ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ. ಉಡುಪಿಯ ಕೋಟಾದಲ್ಲಿ 10 ಸೆಂ. ಮೀಟರ್ ಮತ್ತು ಉಡುಪಿಯಲ್ಲಿ 7 ಸೆಂ. ಮೀಟರ್ ಗರಿಷ್ಠ ದಾಖಲಾಗಿದೆ. ಉಳಿದಂತೆ, ಬೆಳಗಾವಿ, ತುಮಕೂರು ಜಿಲ್ಲೆಯ ಪಾವಗಡದಲ್ಲಿ ತಲಾ 6 ಸೆಂ.ಮೀ, ಹೊನ್ನಾವರ, ಮಂಕಿ, ನರಗುಂದದಲ್ಲಿತಲಾ 5 ಸೆಂ.ಮೀ, ಚಿಕ್ಕೋಡಿ, ಕಮರಡಿಯಲ್ಲಿ ತಲಾ 4 ಸೆಂ.ಮೀ, ಕಿರವಟ್ಟಿ, ಗೋಕರ್ಣ, ಕೊಲ್ಲೂರು, ಶಿರಾಲಿ, ತಾಳಿಕೋಟೆ, ಲೋಂಡ, ಸಿಂಧನೂರು, ಜಮಖಂಡಿ, ಸೈದಾಪುರ, ಕಂಪ್ಲಿ, ಕೊಪ್ಪ, ತುಮಕೂರು, ಹೊಸಪೇಟೆಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಶಿವಮೊಗ್ಗ, ಚಿತ್ರದುರ್ಗ, ರಾಯಚೂರು, ಬಾಗಲಕೋಟ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ವಿವಿಧೆಡೆ ತಲಾ 2 ಸೆಂ. ಮೀ. ಮಳೆಯಾಗಿದೆ. ಜೂ. 3ರಂದು ಕೂಡ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
from India & World News in Kannada | VK Polls https://ift.tt/2XsMrxX