ್‌ ಜತೆಗೆ ದ್ರಾಕ್ಷಿ ನಾಡು ಎಂದು ಕರೆಯಲ್ಪಡುವ, ಸತತ ಬರಗಾಲದ ನಡುವೆಯೂ ಬಂಗಾರದಂತಹ ಬೆಳೆ ಬೆಳೆದು ರಾಜ್ಯಕ್ಕೆ ನೀಡುತ್ತಿರುವ ಜಿಲ್ಲೆಚಿಕ್ಕಬಳ್ಳಾಪುರದಲ್ಲಿ ಪ್ರತಿ ವರ್ಷವೂ ಸಾವಿರಾರು ಟನ್‌ ದ್ರಾಕ್ಷಿ ಬೆಳೆಯಲಾಗುತ್ತಿದೆ. ಆದರೆ, ಅದಕ್ಕೆ ಅಗತ್ಯವಾಗಿ ಬೇಕಾದ ದ್ರಾಕ್ಷಿ ಸಂಸ್ಕರಣಾ ಘಟಕ ಇಲ್ಲದಿರುವುದು ಸರಕಾರಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸುಮಾರು 1,500 ಅಡಿಯರೆಗೆ ಬೋರ್‌ ಕೊರೆದರೂ ನೀರು ಸಿಗದ ಪರಿಸ್ಥಿತಿಯಲ್ಲೂ ಈ ಭಾಗದ ರೈತರು ಅತ್ಯಂತ ಕಡಿಮೆ ನೀರಲ್ಲೂ ಹಣ್ಣು, ತರಕಾರಿಗಳ ಜತೆಗೆ ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆದು ಮಾದರಿಯಾಗಿದ್ದಾರೆ. ಆದರೆ, ಈ ರೈತರ ಬೆಳೆಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸಕ್ಕೆ ಮಾತ್ರ ಮಾನ್ಯತೆ ಸಿಗದಿರುವುದು ವಿಪರ್ಯಾಸ. ಬೇಡಿಕೆಯಾಗಿಯೇ ಉಳಿದ ಘಟಕ: ರಾಜ್ಯದಲ್ಲಿ ಇದುವರೆಗೂ ಹಲವು ಸರಕಾರಗಳು ಆಡಳಿತ ನಡೆಸಿದ್ದು, ಜಿಲ್ಲೆಯ ರೈತರ ಬಗ್ಗೆ ನಿರಾಸಕ್ತಿ ವಹಿಸಿವೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಕಳೆದ ನಾಲ್ಕೈದು ಬಜೆಟ್‌ಗಳ ಸಂದರ್ಭಗಳಲ್ಲಿ ಜಿಲ್ಲೆಗೆ ಆಗಮಿಸಿದ ಸಂಬಂಧಪಟ್ಟ ಇಲಾಖಾ ಸಚಿವರು ಸೇರಿದಂತೆ ಇತರೆ ಸಚಿವರು ಹೆಚ್ಚು ದ್ರಾಕ್ಷಿ ಬೆಳೆಯುವ ಈ ಜಿಲ್ಲೆಯಲ್ಲಿದ್ರಾಕ್ಷಿ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು ಎಂದು ಭರವಸೆ ಕೊಟ್ಟು ಹೋಗಿದ್ದರು. ಆದರೆ, ಅವರೆಲ್ಲರ ಭರವಸೆಗಳು ಹೇಳಿಕೆಗಳಿಗಷ್ಟೇ ಸೀಮಿತವಾಗಿರುವ ಪರಿಣಾಮ ಜಿಲ್ಲೆಯ ದ್ರಾಕ್ಷಿ ಬೆಳೆಗಾರರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು 2,967 ಹೆಕ್ಟೆರ್‌ ಪ್ರದೇಶದಲ್ಲಿ ಬೆಳೆ: ಜಿಲ್ಲೆಯಾದ್ಯಂತ ಒಟ್ಟು 2,967 ಹೆಕ್ಟೆರ್‌ ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ದ್ರಾಕ್ಷಿ ಬೆಳೆಯುವುದರಲ್ಲಿ ಚಿಕ್ಕಬಳ್ಳಾಪುರ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲೇ 1,825 ಹೆಕ್ಟೇರ್‌ಗಳಲ್ಲಿ ಈ ಬೆಳೆ ಬೆಳೆಯುತ್ತಿದ್ದರೆ, ಶಿಡ್ಲಘಟ್ಟ 1000, ಗೌರಿಬಿದನೂರು 64, ಗುಡಿಬಂಡೆಯಲ್ಲಿ 51, ಬಾಗೇಪಲ್ಲಿ 16 ಚಿಂತಾಮಣಿಯಲ್ಲಿ 11 ಹೆಕ್ಟೇರ್‌ ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಈ ಪೈಕಿ ದಿಲ್ಖುಷ್‌, ಬೆಂಗಳೂರು ಬ್ಲೂ, ಶರತ್‌, ಸರಿತಾ ಕೃಷ್ಣ, ರೆಡ್‌ಬ್ಲೂ ಮತ್ತಿತರ ತಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಈ ಭಾಗದಲ್ಲೇ ಬೆಳೆಯಲಾಗುತ್ತದೆ. ಶರತ್‌ ತಳಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ, ರೆಡ್‌ ಬ್ಲೂತಳಿಯನ್ನು ಫೆಬ್ರವರಿಯಲ್ಲಿ ಬೆಳೆಯಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಕೋಲ್ಡ್‌ ಸ್ಟೋರೇಜ್‌ ಅಗತ್ಯಜಿಲ್ಲೆಯಲ್ಲಿ ದ್ರಾಕ್ಷಿಯ ಜತೆಗೆ ಟೊಮೇಟೊ, ಆಲೂಗಡ್ಡೆ, ಹೂ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಬೆಳೆಗಳ ಸಂಸ್ಕರಣೆಗೆ ಅಗತ್ಯವಾಗಿ ಬೇಕಾದ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಲವು ರೈತ ಸಂಘಟನೆಗಳು ಸರಕಾರಕ್ಕೆ ಮನವಿ ಮಾಡಿವೆ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇದ್ಯಾವುದೂ ಆಗುತ್ತಿಲ್ಲ ಎಂಬುದು ಪ್ರಜ್ಞಾವಂತರ ಆರೋಪ. ದ್ರಾಕ್ಷಿ ಬೆಳೆ ಹವಾಮಾನ ಅವಲಂಬಿತ ಕೃಷಿ. ತೇವಾಂಶ ಇದ್ದರೆ ದ್ರಾಕ್ಷಿ ಬೇಗನೇ ಹಾಳಾಗುತ್ತದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಈ ಬೆಳೆಯ ನಿರ್ವಹಣೆಗಾಗಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣಾ ಘಟಕ ಆಗಬೇಕಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಚಿಂತನೆ ಮಾಡಬೇಕು. - ಆರ್‌.ಆಂಜನೇಯ ರೆಡ್ಡಿ, ದ್ರಾಕ್ಷಿ ಬೆಳೆಗಾರರು ಹಾಗೂ ಶಾಶ್ವತ ನೀರಾವರಿ ಹೋರಾಟಗಾರ, ಚಿಕ್ಕಬಳ್ಳಾಪುರ.


from India & World News in Kannada | VK Polls https://ift.tt/2Pm9rdv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...