ದಿಲ್ಲಿ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯಲ್ಲೇನಿದೆ?

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 'ನ್ಯಾಯ್‌' ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ. ಪಕ್ಷದ 'ಐಸಿ ಹೋಗಿ ಹಮಾರಿ ದಿಲ್ಲಿ' (ಹೀಗಿರುತ್ತದೆ ನಮ್ಮ ದಿಲ್ಲಿ) ಅನ್ನು ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸುಭಾಷ್‌ ಚೋಪ್ರಾ, ಪಕ್ಷದ ಮುಖಂಡರಾದ ಅಜಯ್‌ ಮಾಕೇನ್‌, ಪ್ರೊ.ರಾಜೀವ್‌ ಗೌಡ, ಶರ್ಮಿಷ್ಠಾ ಮುಖರ್ಜಿ ಭಾನುವಾರ ಬಿಡುಗಡೆ ಮಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ಭರವಸೆಯಾಗಿದ್ದ 'ನ್ಯಾಯ್‌' (ನ್ಯೂನತಮ್‌ ಆಯ್‌ ಯೋಜನಾ- ಕನಿಷ್ಠ ಆದಾಯ ಯೋಜನೆ) ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ. ಇದರಂತೆ ಅಧಿಕಾರಕ್ಕೆ ಬಂದರೆ ದಿಲ್ಲಿಯ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಪದವೀಧರರಿಗೆ ಪ್ರತಿ ತಿಂಗಳು 5,000 ರೂ. ಹಾಗೂ ಸ್ನಾತಕೋತ್ತರ ಪದವೀಧರರಿಗೆ 7,500 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಪಕ್ಷ ಆಶ್ವಾಸನೆ ನೀಡಿದೆ. ದಿಲ್ಲಿ ವಿಧಾನಸಭೆಗೆ ಫೆ.8ರಂದು ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಕಳೆದ ವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಎರಡು ರೂಪಾಯಿಗೆ ಒಂದು ಕೆ.ಜಿ ಹಿಟ್ಟು ನೀಡುವುದಾಗಿ ಮತ್ತು ಶುದ್ಧ ನೀರು ಪೂರೈಕೆ, ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡುವುದಾಗಿ ಘೋಷಿಸಿದೆ. ಆಡಳಿತಾರೂಢ ಆಮ್‌ ಆದ್ಮಿ ಪಾರ್ಟಿ ಇನ್ನೂ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಪ್ರಣಾಳಿಕೆಯ ಇತರ ಅಂಶಗಳು - 300 ಯೂನಿಟ್‌ವರೆಗೆ ಎಲ್ಲರಿಗೂ ಉಚಿತ ವಿದ್ಯುತ್‌ - ಕಡಿಮೆ ನೀರು, ವಿದ್ಯುತ್‌ ಬಳಸುವವರಿಗೆ ಕ್ಯಾಶ್‌ಬ್ಯಾಕ್‌ ಸೌಲಭ್ಯ - 100 ಇಂದಿರಾ ಕ್ಯಾಂಟೀನ್‌ ತೆರೆದು 15 ರೂ.ಗೆ ಊಟ ಪೂರೈಕೆ - ಆರು ತಿಂಗಳಲ್ಲಿಲೋಕಪಾಲರ ನೇಮಕ - ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ಹೋರಾಟ - ದಿಲ್ಲಿಮೆಟ್ರೋದಲ್ಲಿಹಿರಿಯ ನಾಗರಿಕರು, ಮಹಿಳೆಯರಿಗೆ ಪ್ರಯಾಣ ರಿಯಾಯಿತಿ - ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳು 3000 ರೂ. ಸಾರಿಗೆ ಸಹಾಯಧನ ಜಮಾ - ಪ್ರತಿವರ್ಷ ಬಜೆಟ್‌ನ ಶೇ.25ರಷ್ಟು ಮೊತ್ತ ಮಾಲಿನ್ಯ ನಿಯಂತ್ರಣ ಹಾಗೂ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಮೀಸಲು


from India & World News in Kannada | VK Polls https://ift.tt/3b4VWs6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...