ಇಂಫಾಲ: ಮಣಿಪುರದಲ್ಲಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಸರಕಾರಕ್ಕೆ ಸಂಕಷ್ಟ ಎದುರಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿಯ ಮೂವರು ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರ ಮಧ್ಯೆ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್ಪಿಪಿ) ನಾಲ್ವರು ಹಾಗೂ ತೃಣಮೂಲ ಕಾಂಗ್ರೆಸ್ನ ಒಬ್ಬ ಶಾಸಕ ಹಾಗೂ ಒಬ್ಬ ಪಕ್ಷೇತರ ಸೇರಿ 9 ಶಾಸಕರು ಹಿಂಪಡೆದಿದ್ದಾರೆ. ಎಸ್. ಸುಭಾಷ್ ಚಂದ್ರ ಸಿಂಗ್, ಟಿ.ಟಿ. ಹಾವೋಕಿಪ್ ಮತ್ತು ಸ್ಯಾಮುಯೆಲ್ ಜೇಂಡಯ್ ಬಿಜೆಪಿಯಿಂದ ರಾಜೀನಾಮೆ ನೀಡಿದ ಶಾಸಕರು. ಇದರಿಂದ ಬಿಜೆಪಿ ಮೈತ್ರಿ ಸರಕಾರದ ಬಲ 30ಕ್ಕೆ ಇಳಿದಿದೆ. 60 ಸದಸ್ಯಬಲದ ವಿಧಾನಸಭೆಯಲ್ಲಿಒಂದು ಸ್ಥಾನ ಖಾಲಿ ಇರುವ ಕಾರಣ ಸದಸ್ಯ ಬಲ 59 ಇದ್ದು, ಕೂದಳತೆಯಲ್ಲಿ ಬಹುಮತ ಉಳಿಸಿಕೊಂಡಿದೆ. ಯಾವುದೇ ಕ್ಷಣದಲ್ಲೂ ಸರಕಾರ ಪತನವಾಗುವ ಸಾಧ್ಯತೆಗಳಿವೆ. 2017ರ ಚುನಾವಣೆಯಲ್ಲಿ ಬಿಜೆಪಿ 21 ಹಾಗೂ ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದಿದ್ದವು. ಆದರೆ ಬಿಜೆಪಿಯು ನಾಗಾ ಪೀಪಲ್ಸ್ ಫ್ರಂಟ್ನ (ಎನ್ಪಿಎಫ್) ನಾಲ್ವರು, ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್ಪಿಪಿಯ) ನಾಲ್ವರು ಹಾಗೂ ಟಿಎಂಸಿ, ಎಲ್ಜೆಪಿಯ ತಲಾ ಒಬ್ಬರು ಹಾಗೂ ಒರ್ವ ಪಕ್ಷೇತರ ಶಾಸಕರ ಬಲದೊಂದಿಗೆ ಮೈತ್ರಿ ಸರಕಾರ (ಒಟ್ಟು 32) ರಚಿಸಿತ್ತು. ನಂತರ ಕಾಂಗ್ರೆಸ್ನ ಶ್ಯಾಮ್ಕುಮಾರ್ ಮುಖರ್ಜಿ ಬಣದ ಎಂಟು ಶಾಸಕರು ಸರಕಾರಕ್ಕೆ ಬೆಂಬಲ ಸೂಚಿಸಿದ್ದರಿಂದ ಎನ್ಡಿಎ ಬಲ 40 ಆಗಿತ್ತು.
from India & World News in Kannada | VK Polls https://ift.tt/2CdB7O1