ನವದೆಹಲಿ: ಮಾರಕ ಕೊರೊನಾ ವೈರಸ್ ಹಾವಳಿಯಿಂದ ಎದುರಾಗಿರುವ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವ ಕಲೆ ಭಾರತಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಗಣಿಗಾರಿಕೆಗಾಗಿ 41 ಕಲ್ಲಿದ್ದಲ್ಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ಬಿಕ್ಕಟ್ಟನ್ನು ಎದುರಿಸಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖ ಅಂಶಗಳು:
- ಕೊರೊನಾ ವೈರಸ್ ಬಿಕ್ಕಟ್ಟನ್ನು ಭಾರತ ಅವಕಾಶನ್ನಾಗಿ ಪರಿವರ್ತಿಸಲಿದೆ.
- ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿ.
- ಈ ನಿಟ್ಟಿನಲ್ಲಿ ಇಂದಿನ 41 ಕಲ್ಲಿದ್ದಲ್ಲು ಗಣಿಗಳ ಹರಾಜು ಪ್ರಕ್ರಿಯೆ ಐತಿಹಾಸಿಕ.
- ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಈ ನಿರ್ಧಾರ ಮತ್ತಷ್ಟು ಬಲ ನೀಡಲಿದೆ.
- ದಶಕಗಳಿಂದ ದೇಶದ ಕಲ್ಲಿದ್ದಲ್ಲು ಕ್ಷೇತ್ರ ಸೆರೆಯಾಳುಗಳ ಜಾಲದಲ್ಲಿ ಸಿಕ್ಕು ನರಳುತ್ತಿತ್ತು.
- ನಮ್ಮ ಸರ್ಕಾರ ಈ ಜಾಲವನ್ನು ತೊಡೆದು ಹಾಕಿ ಕಲ್ಲಿದ್ದಲು ಗಣಿಗಳನ್ನು ವಾಣಿಜ್ಯ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದೆ.
- ಕಲ್ಲಿದ್ದಲಿನ ವಾಣಿಜ್ಯ ಉತ್ಪನ್ನದಿಂದ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ದೊರೆಯಲಿದೆ.
- 2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ನಮ್ಮ ಗುರಿಯಾಗಿದೆ.
- ಭಾರತದಲ್ಲಿ ವಾಣಿಜ್ಯ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ಪ್ರಕ್ರಿಯೆ ನಡೆಯುತ್ತಿರುವುದು ಸಂತಸ ತಂದಿದೆ.
- ಆಮದನ್ನು ಕಡಿಮೆ ಮಾಡಿ ದೇಶೀಯವಾಗಿ ಉತ್ಪಾದನೆ ಹೆಚ್ಚಿಸುವ ನಮ್ಮ ಗುರಿ ಈಡೇರುವ ಭರವಸೆ ಇದೆ.
from India & World News in Kannada | VK Polls https://ift.tt/3fBgc61