ಜಮ್ಮು ಕಾಶ್ಮೀರ: ಮತ್ತೆ ನಾಲ್ವರು ರಾಜಕಾರಣೆಗಳಿಗೆ ಬಿಡುಗಡೆ ಭಾಗ್ಯ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಪ್ರಕ್ರಿಯೆ ನಂತರ ಮುಂಜಾಗೃತ ಕ್ರಮವಾಗಿ ಎಂಎಲ್‌ಎ ಹಾಸ್ಟೆಲ್‌ನಲ್ಲಿ ಬಂಧಿಸಿಟ್ಟಿದ್ದ ರಾಜಕಾರಣಿಗಳ ಪೈಕಿ ಇನ್ನೂ ನಾಲ್ವರನ್ನು ಭಾನುವಾರ ಸರಕಾರ ಬಿಡುಗಡೆಗೊಳಿಸಿದೆ. ಬಿಡುಗಡೆಯಾದವರಲ್ಲಿ ಮೂವರು ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಒಬ್ಬರು ಪಿಡಿಪಿ ಮುಖಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬ್ದುಲ್‌ ಮಜೀದ್‌ ಭಟ್‌ ಲರ್ನಿ, ಗುಲಾಂ ನಬಿ ಭಟ್‌, ಮೊಹಮ್ಮದ್‌ ಶಫಿ (ಎಲ್ಲರೂ ಎನ್‌ಸಿಪಿ ಮುಖಂಡರು) ಮತ್ತು ಪಿಡಿಪಿಯ ಮೊಹಮ್ಮದ್‌ ಯೂಸುಫ್‌ ಭಟ್‌ ಬಿಡುಗಡೆಗೊಂಡಿರುವ ಮುಖಂಡರು. ಸದ್ಯ ಬಿಡುಗಡೆಗೊಂಡಿರುವ ನಾಯಕರಿಗೆ ಸಭೆ ಸಮಾರಂಭಗಳಲ್ಲಿಪಾಲ್ಗೊಳ್ಳದಿರುವಂತೆ ಷರತ್ತು ವಿಧಿಸಲಾಗಿದೆ. ಕೆಲವು ದಿನಗಳವರೆಗೆ ಮನೆಯಿಂದ ಹೊರ ಹೋಗದಂತೆ ತಾಕೀತು ಮಾಡಲಾಗಿದೆ. ಕಳೆದ ವರ್ಷ ಆಗಸ್ಟ್‌ 5ರಂದು 370ನೇ ವಿಧಿ ರದ್ದುಗೊಳಿಸಿದ ತರುವಾಯ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಲು ಯತ್ನಿಸಿದ ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಎನ್‌ಸಿ ವರಿಷ್ಠ ಫಾರೂಕ್‌ ಅಬ್ದುಲ್ಲಾ, ಅವರ ಪುತ್ರ ಒಮರ್‌ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ಪೀಪಲ್ಸ್‌ ಕಾನ್ಫರೆನ್ಸ್‌ ಮುಖಂಡ ಸಜ್ಜಾದ್‌ ಗನಿ ಲೋನ್‌ ಇತರೆ ಬಂಧಿತ ಪ್ರಮುಖರಲ್ಲಿ ಸೇರಿದ್ದಾರೆ. ಇವರಿಗೆ ಇನ್ನೂ ಬಿಡುಗಡೆಯ ಭಾಗ್ಯ ಲಭಿಸಿಲ್ಲ.


from India & World News in Kannada | VK Polls https://ift.tt/2Uj2Tje

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...