ಅಜಿತ್‌ Vs ಶರದ್‌ ಪವಾರ್‌ ಪಾಲಿಟಿಕ್ಸ್‌: ಚಿಕ್ಕಪ್ಪ ಮತ್ತು ಅಣ್ಣನ ಮಗನ ನಡುವಿನ ರಾಜಕೀಯ ಮೇಲಾಟ!

ಮುಂಬಯಿ: ಮಹಾರಾಷ್ಟ್ರ ರಾಜಕೀಯ ಬಿರುಗಾಳಿಯ ಸೂತ್ರಧಾರ ಅವರು ಭಾನುವಾರ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಈಗಲೂ ತಾವು ಎನ್‌ಸಿಪಿ ಜತೆ ಇರುವುದಾಗಿ ಸಮರ್ಥನೆ ನೀಡಿದ್ದಾರೆ. ಇದಕ್ಕೆ ಕೂಡಲೇ ತಿರುಗೇಟು ಕೊಟ್ಟಿರುವ ಎನ್‌ಸಿಪಿ ವರಿಷ್ಠ , ಅಜಿತ್‌ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಎನ್‌ಸಿಪಿ -ಬಿಜೆಪಿ ಮೈತ್ರಿ ಸಾಧ್ಯವಿಲ್ಲ ಎಂದು ಸಂದೇಶ ರವಾನಿಸಿದ್ದಾರೆ. ಚಿಕ್ಕಪ್ಪ ಮತ್ತು ಅಣ್ಣನ ಮಗನ ನಡುವಿನ ರಾಜಕೀಯ ಮೇಲಾಟ ಮಹಾರಾಷ್ಟ್ರದ ಜನರನ್ನು ಪ್ರತಿಕ್ಷಣ ಕುತೂಹಲಕ್ಕೆ ದೂಡುತ್ತಿದೆ. ಅಜಿತ್‌ ಪವಾರ್‌ ಹೇಳಿದ್ದೇನು?
  • ನಾನು ಎನ್‌ಸಿಪಿ ಶಾಸಕ. ಈಗಲೂ ಎನ್‌ಸಿಪಿಯಲ್ಲಿಯೇ ಇದ್ದೇನೆ.
  • ನಮ್ಮ ನಾಯಕರು ಶರದ್‌ ಪವಾರ್‌ ಸಾಹೇಬರು.
  • ಮುಂದಿನ ಐದು ವರ್ಷಗಳವರೆಗೆ ಎನ್‌ಸಿಪಿ-ಬಿಜೆಪಿ ಮೈತ್ರಿ ಸರಕಾರ ಸ್ಥಿರ ಆಡಳಿತ ನೀಡಲಿದೆ.
  • ಕಾರ್ಯಕರ್ತರು, ಜನರು ಆತಂಕಪಡುವ ಅಗತ್ಯವಿಲ್ಲ, ಎಲ್ಲವೂ ಶೀಘ್ರವೇ ಸರಿದಾರಿಗೆ ಬರಲಿದೆ
ಶರದ್‌ ಪವಾರ್‌ ಗುಡುಗಿದ್ದೇನು?
  • ಬಿಜೆಪಿ ಜತೆಗೆ ಮೈತ್ರಿ ಅಸಾಧ್ಯ.
  • ಅಜಿತ್‌ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.
  • ಸರ್ವಾನುಮತದಿಂದ ಎನ್‌ಸಿಪಿ ಶಾಸಕರು ಶಿವಸೇನೆ, ಕಾಂಗ್ರೆಸ್‌ ಜತೆಹೋಗಲು ನಿರ್ಧರಿಸಿದ್ದೇವೆ.
  • ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬಹುಮತ ಇದೆ. ಸ್ಥಿರ ಸರಕಾರ ನಮ್ಮಿಂದ ಮಾತ್ರ ಸಾಧ್ಯ.
ಮೋದಿಗೆ ಅಜಿತ್‌ ಪವಾರ್‌ ಧನ್ಯವಾದಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎನ್‌ಸಿಪಿ ಹಿರಿಯ ನಾಯಕ ಅಜಿತ್‌ ಪವಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಟ್ವಿಟರ್‌ನಲ್ಲಿನ ತಮ್ಮ ಅಧಿಕೃತ ಖಾತೆಯಲ್ಲಿ,'' ಮೋದಿ ಜೀ ಅವರೇ ನಿಮಗೆ ಧನ್ಯವಾದ. ರಾಜ್ಯದಲ್ಲಿ ಸ್ಥಿರ ಸರಕಾರ ನೀಡಲು ನಾವು ಬದ್ಧರಾಗಿದ್ದೇವೆ. ಮಹಾರಾಷ್ಟ್ರ ಜನತೆಯ ಆಶಯಗಳ ಈಡೇರಿಕೆಗೆ ಶ್ರಮಿಸುತ್ತೇವೆ. ಗೃಹ ಸಚಿವ ಅಮಿತ್‌ ಶಾ, ನಿತಿನ್‌ ಗಡ್ಕರಿ ಅವರಿಗೂ ಧನ್ಯವಾದ ಅರ್ಪಿಸುತ್ತೇನೆ , '' ಎಂದಿದ್ದಾರೆ. ಪವಾರ್‌ ಕರೆ ಕಸರತ್ತುಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ತಮ್ಮ ಪಕ್ಷದ ಹಿರಿಯ ನಾಯಕರಾದ ಜಯಂತ್‌ ಪಾಟೀಲ್‌ ಮತ್ತು ದಿಲೀಪ್‌ ವಲ್ಸೆ ಅವರ ಮೂಲಕ ಅಜಿತ್‌ ಪವಾರ್‌ ಅವರಿಗೆ ಕರೆ ಮಾಡಿಸಿದ್ದಾರೆ. ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಮನವಿ ಮಾಡಿದರು. ಅದರೆ ಇದನ್ನು ಅಜಿತ್‌ ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ-ಎನ್‌ಸಿಪಿ, ಶಿವಸೇನೆ ಸಭೆಎನ್‌ಸಿಪಿ ಶಾಸಕರನ್ನು ಇರಿಸಲಾಗಿರುವ ಪೊವಾಯಿಯಲ್ಲಿನ ರೆನಾಯ್ಸನ್ಸ್‌ ಹೋಟೆಲ್‌ಗೆ ಭಾನುವಾರ ಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಭೇಟಿ ನೀಡಿ ಸಭೆ ನಡೆಸಿದರು. ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ, ಶರದ್‌ ಪುತ್ರಿ ಸುಪ್ರಿಯಾ ಸುಳೆ, ಶಿವಸೇನೆ ನಾಯಕ ಸಂಜಯ್‌ ರಾವತ್‌ ಕೂಡ ಈ ಸಭೆಯಲ್ಲಿ ಪಾಲ್ಗೊಂಡರು. ಸುಪ್ರೀಂಕೋರ್ಟ್‌ನಲ್ಲಿ ಬಿಜೆಪಿ -ಅಜಿತ್‌ ನೀಡುವ ಬೆಂಬಲಿಗರ ಪಟ್ಟಿ, ನಂತರದ ಬೆಳವಣಿಗೆ, ಕುದುರೆ ವ್ಯಾಪಾರಕ್ಕೆ ಬಿಜೆಪಿ ಒಡ್ಡಬಹುದಾದ ಆಮಿಷಗಳ ಬಗ್ಗೆ ಶಾಸಕರಿಗೆ ಉಭಯ ನಾಯಕರು ಎಚ್ಚರಿಸಿದರು ಎಂದು ತಿಳಿದುಬಂದಿದೆ. ನಮ್ಮ ಮೈತ್ರಿ ಮುಂದೆಯೂ ಹೀಗೆ ಇರಲಿದೆ ಎಂದು ಎನ್‌ಸಿಪಿ ಶಾಸಕರಿಗೆ ಉದ್ಧವ್‌ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಶಾಸಕಾಂಗ ಸಭೆ, ಪಕ್ಷೇತರರಿಗೆ ಗಾಳಭಾನುವಾರ ಬಿಜೆಪಿ ಶಾಸಕರು ಸಿಎಂ ದೇವೇಂದ್ರ ಫಡ್ನವಿಸ್‌ ಅವರೊಂದಿಗೆ ಮುಂಬಯಿನ ಕಚೇರಿಯಲ್ಲಿಸಭೆ ನಡೆಸಿದ್ದು, ವಿಶ್ವಾಸ ಮತ ಗೆಲ್ಲಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಸಭೆಯಲ್ಲಿಶಾಸಕರು ನಿರ್ಣಯವನ್ನು ಕೈಗೊಂಡು ಸಿಎಂ ಫಡ್ನವಿಸ್‌ ಅವರಿಗೆ ಎರಡನೇ ಅವಧಿಗೆ ಸರಕಾರ ರಚಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಬಾಳ ಠಾಕ್ರೆ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡು ಶಿವಸೇನೆ ದೊಡ್ಡ ಪಾಪ ಮಾಡಿದೆ ಎಂದು ಸಭೆಯಲ್ಲಿ ಬಿಜೆಪಿ ಶಾಸಕರು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಪಕ್ಷೇತರರಿಗೆ ಗಾಳ: ಪಕ್ಷೇತರರೊಂದಿಗೂ ಸಿಎಂ ಫಡ್ನವಿಸ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಪ್ರತ್ಯೇಕ ಸಭೆ ನಡೆಸಿ, ವಿಶ್ವಾಸಮತ ಯಾಚನೆ ವೇಳೆ ಬೆಂಬಲಿಸಲು ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕಾಂಗ ನಾಯಕನ ಸ್ಥಾನದಿಂದ ಅಜಿತ್‌ರನ್ನು ಕಿತ್ತೊಗೆದಿರುವುದು ಅಮಾನ್ಯ. ಅಜಿತ್‌ಗೆ ಕೊಕ್‌ ನೀಡಲು ಎನ್‌ಸಿಪಿ ನಡೆಸಿದ ಸಭೆಯಲ್ಲಿ ಎಲ್ಲ ಶಾಸಕರು ಹಾಜರಿರಲಿಲ್ಲ. - ಆಶೀಶ್‌ ಶೆಲಾರ್‌, ಬಿಜೆಪಿ ನಾಯಕ 50 ಶಾಸಕರು ಸದ್ಯ ನಮ್ಮೊಂದಿಗೆ ಹೋಟೆಲ್‌ನಲ್ಲಿ ಇದ್ದಾರೆ. ಆದರೆ 4 ಶಾಸಕರನ್ನು ಬಿಜೆಪಿಯವರು ಗೌಪ್ಯ ಸ್ಥಳದಲ್ಲಿ ಇರಿಸಿದ್ದಾರೆ. ಅವರನ್ನು ಕೂಡ ನಾವು ಸಂಪರ್ಕಿಸಿದ್ದೇವೆ. - ನವಾಬ್‌ ಮಲಿಕ್‌, ಎನ್‌ಸಿಪಿ ವಕ್ತಾರ ಈಗೀಗ ನನಗೆ ಅನಿಸುತ್ತಿದೆ. ರಾಜ್ಯಪಾಲರು ಯಾರ ಕಡೆಯವರಿರುತ್ತಾರೊ ರಾಜ್ಯದಲ್ಲಿ ಅವರದ್ದೇ ಸರಕಾರ ರಚನೆಯಾಗುತ್ತದೆ. - ಅಖಿಲೇಶ್‌ ಯಾದವ್‌, ಎಸ್‌ಪಿ ಮುಖ್ಯಸ್ಥ ಆತ್ಮಹತ್ಯೆಗೆ ಯತ್ನಿಸಿದ ಶಿವಸೇನೆ ಬೆಂಬಲಿಗಸರಕಾರ ರಚನೆಗೆ ತ್ರಿಮೈತ್ರಿ ಮತ್ತು ಬಿಜೆಪಿಯಿಂದ ಕಸರತ್ತು ನಡೆಯುತ್ತಿರುವ ನಡುವೆಯೇ ಭಾನುವಾರ ವಾಸೀಮ್‌ ಜಿಲ್ಲೆಯ ಉಮರಿ ಗ್ರಾಮದ ನಿವಾಸಿ ರಮೇಶ್‌ ಬಾಲು ಯಾದವ್‌ ಎನ್ನುವವರು ರಸ್ತೆ ಮಧ್ಯೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಿವಸೇನೆಯ ಕಟ್ಟಾ ಬೆಂಬಲಿಗರಾದ ರಮೇಶ್‌ ಅವರು ಉದ್ಧವ್‌ ಠಾಕ್ರೆಗೆ ಸಿಎಂ ಸ್ಥಾನ ತಪ್ಪಿತು ಎಂದು ಬೇಸರಗೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ರಮೇಶ್‌ ಅವರು ಬ್ಲೇಡ್‌ನಿಂದ ಕೈಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 165 ಶಾಸಕರ ಬೆಂಬಲ ಇದೆ ಎಂದ ರಾವತ್‌ ಅಜಿತ್‌ ಪವಾರ್‌ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಅಧಿಕಾರ ಹಿಡಿಯುವ ತಂತ್ರ ವಿಫಲವಾಗಲಿದೆ. ಎನ್‌ಸಿಪಿ-ಕಾಂಗ್ರೆಸ್‌-ಶಿವಸೇನೆ ತ್ರಿಮೈತ್ರಿಗೆ ಒಟ್ಟು 165 ಶಾಸಕರ ಬೆಂಬಲವಿದೆ ಎಂದು ಶಿವಸೇನೆ ಮುಖಂಡ ಸಂಜಯ್‌ ರಾವತ್‌ ವಿಶ್ವಾಸವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಜಿತ್‌ ಪವಾರ್‌ ನೀಡಿದ ನಕಲಿ ದಾಖಲೆಗಳ ಆಧಾರದ ಮೇಲೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನ.30ರವರೆಗೆ ರಾಜ್ಯಪಾಲರು ನೀಡಿರುವ ಸಮಯಾವಕಾಶ ಪಕ್ಷಾಂತರಕ್ಕಾಗಿಯೇ ಆಗಿದೆ. ಶರದ್‌ ಪವಾರ್‌ ಅವರನ್ನು ತೊರೆದು ತಮ್ಮ ಜೀವನದಲ್ಲಿಅತಿದೊಡ್ಡ ತಪ್ಪನ್ನು ಅಜಿತ್‌ ಮಾಡಿದ್ದಾರೆ. ಮಹಾರಾಷ್ಟ್ರದ ಇತಿಹಾಸದಲ್ಲಿನ.23 ಕರಾಳ ದಿನವಾಗಿ ಉಳಿಯಲಿದೆ ಎಂದು ರಾವತ್‌ ಗುಡುಗಿದ್ದಾರೆ. ರಾಜ್ಯಪಾಲರು ಆಹ್ವಾನ ನೀಡಿದರೆ 10 ನಿಮಿಷಗಳಲ್ಲಿಬೆಂಬಲಿತ ಶಾಸಕರ ಪರೇಡ್‌ ನಡೆಸಿ ಬಹುಮತ ಸಾಬೀತುಪಡಿಸುತ್ತೇವೆ. - ಸಂಜಯ್‌ ರಾವತ್‌, ಶಿವಸೇನೆ ಮುಖಂಡ ಸದ್ಯ ರಾಜ್ಯದಲ್ಲಿರುವ ಫಡ್ನವಿಸ್‌-ಅಜಿತ್‌ ಸರಕಾರ ಕಾನೂನುಬಾಹಿರವಾದದ್ದು. ಇದನ್ನು ಪರಿಹರಿಸಲು ಇರುವ ಒಂದೇ ಮಾರ್ಗವೆಂದರೆ ' ವಿಶ್ವಾಸಮತ ಯಾಚನೆ '. ಆದರೆ ಬಿಜೆಪಿ ವಿಶ್ವಾಸಮತ ಸಾಬೀತು ಪಡಿಸುವ ಬದಲು ತಪ್ಪಿಸಿಕೊಂಡು ಓಡುತ್ತಿದೆ. - ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ ಪದಚ್ಯುತಿ ಬಗ್ಗೆ ರಾಜ್ಯಪಾಲರಿಗೆ ಮಾಹಿತಿಬಿಜೆಪಿ ಜತೆಗೆ ಕೈಜೋಡಿಸಿರುವ ಎನ್‌ಸಿಪಿ ಹಿರಿಯ ನಾಯಕ ಅಜಿತ್‌ ಪವಾರ್‌ ಅವರನ್ನು ಪಕ್ಷದ ಶಾಸಕಾಂಗ ನಾಯಕ ಸ್ಥಾನದಿಂದ ಕಿತ್ತೊಗೆದಿರುವುದಾಗಿ ರಾಜ್ಯಪಾಲರಿಗೆ ಎನ್‌ಸಿಪಿ ಪಕ್ಷದಿಂದ ಮಾಹಿತಿ ರವಾನಿಸಿಲಾಗಿದೆ. ಅಜಿತ್‌ ಸ್ಥಾನಕ್ಕೆ ಜಯಂತ್‌ ಪಾಟೀಲ್‌ ಅವರನ್ನು ನೇಮಕ ಮಾಡಿದ್ದೇವೆ ಎಂಬ ಅಧಿಕೃತ ಪತ್ರವನ್ನು ರಾಜಭವನಕ್ಕೆ ತಲುಪಿಸಿರುವುದಾಗಿ ಪಕ್ಷದ ನಾಯಕರು ಹೇಳಿದ್ದಾರೆ. ಭಾನುವಾರ ರಾಜ್ಯಪಾಲರು ಮುಂಬಯಿನಲ್ಲಿಇರಲಿಲ್ಲಎನ್ನುವುದು ತಿಳಿದುಬಂದಿದೆ.


from India & World News in Kannada | VK Polls https://ift.tt/37yHc2W

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...