ಮಹಾರಾಷ್ಟ್ರದ ಯಡಿಯೂರಪ್ಪ ಆದ ಫಡ್ನವಿಸ್‌, ಕುಮಾರಸ್ವಾಮಿಯಾದ ಅಜಿತ್‌ ಪವಾರ್: 15 ವರ್ಷಗಳ ಬಳಿಕ ಮರುಕಳಿಸಿದ ಇತಿಹಾಸ!

ಅಶ್ವಿನ್‌ ಬಾಣೂರುಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಕಳೆದೊಂದು ತಿಂಗಳಿನಿಂದ ನಡೆದ ಹೈಡ್ರಾಮಾಗೆ ವಿಚಿತ್ರ ತಿರುವು ಸಿಕ್ಕಿದ್ದು, ದೇವೇಂದ್ರ ಫಡ್ನವಿಸ್‌ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಹುಮತ ಇಲ್ಲದ ಬಿಜೆಪಿಯ ಅಧಿಕಾರದ ಆಸೆಗೆ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ನೀರೆರೆದಿದ್ದಾರೆ. ಈ ಮೂಲಕ ಶಿವಸೇನೆಗೆ ತೀವ್ರ ಮುಖಭಂಗವಾಗಿದ್ದು, ಬಿಜೆಪಿಯನ್ನು ಬದಿಗಿಟ್ಟು ಸರಕಾರ ರಚಿಸುವ ಆಸೆಗೆ ಮುಖಭಂಗವಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಮಹಾರಾಷ್ಟ್ರದ ಇಂದಿನ ರಾಜಕೀಯಕ್ಕೂ ಕರ್ನಾಟಕದ 2004ರ ವಿಧಾನಸಭೆ ಚುನಾವಣೆ ಬಳಿಕ ನಡೆದ ರಾಜಕೀಯ ಬೆಳವಣಿಗೆಗೂ ಹೆಚ್ಚಿನ ಸಾಮ್ಯತೆಗಳಿವೆ. ಕರ್ನಾಟಕದಲ್ಲಿ 2004 ರಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಆ ವೇಳೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಯಾವ ಪಕ್ಷಕ್ಕೂ ಬಹುಮತ ದೊರೆತಿರಲಿಲ್ಲ. ಇದೇ ರೀತಿ ಮಹಾರಾಷ್ಟ್ರದಲ್ಲೂ 2019 ರ ಅಕ್ಟೋಬರ್‌ನಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತಾದರೂ ಬಹುಮತ ದೊರೆತಿಲ್ಲ. ಅಂದು ರಾಜ್ಯದಲ್ಲಿ ಕಾಂಗ್ರೆಸ್‌ - ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾಯ್ತು. ಸಿಎಂ ಆಗಿ ಅಂದಿನ ಕಾಂಗ್ರೆಸ್ ನಾಯಕ ಧರಂ ಸಿಂಗ್‌ ಆಯ್ಕೆಯಾದರು. ಆದರೆ, ಆ ಸರಕಾರ ಹೆಚ್ಚು ಕಾಲ ಬಾಳಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಹಾಗೂ ಸಿಎಂ ಯಡಿಯೂರಪ್ಪ ಸುಮ್ಮನೆ ಕೂರಲಿಲ್ಲ. ಜೆಡಿಎಸ್‌ ನಾಯಕ ಕುಮಾರಸ್ವಾಮಿಯ ಬೆಂಬಲ ಪಡೆದು 20 - 20 ಸರಕಾರ ರಚಿಸಿಯೇ ಬಿಟ್ಟರು. ಅಲ್ಲದೆ, ಕುಮಾರಸ್ವಾಮಿಗೇ ಮೊದಲು ಮುಖ್ಯಮಂತ್ರಿಯಾಗುವ ಅವಕಾಶವನ್ನೂ ನೀಡಿದರು. ಇದೇ ರೀತಿ, ಮಹಾರಾಷ್ಟ್ರದಲ್ಲೂ ಕೇಸರಿ ಪಕ್ಷದೊಂದಿಗಿನ ಮೈತ್ರಿಯನ್ನು ಕಡಿತಗಳಿಸಿ ಎನ್‌ಸಿಪಿ - ಕಾಂಗ್ರೆಸ್‌ ಜತೆಗೆ ಸೇರಿ ಸರಕಾರ ರಚನೆಗೆ ಮುಂದಾಗಿತ್ತು. ಇದಕ್ಕೆ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹಾಗೂ ಪ್ರಮುಖವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಇನ್ನೇನು ಕೆಲವು ದಿನಗಳಲ್ಲಿ ಶಿವಸೇನೆ ನೇತೃತ್ವದ ಸರಕಾರ ರಚನೆಯಾಗಲಿದೆ ಎನ್ನುವಷ್ಟರಲ್ಲಿ ಮಹಾರಾಷ್ಟ್ರದ ಯಡಿಯೂರಪ್ಪ, ದೇವೇಂದ್ರ ಫಡ್ನವಿಸ್‌ ರಾತ್ರೋರಾತ್ರಿ ಬೆಳವಣಿಗೆಯಲ್ಲಿ ಎನ್‌ಸಿಪಿಯ ಮತ್ತೊಬ್ಬ ಪ್ರಮುಖ ನಾಯಕರಾಗಿರುವ ಅಜಿತ್‌ ಪವಾರ್‌ ಬೆಂಬಲ ಪಡೆದು ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿಯೇ ಬಿಟ್ಟಿದ್ದಾರೆ. ಅಲ್ಲದೆ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಸಹ ಅಂದು ತಮ್ಮ ತಂದೆ ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಕಡೆಗಣಿಸಿ ಕೇಸರಿ ಪಕ್ಷದ ಜತೆ ಸೇರಿ ಸಮ್ಮಿಶ್ರ ಸರಕಾರ ರಚನೆ ಮಾಡಿದ್ದ ಕುಮಾರಸ್ವಾಮಿಯಂತೆಯೇ ಎನ್‌ಸಿಪಿ ವರಿಷ್ಠ ಹಾಗೂ ಸಂಬಂಧಿ ಶರದ್‌ ಪವಾರ್‌ ಅನ್ನು ಬಿಟ್ಟು ಎನ್‌ಸಿಪಿಯನ್ನು ವಿಭಜಿಸಿ ಸರಕಾರ ರಚನೆ ಮಾಡಿದ್ದಾರೆ. ಬೆಳ್ಳಂಬೆಳಗ್ಗೆ ರಾಜ್ಯಪಾಲರ ಕಚೇರಿಯಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಒಟ್ಟಿನಲ್ಲಿ, ಶಿವಸೇನೆ ನೇತೃತ್ವದ ಸರಕಾರ ರಚನೆ ವಿಚಾರವಾಗಿ ಎಲ್ಲ ಬೆಳವಣಿಗೆಗಳನ್ನು ಸೈಲೆಂಟಾಗೇ ಗಮನಿಸುತ್ತಿದ್ದ ಬಿಜೆಪಿ ಹಾಗೂ ದೇವೇಂದ್ರ ಫಡ್ನವಿಸ್‌ ಬೆಳಗ್ಗೆ ಆಗುವಷ್ಟರಲ್ಲಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಅಲ್ಲದೆ, ಬಿಜೆಪಿ ಅಧಿಕಾರ ರಚನೆ ವಿಚಾರದಲ್ಲಿ ಸುಮ್ಮನೆ ಕುಳಿತಿದೆ ಎಂಬ ಮಾತುಗಳಿಗೆ ತಿಲಾಂಜಲಿ ಬಿದ್ದಿದ್ದು, ತೆರೆಮರೆಯಲ್ಲೇ ಕಸರತ್ತು ಮಾಡಿ ಸರಕಾರ ರಚಿಸಿಯೇ ಬಿಟ್ಟಿದೆ. ಈ ಹಿನ್ನೆಲೆ ಮಹಾರಾಷ್ಟ್ರ ಬಿಜೆಪಿಗೆ ಯಡಿಯೂರಪ್ಪ ಫಡ್ನವಿಸ್ ಆಗಿದ್ದರೆ ಕುಮಾರಸ್ವಾಮಿ ಅಜಿತ್ ಪವಾರ್ ಆಗಿದ್ದಾರೆ. ಅಲ್ದೆ, ಶರದ್‌ ಪವಾರ್‌ ದೇವೇಗೌಡರಂತಾಗಿದೆ. ಕರ್ನಾಟಕದಲ್ಲಿ 15 ವರ್ಷಗಳ ಹಿಂದೆ ನಡೆದ ರಾಜಕೀಯ ಈಗ ಮಹಾರಾಷ್ಟ್ರದಲ್ಲಿ ನಡೆದಿದೆ.


from India & World News in Kannada | VK Polls https://ift.tt/34dlzTP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...