ಕೆಎಲ್ ರಾಹುಲ್ ಟೀಮ್ ಇಂಡಿಯಾದ ಹೊಸ ಎಂಎಸ್ ಧೋನಿಯೇ?

ಮೌಂಟ್ ಮಾಂಗನುಯಿ: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಏಳು ರನ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್‌ಗೈದಿದೆ. ಸರಣಿಯುದ್ಧಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕರ್ನಾಟಕದ ಒಟ್ಟು 224 ರನ್ ಪೇರಿಸಿ ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು. ಅಂತಿಮ ಪಂದ್ಯದಲ್ಲೂ 45 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರಲ್ಲದೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ಜವಾಬ್ದಾರಿಯನ್ನು ವಹಿಸಿದ್ದರು. ವಿಕೆಟ್ ಕೀಪಿಂಗ್ ಹೊಣೆಯನ್ನು ಹೊತ್ತಿರುವ ಕೆಎಲ್ ರಾಹುಲ್, ಫರ್ಫೆಕ್ಟ್ ಟೀಮ್ ಪ್ಲೇಯರ್ ಎಂಬುದನ್ನು ನಿರೂಪಿಸಿದರು. ಈ ಮೂಲಕ ಅಭಿಮಾನಿಗಳಿಂದ ಭವಿಷ್ಯದ ಮಹೇಂದ್ರ ಸಿಂಗ್ ಧೋನಿ ಎಂಬ ಮೆಚ್ಚುಗೆಗೂ ಪಾತ್ರವಾಗಿದ್ದಾರೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ರಾಹುಲ್, ''ಸದ್ಯ ಟಿ20 ವಿಶ್ವಕಪ್ ಬಗ್ಗೆ ಯಾವುದೇ ಯೋಚನೆಗಳಿಲ್ಲ. ನಿರ್ದಿಷ್ಟ ಸರಣಿಯತ್ತ ಮಾತ್ರ ಗಮನ ಹರಿಸಲಾಗಿದೆ'' ಎಂದಿದ್ದಾರೆ. ''5-0 ಅಂತರದ ಗೆಲುವು ನಿಜಕ್ಕೂ ಸಂತಸ ತಂದಿದೆ. ತಂಡದ ಪ್ರದರ್ಶನದ ಬಗ್ಗೆ ಸಂತೃಪ್ತಿಯಿದೆ. ಈ ಸರಣಿಯಲ್ಲಿ ಭಾಗವಹಿಸಲು ಅತ್ಯಂತ ಆತ್ಮವಿಶ್ವಾಸದಿಂದ ಇಲ್ಲಿಗೆ ಆಗಮಿಸಿದ್ದು, ಪ್ರತಿ ಪಂದ್ಯದಲ್ಲೂ ಸಾಮರ್ಥ್ಯವನ್ನು ಹೊರಗೆಡವಲು ಸಾಧ್ಯವಾಗಿರುವುದು ಖುಷಿ ತಂದಿದೆ'' ಎಂದರು. ''ಪ್ರತಿಯೊಂದು ಪರಿಸ್ಥಿತಿಗೂ ನಮ್ಮ ಬಳಿ ಉತ್ತರವಿತ್ತು. ನನ್ನ ಹಾಗೂ ತಂಡದ ಪಾಲಿಗೆ ಉತ್ತಮ ಫಲಿತಾಂಶ ದಾಖಲಿಸಿದ್ದೇವೆ. ನಾನೀಗ ಉತ್ತಮವಾಗಿ ಆಡುತ್ತಿದ್ದು, ತಂಡಕ್ಕಾಗಿ ಹೊತ್ತುಕೊಂಡಿರುವ ಜವಾಬ್ದಾರಿ ಬಗ್ಗೆ ಸಂತಸವಿದೆ. ಸದ್ಯಕ್ಕೆ ಟಿ20 ವಿಶ್ವಕಪ್ ಬಗ್ಗೆ ಚಿಂತಿಸುತ್ತಿಲ್ಲ. ಇದೇ ರೀತಿಯ ಪ್ರದರ್ಶನ ಮುಂದುವರಿಸುವ ನಂಬಿಕೆಯಿದೆ'' ಎಂದರು. ಅದೇ ಹೊತ್ತಿಗೆ ಟೀಮ್ ಇಂಡಿಯಾ ಗೆಲುವಿನ ಹವ್ಯಾಸವನ್ನು ರೂಢಿಸಿಕೊಂಡಿದೆ ಎಂಬುದನ್ನು ಉಲ್ಲೇಖಿಸಿದರು. ''ಪ್ರತಿ ಬಾರಿಯೂ ಮೈದಾನಕ್ಕಿಳಿದಾಗ ಗೆಲುವಿನ ಹವ್ಯಾಸವನ್ನು ರೂಢಿಸಿಕೊಂಡಿದ್ದೇವೆ. ಒಂದು ತಂಡವಾಗಿ ಪರಸ್ಪರ ನಂಬಿಕೆಯನ್ನಿರಿಸಿದ್ದೇವೆ'' ಎಂದು ಸೇರಿಸಿದರು. ರೋಹಿತ್ ಶರ್ಮಾ ಗಾಯಗೊಂಡಿರುವುದು ದುರದೃಷ್ಟ. ಮುಂದಿನ ಎರಡು ದಿನಗಳಲ್ಲಿ ಚೇತರಿಕೆ ಹೊಂದುವ ವಿಶ್ವಾಸವಿದೆ ಎಂದು ನುಡಿದರು. ಏತನ್ಮಧ್ಯೆ ಮುಂಬರುವ ವಿಶ್ವಕಪ್ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ಪ್ರಯೋಗ ಮಾಡುವುದಾಗಿ ತಿಳಿಸಿದರು. ಈ ಮೂಲಕ ಮತ್ತಷ್ಟು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವ ಗುರಿಯನ್ನಿರಿಸಿದ್ದೇವೆ ಎಂದರು. ಒಂದೆರಡು ದಿನ ವಿಶ್ರಾಂತಿ ಪಡೆದು ನಮ್ಮ ಗೆಲುವನ್ನು ಆಚರಿಸಲಿದ್ದೇವೆ. ತದಾ ಬಳಿಕ ಮುಂದಿನ ಸರಣಿಗೆ ಸಜ್ಜಾಗಲಿದ್ದೇವೆ. ಪ್ರಕ್ರಿಯೆ ಸಮಾನವಾಗಿರಲಿದೆ. ಪ್ರತಿ ಬಾರಿಯೂ ಗೆಲ್ಲುವ ಹಂಬಲ ಹೊಂದಿದ್ದೇವೆ ಎಂದು ಸೇರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/392NFTy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...