ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆ ಕುರಿತು ನಿತ್ಯವೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅವರಿಗೆ ತಿರುಗೇಟು ನೀಡಿದೆ. ಗಡಿ ಘರ್ಷಣೆ ಕುರಿತು ರಾಹುಲ್ ಗಾಂಧಿ ಪ್ರಶ್ನೆ ಕೇಳಿದರೆ ಅವರನ್ನು ದೇಶದ್ರೋಹಿ ಎನ್ನುತ್ತಾರೆ. ವಿಪಕ್ಷಗಳು ಪ್ರಶ್ನೆ ಕೇಳುವುದೇ ತಪ್ಪೇ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿತ್ತು. ಕಾಂಗ್ರೆಸ್ ಪ್ರಶ್ನೆಗೆ ಉತ್ತರ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ , ಜನರಿಂದ ತಿರಸ್ಕೃತಗೊಂಡಿರುವ ವಂಶವೊಂದು ವಿಪಕ್ಷವಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ. ವಂಶವೊಂದು ಈ ದೇಶದ ವಿಪಕ್ಷವಾಗಿರಲು ಸಾಧ್ಯವಿಲ್ಲ. ಕಾರಣ ಗಡಿ ವಿಷಯದಲ್ಲಿ ಉಳಿದೆಲ್ಲಾ ವಿಪಕ್ಷಗಳು ಕೇಂದ್ರ ಸರ್ಕಾರದೊಂದಿಗೆ ಗಟ್ಟಿಯಾಗಿ ನಿಂತಿದ್ದರೆ, ಕಾಂಗ್ರೆಸ್ ಮಾತ್ರ ನಿತ್ಯವೂ ಸರ್ಕಾರವನ್ನು ಪ್ರಶ್ನಿಸುತ್ತಾ ಈ ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿದೆ ಎಂದು ನಡ್ಡಾ ಕಿರಿಕಾರಿದ್ದಾರೆ. ನೆಹರೂ-ಗಾಂಧಿ ಪರಿವಾರ ಜನರಿಂದ ತಿರಸ್ಕೃತಗೊಂಡಿದೆ. ಆದರೆ ವಿಪಕ್ಷದ ಹೆಸರು ಹೇಳಿಕೊಂಡು ನಿತ್ಯವೂ ಸರ್ಕಾರದ ಮೇಲೆ ಕಿಡಿಕಾರುವುದನ್ನೇ ರಾಹುಲ್ ಗಾಂಧಿ ರೂಢಿ ಮಾಡಿಕೊಂಡಿದ್ದಾರೆ ಎಂದು ನಡ್ಡಾ ಈ ವೇಳೆ ಹರಿಹಾಯ್ದಿದ್ದಾರೆ.
from India & World News in Kannada | VK Polls https://ift.tt/3dxLGs9