ಕೋಲಾರದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ ಜೂಜು ಅಡ್ಡೆ; ಸಾಲದ ಸುಳಿಗೆ ಸಿಲುಕಿದ ಜನ, ಕ್ರಮಕ್ಕೆ ಮುಂದಾಗದ ಪೊಲೀಸರು!

ವೆಂ.ಸುನೀಲ್‌ ಕುಮಾರ್‌ಕೊರೊನಾದಿಂದಾಗಿ ಜನರ ಕೈಯಲ್ಲಿ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಜಿಲ್ಲೆಯ ಹಲವೆಡೆ ತಲೆ ಎತ್ತಿರುವ ಬೃಹತ್‌ ಜೂಜು ಅಡ್ಡೆಗಳಿಂದ ಜನರು ಸಾಲದ ಸುಳಿಗೆ ಸಿಲುಕಿ ಬೀದಿ ಪಾಲಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜಿಲ್ಲೆಯಾದ್ಯಂತ ಸದ್ದಿಲ್ಲದೆ ಅಕ್ರಮ ಜೂಜು ಅಡ್ಡೆಗಳು ತಲೆ ಎತ್ತಿದ್ದು, ಜೂಜಾಟಕ್ಕೆ ಹೋಗಿ ಗ್ರಾಮೀಣ ಭಾಗದ ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ತೊಂದರೆ ಅನುಭವಿಸುತ್ತಿರುವುದು ಕಂಡುಬಂದಿದೆ. ಮುಳಬಾಗಿಲು ತಾಲೂಕು ನಂಗಲಿ ಬಳಿಯ ಸುನುಪಕುಂಟೆ, ಘಟ್ಟಗುಡಿ ಕಾಡಿನಲ್ಲಿ, ಶ್ರೀನಿವಾಸಪುರ ತಾಲೂಕಿನ ಕಲ್ಲೂರು, ಗೌನಿಪಲ್ಲಿ, ಹೆಬ್ಬಟ, ಉನಿಕಿಲಿ ಕೋಲಾರದ ವೇಮಗಲ್‌, ವೆಲಗಲಬುರ್ರೆ, ಮಾದಮಂಗಲ, ಮದ್ದೇರಿ, ತೋಟ್ಲಿಗಡಿಭಾಗಗಳು, ಮಾಲೂರು ತಾಲೂಕಿನ ಸಂಪಂಗೆರೆ, ಶಿವಾರಪಟ್ಟಣ, ಲಕ್ಕೂರು ಹಾಗೂ ಚಿಕ್ಕತಿರುಪತಿಯ ತಮಿಳುನಾಡು ಗಡಿಯಂಚಿನ ಗ್ರಾಮಗಳಲ್ಲಿ ಹಲವೆಡೆ ಅಂದರ್‌-ಬಾಹರ್‌ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಜೂಜು ಅಡ್ಡೆಗಳಿಗೆ ತಮಿಳುನಾಡು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳಿಂದ ಜನರು ಬರುತ್ತಿದ್ದು, ನಿತ್ಯ ಎಲ್ಲ ಅಡ್ಡೆಗಳಲ್ಲಿ 5-10 ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ಕೊರೊನಾದಿಂದಾಗಿ ಬದುಕು ಕಟ್ಟಲು ಹೆಣಗಾಡುತ್ತಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕೊಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಲೆ ಎತ್ತುತ್ತಿರುವ ಜೂಜು ಅಡ್ಡೆಗಳಿಂದಾಗಿ ಬದುಕೇ ಡೋಲಾಯಮಾನವಾಗಿದೆ. ಈಗಾಗಲೇ ಗ್ರಾಮೀಣ ಭಾಗದ ಜನರು ಜೂಜು ಅಡ್ಡೆಯ ಬಲೆಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ. ಜೂಜಾಟದಲ್ಲಿ ಜನರು ಹಣ ಕಳೆದುಕೊಳ್ಳುವ ಸಮಯಕ್ಕಾಗಿ ಕಾಯುವ ಅಡ್ಡೆ ನಡೆಸುವ ಕಿಂಗ್‌ಪಿನ್‌ಗಳು ಸ್ಥಳದಲ್ಲಿಯೇ ಶೇ.10 ಬಡ್ಡಿಗೆ ಸಾಲ ಕೊಟ್ಟು ಲಾಭಮಾಡಿಕೊಳ್ಳುತ್ತಾರೆ. ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡದಂತಹ ಸಂದರ್ಭದಲ್ಲಿ ಮನೆಗಳ ಬಳಿ ಹೋಗಿ ಹಣಕ್ಕೆ ಬೇಡಿಕೆಯಿಡುತ್ತಾರೆ. ಜತೆಗೆ ಮನೆಯವರು ಹಾಗೂ ಊರಿನವರ ಮುಂದೆ ಮರ್ಯಾದೆ ತೆಗೆಯುವ ಬೆದರಿಕೆ ಹಾಕುತ್ತಾರೆ. ಮರ್ಯಾದೆಗೆ ಅಂಜುವ ಜನರು ಮನೆ, ಜಮೀನು ಅಡವಿಟ್ಟು ಸಾಲ ತೀರಿಸುತ್ತಿದ್ದು, ಕೆಲವರು ಕಿರುಕುಳ ತಾಳಲಾರದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿವೆ.


ಕೋಲಾರದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ ಜೂಜು ಅಡ್ಡೆ; ಕ್ರಮಕ್ಕೆ ಮುಂದಾಗದ ಪೊಲೀಸರು!

ವೆಂ.ಸುನೀಲ್‌ ಕುಮಾರ್‌

ಕೊರೊನಾದಿಂದಾಗಿ ಜನರ ಕೈಯಲ್ಲಿ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಜಿಲ್ಲೆಯ ಹಲವೆಡೆ ತಲೆ ಎತ್ತಿರುವ ಬೃಹತ್‌ ಜೂಜು ಅಡ್ಡೆಗಳಿಂದ ಜನರು ಸಾಲದ ಸುಳಿಗೆ ಸಿಲುಕಿ ಬೀದಿ ಪಾಲಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜಿಲ್ಲೆಯಾದ್ಯಂತ ಸದ್ದಿಲ್ಲದೆ ಅಕ್ರಮ ಜೂಜು ಅಡ್ಡೆಗಳು ತಲೆ ಎತ್ತಿದ್ದು, ಜೂಜಾಟಕ್ಕೆ ಹೋಗಿ ಗ್ರಾಮೀಣ ಭಾಗದ ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ತೊಂದರೆ ಅನುಭವಿಸುತ್ತಿರುವುದು ಕಂಡುಬಂದಿದೆ. ಮುಳಬಾಗಿಲು ತಾಲೂಕು ನಂಗಲಿ ಬಳಿಯ ಸುನುಪಕುಂಟೆ, ಘಟ್ಟಗುಡಿ ಕಾಡಿನಲ್ಲಿ, ಶ್ರೀನಿವಾಸಪುರ ತಾಲೂಕಿನ ಕಲ್ಲೂರು, ಗೌನಿಪಲ್ಲಿ, ಹೆಬ್ಬಟ, ಉನಿಕಿಲಿ ಕೋಲಾರದ ವೇಮಗಲ್‌, ವೆಲಗಲಬುರ್ರೆ, ಮಾದಮಂಗಲ, ಮದ್ದೇರಿ, ತೋಟ್ಲಿಗಡಿಭಾಗಗಳು, ಮಾಲೂರು ತಾಲೂಕಿನ ಸಂಪಂಗೆರೆ, ಶಿವಾರಪಟ್ಟಣ, ಲಕ್ಕೂರು ಹಾಗೂ ಚಿಕ್ಕತಿರುಪತಿಯ ತಮಿಳುನಾಡು ಗಡಿಯಂಚಿನ ಗ್ರಾಮಗಳಲ್ಲಿ ಹಲವೆಡೆ ಅಂದರ್‌-ಬಾಹರ್‌ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಜೂಜು ಅಡ್ಡೆಗಳಿಗೆ ತಮಿಳುನಾಡು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳಿಂದ ಜನರು ಬರುತ್ತಿದ್ದು, ನಿತ್ಯ ಎಲ್ಲ ಅಡ್ಡೆಗಳಲ್ಲಿ 5-10 ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.



ಜೂಟಾಟಕ್ಕೆ ಮಾವಿನ ತೋಪು ಆಯ್ಕೆ!
ಜೂಟಾಟಕ್ಕೆ ಮಾವಿನ ತೋಪು ಆಯ್ಕೆ!

ಜಿಲ್ಲೆಯ ಹಲವೆಡೆ ಜೂಜು ಅಡ್ಡೆಗಳನ್ನು ನಡೆಸುವಂತಹ ಕಿಂಗ್‌ಪಿನ್‌ಗಳು ಅಂದರ್‌ ಬಾಹರ್‌ಗಾಗಿ ಮಾವಿನ ತೋಪು ಅಥವಾ ನೀಲಗಿರಿ ತೋಪುಗಳನ್ನು ಹೆಚ್ಚೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಗ್ರಾಮಗಳಿಂದ ದೂರವಿರುವ ತೋಪುಗಳಲ್ಲಿ ಅಡ್ಡೆ ನಡೆಸುವ ಇವರು, ಇಲ್ಲಿಗೆ ಬರುವವರಿಗೆ ಕುಡಿವ ನೀರಿನ ವ್ಯವಸ್ಥೆ ಹಾಗೂ ಕೂರಲು ಟಾರ್ಪಲ್‌ ವ್ಯವಸ್ಥೆ ಮಾಡಿರುತ್ತಾರೆ.



ಅಧಿಕ ಬಡ್ಡಿಗೆ ಸಾಲ ಕೊಟ್ಟು ಸುಲಿಗೆ!
ಅಧಿಕ ಬಡ್ಡಿಗೆ ಸಾಲ ಕೊಟ್ಟು ಸುಲಿಗೆ!

ಜೂಜಾಟದಲ್ಲಿ ಜನರು ಹಣ ಕಳೆದುಕೊಳ್ಳುವ ಸಮಯಕ್ಕಾಗಿ ಕಾಯುವ ಅಡ್ಡೆ ನಡೆಸುವ ಕಿಂಗ್‌ಪಿನ್‌ಗಳು ಸ್ಥಳದಲ್ಲಿಯೇ ಶೇ.10 ಬಡ್ಡಿಗೆ ಸಾಲ ಕೊಟ್ಟು ಲಾಭಮಾಡಿಕೊಳ್ಳುತ್ತಾರೆ. ಜತೆಗೆ ಆಟಗಾರರ ಬಳಿಯಿರುವ ಚಿನ್ನದ ಒಡವೆಗಳು, ಬೈಕ್‌ಗಳು ಹಾಗೂ ಖಾಲಿ ಚೆಕ್‌ಗಳನ್ನು ಪಡೆದುಕೊಂಡು ಬಡ್ಡಿಗೆ ಸಾಲ ನೀಡುತ್ತಾರೆ.

ಬೆಳಗಾವಿಯಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರಿಂದ ದಾಳಿ, 12 ಜನರ ಬಂಧನ!



​​​ಎಗ್ಗಿಲ್ಲದೆ ನಡೆಯುತ್ತಿವೆ ಜೂಜು ಅಡ್ಡೆಗಳು!
​​​ಎಗ್ಗಿಲ್ಲದೆ ನಡೆಯುತ್ತಿವೆ ಜೂಜು ಅಡ್ಡೆಗಳು!

ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡದಂತಹ ಸಂದರ್ಭದಲ್ಲಿ ಮನೆಗಳ ಬಳಿ ಹೋಗಿ ಹಣಕ್ಕೆ ಬೇಡಿಕೆಯಿಡುತ್ತಾರೆ. ಜತೆಗೆ ಮನೆಯವರು ಹಾಗೂ ಊರಿನವರ ಮುಂದೆ ಮರ್ಯಾದೆ ತೆಗೆಯುವ ಬೆದರಿಕೆ ಹಾಕುತ್ತಾರೆ. ಮರ್ಯಾದೆಗೆ ಅಂಜುವ ಜನರು ಮನೆ, ಜಮೀನು ಅಡವಿಟ್ಟು ಸಾಲ ತೀರಿಸುತ್ತಿದ್ದು, ಕೆಲವರು ಕಿರುಕುಳ ತಾಳಲಾರದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿವೆ.



​​​ಅಡ್ಡೆಗಳ ಬೆಂಬಲಕ್ಕೆ ಪೊಲೀಸರಿದ್ದಾರೆಯೇ?
​​​ಅಡ್ಡೆಗಳ ಬೆಂಬಲಕ್ಕೆ ಪೊಲೀಸರಿದ್ದಾರೆಯೇ?

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ನಿತ್ಯ ಕೋಟ್ಯಂತರ ರೂ. ಜೂಜಾಟ ನಡೆಯುತ್ತಿದ್ದರೂ, ಪೊಲೀಸರು ಮಾತ್ರ ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಡ್ಡೆ ನಡೆಸುವವರು ಆಯಾ ವ್ಯಾಪ್ತಿಯ ಠಾಣೆಗಳಿಗೆ ಮಾಮೂಲಿ ಕಳುಹಿಸುವುದರಿಂದ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಅದಕ್ಕೆ ಪೂರಕವೆಂಬಂತೆ ಅಡ್ಡೆ ನಡೆಸುವವರು ಸಹ ತಮ್ಮ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸುವುದಿಲ್ಲ. ಅವರಿಗೆ ತಲುಪಿಸ ಬೇಕಾಗಿರುವುದನ್ನು ತಲುಪಿಸುತ್ತೇವೆ. ಹೀಗಾಗಿ ಧೈರ್ಯವಾಗಿ ಜೂಜಾಟವಾಡಲು ಬನ್ನಿ ಎಂದು ಆಟಗಾರರಿಗೆ ಭರವಸೆ ನೀಡುತ್ತಾರೆ ಎಂಬುದು ಹಣ ಕಳೆದುಕೊಂಡವರ ಮಾತು.





from India & World News in Kannada | VK Polls https://ift.tt/2ZCBHxu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...