ಯೋಗಿ ನಾಡಲ್ಲಿ ಹೈ ಸೆಕ್ಯುರಿಟಿ ಪ್ರದೇಶದಲ್ಲೇ ಹಿಂದೂ ಮುಖಂಡನ ಹತ್ಯೆ: ನಾಲ್ವರು ಪೊಲೀಸರು ಸಸ್ಪೆಂಡ್

(): ಉತ್ತರಪ್ರದೇಶದ ರಾಜಧಾನಿಯಲ್ಲಿ ಭಾರಿ ಬಿಗಿಭದ್ರತೆ ಇರುವ ಶಾಸಕಾಂಗ ಕಟ್ಟಡ ಸಮೀಪದಲ್ಲಿಯೇ ಹಿಂದೂ ಸಂಘಟನೆಯ ಸಂಸ್ಥಾಪಕರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಸಂಘಟನೆ ಮುಖ್ಯಸ್ಥ ರಂಜಿತ್‌ ಬಚ್ಚನ್‌ (40) ಹತ್ಯೆಗೀಡಾದವರು. ಬೆಳಗಿನ ವಾಯು ವಿಹಾರಕ್ಕೆಂದು ಜನನಿಬಿಡ ಹಜ್ರತ್‌ಗಂಜ್‌ ಮಾರುಕಟ್ಟೆ ಸಮೀಪದ ಪಾರ್ಕ್‌ಗೆ ತೆರಳಿದ್ದ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ನಡೆದುಕೊಂಡು ರಂಜಿತ್‌ ಅವರ ಬಳಿ ಬಂದ ದುಷ್ಕರ್ಮಿ, ರಂಜಿತ್‌ ಅವರ ಮೊಬೈಲ್‌ ಕಿತ್ತುಕೊಂಡು ನಂತರ ಅವರ ಮೇಲೆ ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾದರು ಎಂದು ಘಟನೆ ವೇಳೆ ರಂಜಿತ್‌ ಜತೆಗಿದ್ದ ಅವರ ಸೋದರ ಸಂಬಂಧಿ ಆದಿತ್ಯ ಶ್ರೀವಾತ್ಸವ್‌ ತಿಳಿಸಿದ್ದಾರೆ. ತಲೆಗೆ ಗುಂಡೇಟು ಬಿದ್ದಿದ್ದರಿಂದ ರಂಜಿತ್‌ ಸ್ಥಳದಲ್ಲೇ ಮೃತಪಟ್ಟರು. ರಂಜಿತ್ ಸಂಬಂಧಿ ಶ್ರೀವಾತ್ಸವ್‌ ಅವರ ಕೈಗೂ ಗುಂಡು ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಗೆ ದುಷ್ಕರ್ಮಿಗಳು ಬಳಸಿದ ಗುಂಡನ್ನು ವಶಕ್ಕೆ ಪಡೆಯಲಾಗಿದೆ. ಅವು ಬಿಹಾರದ ಮುಂಗೇರ್‌ನಲ್ಲಿ ತಯಾರಿಸಲಾದ ಗುಂಡುಗಳು ಎಂದು ಪೊಲೀಸರು ತಿಳಿಸಿದ್ದಾರೆ. ರಂಜಿತ್‌ ಬಚ್ಚನ್‌ ಬಲಪಂಥೀಯ ಸಂಘಟನೆ ಸ್ಥಾಪಿಸುವ ಮೊದಲು ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಸಬ್‌ ಇನ್ಸ್‌ಪೆಕ್ಟರ್‌ ಸೇರಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಹಜ್ರತ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜ್ಯ ಸರಕಾರ ತನಿಖೆಗೆ ಆದೇಶ ನೀಡಿದೆ. ಆರು ಪೊಲೀಸ್‌ ತಂಡಗಳಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಬಲಪಂಥೀಯ ಹಿಂದೂ ಸಂಘಟನೆ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿರುವುದು ಇತ್ತೀಚಿನ ತಿಂಗಳಲ್ಲಿ ಇದು ಎರಡನೇ ಬಾರಿ. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಹಿಂದೂ ಸಮಾಜ ಪಕ್ಷದ ಅಧ್ಯಕ್ಷ ಕಮಲೇಶ್‌ ತಿವಾರಿ ಅವರನ್ನು ಅವರ ನಿವಾಸದಲ್ಲಿಯೇ ಗುಂಡಿಕ್ಕಿ ನಂತರ ಚಾಕುವಿನಿಂದ 15 ಬಾರಿ ತಿವಿದು ಕೊಲೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಈ ಇಬ್ಬರು ಆರೋಪಿಗಳು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಕಲಹದ ಶಂಕೆ: ಹತ್ಯೆಗೀಡಾದ ರಂಜಿತ್‌ ಅವರಿಗೆ ಇಬ್ಬರು ಪತ್ನಿಯರು. ಅವರ ಮೊದಲ ಪತ್ನಿ ಕಲಿಂದಿ ಶರ್ಮಾ ಬಚ್ಚನ್‌ ಜತೆ ವಾಸವಾಗಿದ್ದರು. ಎರಡನೇ ಪತ್ನಿಗೆ ಮೂರು ವರ್ಷದ ಮಗಳಿದ್ದಾಳೆ. ಈ ವಿಷಯದಲ್ಲಿ ಇವರ ನಡುವೆ ಕೌಟುಂಬಿಕ ಕಲಹ ಇತ್ತು. ಎರಡನೇ ಪತ್ನಿ ಆಸ್ತಿ ಪಾಲಿಗಾಗಿ ಹಠ ಮಾಡುತ್ತಿದ್ದರು. ನಾದಿನಿ ಕೂಡ 2017ರಲ್ಲಿ ರಂಜಿತ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಎಲ್ಲ ಗೊಂದಲಗಳು ಇರುವುದರಿಂದ ಕೊಲೆ ನಡೆದಿರಬಹುದೇ ಎನ್ನುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


from India & World News in Kannada | VK Polls https://ift.tt/2uWhs1H

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...