ಪಾಕ್‌ ಗಡಿಯಲ್ಲಿ ಹುತಾತ್ಮರಾದವರ ಫೋಟೋ ಚೀನಾ ಗಡಿಯಲ್ಲಿ ಹುತಾತ್ಮ ಎಂದು ಬಳಕೆ..?

ಮೂವರು ಭಾರತೀಯ ಯೋಧರು ಹುತಾತ್ಮರಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದವು. ಈ ಯೋಧರು ಭಾರತ-ಚೀನಾ ಸಂಘರ್ಷದ ವೇಳೆ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದವರು ಎಂದು ಫೋಟೋಗಳ ಜೊತೆ ಬರೆದುಕೊಳ್ಳಲಾಗಿತ್ತು. ಬ್ರಿಟಿಷ್ ಇಂಡಿಯನ್ ವಾಯ್ಸ್ ಎಂಬ ಟ್ವಿಟ್ಟರ್ ಬಳಕೆದಾರ ಈ ಫೋಟೋ ಶೇರ್ ಮಾಡಿದ್ದರು. ಸಿಪಾಯಿ ಗುಂಗಮ್‌ಬುಲಿ ಅಬೋನ್ಮಿ, ನಾಯಕ್ ಗುರುಚರಣ್ ಸಿಂಗ್ ಹಾಗೂ ಹವಾಲ್ದಾರ್ ಮಥಿಯಾಜಗನ್ ಅವರ ಫೋಟೋಗಳಿವು ಎಂದು ಬರೆದುಕೊಂಡಿದ್ದರು. ಹುತಾತ್ಮರಾದ ಈ ಮೂವರು ಭಾರತೀಯ ಯೋಧರಿಗೆ ಬ್ರಿಟಿಷ್‌ ಇಂಡಿಯನ್ಸ್‌ ಶ್ರದ್ಧಾಂಜಲಿ ಕೋರುತ್ತಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಸತ್ಯಾಂಶವೇನೆಂದರೆ, ಈ ಯೋಧರು ಹುತಾತ್ಮರಾಗಿದ್ದು ಪಾಕಿಸ್ತಾನದೊಂದಿಗಿನ ಸಂಘರ್ಷದ ವೇಳೆ. ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದ ವೇಳೆ ಈ ಯೋಧರು ಹುತಾತ್ಮರಾಗಿದ್ದರು. ಕೆಲ ವಾರಗಳ ಹಿಂದಿನ ಘಟನೆ ಇದು. ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಭಾರತ-ಚೀನಾ ಸಂಘರ್ಷದ ವೇಳೆ ಹುತಾತ್ಮರಾದ 20 ಯೋಧರು ಇವರಲ್ಲ. ಈ ಸುದ್ದಿಯ ಸತ್ಯಾಂಶ ತಿಳಿಸಲು ಟೈಮ್ಸ್‌ ಫ್ಯಾಕ್ಟ್‌ ಚೆಕ್‌ ತಂಡ ಸಮಗ್ರ ಅಧ್ಯಯನ ನಡೆಸಿದೆ. ಟ್ವಿಟ್ಟರ್‌ ಖಾತೆಯಲ್ಲಿ ಸಿಕ್ಕ ಫೋಟೋಗಳನ್ನು ಗೂಗಲ್‌ ರಿವರ್ಸ್‌ ಸರ್ಚ್ ಎಂಜಿನ್‌ನಲ್ಲಿ ಹುಡುಕಾಟ ನಡೆಸಿದಾಗ ಸುದ್ದಿಯ ಸತ್ಯಾಂಶ ಪತ್ತೆಯಾಗಿದೆ. ಚಿತ್ರ - 1 ಭಾರತೀಯ ಸೇನೆ ಉತ್ತರ ಕಮಾಂಡ್‌ನ ಟ್ವಿಟ್ಟರ್‌ ಖಾತೆಯಲ್ಲಿ ಜೂನ್ 11, 2020ರಂದು ಈ ಚಿತ್ರ ಪ್ರಕಟಿಸಲಾಗಿತ್ತು. ನಾಯ್ಕ್‌ ಗುರುಚರಣ್ ಸಿಂಗ್‌ ಅವರಿಗೆ ಭಾರತೀಯ ಸೇನೆ ಶ್ರದ್ದಾಂಜಲಿ ಕೋರಿತ್ತು. ಕಾಶ್ಮೀರ ಕಣಿವೆಯ ರಜೌರಿ ವಲಯದಲ್ಲಿ ಜೂನ್ 10, 2020ರಂದು ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ವೇಳೆ, ಈ ಯೋಧ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಚಿತ್ರ - 2 ಜೂನ್ 14, 2020ರಂದು ಟ್ವೀಟ್‌ ಮಾಡಿದ್ದ ಭಾರತೀಯ ಸೇನೆ, ಸಿಪಾಯಿ ಗುಂಗಮ್‌ಬುಲಿ ಅಬೋನ್ಮಿ, ಅವರು ಹುತಾತ್ಮರಾದ ಸುದ್ದಿ ಪ್ರಕಟಿಸಿತ್ತು. ಜೂನ್ 13, 2020ರಂದು ಪೂಂಚ್‌ ವಲಯದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯ ದಾಳಿಯಿಂದ ಈ ಸಿಪಾಯಿ ಹುತಾತ್ಮರಾದರು ಎಂದು ಅವರಿಗೆ ಶ್ರದ್ಧಾಂಜಲಿ ಕೋರಲಾಗಿತ್ತು. ಚಿತ್ರ - 3 ಜೂನ್ 5, 2020ರಂದು ಉತ್ತರ ಕಮಾಂಡ್‌ ಮಾಡಿದ್ದ ಟ್ವೀಟ್‌ನಲ್ಲಿ ಹವಾಲ್ದಾರ್ ಮಥಿಯಾಜಗನ್ ಅವರು ಹುತಾತ್ಮರಾದ ಸುದ್ದಿ ಪ್ರಕಟಿಸಿತ್ತು. ಕಾಶ್ಮೀರದ ಸುಂದರ್‌ಬನಿ ವಲಯದಲ್ಲಿ ಪಾಕಿಸ್ತಾನ ಸೇನೆಯ ದಾಳಿಗೆ ಇವರ ಬಲಿದಾನವಾಗಿದೆ ಎಂದು ಸೇನೆ ಶ್ರದ್ಧಾಂಜಲಿ ಕೋರಿತ್ತು. ಭಾರತ-ಚೀನಾ ಸಂಘರ್ಷದ ವೇಳೆ ಹುತಾತ್ಮರಾದ 20 ಭಾರತೀಯ ಯೋಧರಿಗೂ ಮೇಲ್ಕಂಡ ಈ ಯೋಧರಿಗೂ ಯಾವುದೇ ಸಂಬಂಧ ಇಲ್ಲ. ಜೂನ್ 15, 2020ರಂದು ಹುತಾತ್ಮರಾದ ಯೋಧರ ವಿವರಕ್ಕಾಗಿ ಒಟ್ಟಿನಲ್ಲಿ ಟೈಮ್ಸ್‌ ಫ್ಯಾಕ್ಟ್‌ ಚೆಕ್‌ನ ಸಮಗ್ರ ಅಧ್ಯಯನದ ಪ್ರಕಾರ ಹೇಳೋದಾದ್ರೆ, ಪಾಕಿಸ್ತಾನ ಗಡಿಯಲ್ಲಿ ಹುತಾತ್ಮರಾದ ಯೋಧರನ್ನು ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರು ಎಂದು ತಪ್ಪಾಗಿ ಭಾವಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.


from India & World News in Kannada | VK Polls https://ift.tt/3fA2rV5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...