ಜಾನ್ ಡಿಸೋಜ ಯಕ್ಷ ಪ್ರದರ್ಶನದ ನೆಲೆ ಕುಂದಾಪುರದ ನೆಹರೂ ಮೈದಾನದಲ್ಲಿ ಈ ಬಾರಿ ಟೆಂಟ್ ಮೇಳಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಯಕ್ಷಾಭಿಮಾನಿಗಳ ತೀವ್ರ ಬೇಸರಕ್ಕೆ ಕಾರಣವಾಗಿದೆ. ಕೋವಿಡ್ ನಡುವೆ ಯಕ್ಷಗಾನ ತಿರುಗಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದರೂ, ಈವರೆಗೂ ನೆಹರೂ ಮೈದಾನದಲ್ಲಿ ಒಂದೇ ಒಂದು ಯಕ್ಷಗಾನ ಪ್ರದರ್ಶನ ನಡೆದಿಲ್ಲ. ಯಕ್ಷಾಭಿಮಾನಿಗಳು ಯಕ್ಷಪ್ರದರ್ಶನಕ್ಕಾಗಿ ತಾಲೂಕು ಆಡಳಿತಕ್ಕೆ ಅರ್ಜಿ ಹಿಡಿದುಹೋದಲ್ಲಿ ಅವಕಾಶ ನಿರಾಕರಿಸಲಾಗುತ್ತಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಯಕ್ಷಕಾಶಿಗೆ ಅಂಕುಶ: ಇಲ್ಲಿನ ನೆಹರೂ ಮೈದಾನ ಟೆಂಟ್ ಮೇಳಗಳ ಯಕ್ಷ ಪ್ರದರ್ಶನದ ಭದ್ರ ನೆಲೆ. ಪ್ರತಿಯೊಂದು ಟೆಂಟ್ ಮೇಳಗಳೂ ಮೊದಲ ಪ್ರದರ್ಶನ ಇಲ್ಲಿಯೇ ನೀಡಿ ಮುಂದುವರಿಯುವ ಕ್ರಮ ಬಹುಕಾಲದಿಂದ ನಡೆದುಕೊಂಡು ಬಂದಿದೆ. ಚತುಷ್ಪಥ ಹೆದ್ದಾರಿ ಅಗಲೀಕರಣ ದಿಸೆಯಿಂದ ಕಧಿಳೆಧಿದ ಸಾಲಿನಲ್ಲಿಅನುಮತಿ ನೀಡಲು ಸ್ಥಳೀಯಾಡಳಿತ ನಿರ್ಧರಿಸಿದಾಗ ದೊಡ್ಡಮಟ್ಟದ ಹೋರಾಟ ನಡೆದಿತ್ತು. ಅಂತಿಮವಾಗಿ ಪ್ರದರ್ಶನಕ್ಕೆ ಅನುಮತಿ ಸಿಕ್ಕಿತ್ತು. ತದನಂತರ ವಕ್ಕರಿಸಿದ ಕೋವಿಡ್ನ ಬಳಿಕ ಈವರೆಗೆ ಒಂದೇ ಒಂದು ಪ್ರದರ್ಶನ ಯಕ್ಷಕಾಶಿಯಲ್ಲಿನಡೆದಿಲ್ಲ. ಯಕ್ಷ ಪ್ರದರ್ಶನದ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿರುವವರಿಗೆ ಈಗ ತಾಲೂಕು ಆಡಳಿತದ ಅನುಮತಿ ನಿರಾಕರಣೆಯ ಬಿಸಿ ಮುಟ್ಟಿದೆ. ಯಕ್ಷಕಾಶಿಯಲ್ಲಿಈವರೆಗೆ ಪ್ರದರ್ಶನ ನೀಡಲಾಗದ ಸಂಕಟದಲ್ಲಿಯೂ ಟೆಂಟ್ ಮೇಳಗಳಿವೆ. ಅವಕಾಶ ನೀಡುತ್ತಿಲ್ಲ ಆಟ ವಹಿಸಿಕೊಂಡಿದ್ದರೂ ಪ್ರದರ್ಶನಕ್ಕೆ ತಾಲೂಕು ಆಡಳಿತ ಅವಕಾಶ ನೀಡುತ್ತಿಲ್ಲ. ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಟೆಂಟ್ ಮೇಳಗಳ ಪ್ರದರ್ಶನ ಈವರೆಗೂ ಯಕ್ಷಕಾಶಿ ನೆಹರೂ ಮೈದಾನದಲ್ಲಿನಡೆದಿಲ್ಲ. ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. -ನರಸಿಂಹ ಯಕ್ಷಗಾನಾಭಿಮಾನಿ ಜಿಲ್ಲಾಧಿಕಾರಿ ಆದೇಶ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುಂದಾಧಿಪುರ ನೆಹರೂ ಮೈದಾನದಲ್ಲಿಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಆದೇಶದ ಪರಿಪಾಲನೆ ಆದ್ಯ ಕರ್ತವ್ಯ. -ಆನಂದಪ್ಪ, ತಹಸೀಲ್ದಾರ್, ಕುಂದಾಪುರ ನೋವಿನ ಸಂಗತಿ ನೆಹರೂ ಮೈದಾನ ಟೆಂಟ್ ಮೇಳಗಳ ಆಡುಂಬೊಲ. ದಕ್ಷಿಣ ಕನ್ನಡ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯವರೆಗಿನ ಯಕ್ಷಪ್ರೇಮಿಗಳು ಶನಿವಾರ ರಾತ್ರಿ ಟೆಂಟ್ ಮೇಳಗಳ ಪ್ರದರ್ಶನ ವೀಕ್ಷಿಸಿ ಸಂಭ್ರಮಿಸುತ್ತಾ ಬಂದಿದ್ದಾರೆ. ಕರಾವಳಿ ಜಿಲ್ಲೆಯ ಟೆಂಟ್ ಮೇಳಗಳ ನೂತನ ಪ್ರಸಂಗದ ಅದ್ಧೂರಿಯ ಪ್ರಥಮ ಪ್ರದರ್ಶನ ಇಲ್ಲಿಯೇ ನಡೆಯುವುದು. ಕೋವಿಡ್ನ ನಡುವೆಯೂ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿಯಿದ್ದರೂ ನೆಹರೂ ಮೈದಾನದಲ್ಲಿಅವಕಾಶ ನಿರಾಕರಿಸಿರುವುದು ನೋವಿನ ಸಂಗತಿ. ಕೋವಿಡ್ ನಿಯಮಾವಳಿಯಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. -ನಿತ್ಯಾನಂದ ನಾವಡ ಯಕ್ಷಪ್ರೇಮಿ ಕುಂದಾಪುರ ಕಲಾ ಪೋಷಕರು ಮುಂದೆ ಬರಲಿ ಕರಾವಳಿಯಲ್ಲಿಸಾಲಿಗ್ರಾಮ, ಪೆರ್ಡೂರು ಪ್ರಮುಖ ಟೆಂಟ್ ಮೇಳಗಳಾಗಿವೆ. ಕೋವಿಡ್ನ ಕಾರಣಕ್ಕೆ ಸದ್ಯ ಟೆಂಟ್ ಪ್ರದರ್ಶನ ನೀಡುತ್ತಿರುವ ಏಕೈಕ ಮೇಳವಾಗಿ ಸಾಲಿಗ್ರಾಮ ಮೇಳವಿದೆ. ಪೆರ್ಡೂರು ಈ ಬಾರಿ ಬಯಲಾಟಕ್ಕೆ ಒತ್ತು ನೀಡಿದೆ. ಕುಂದಾಪುರದಲ್ಲಿಈವರೆಗೆ ಟೆಂಟ್ ಮೇಳದ ಪ್ರದರ್ಶನಕ್ಕೆ ಕಲಾ ಪೋಷಕರು ದೊಡ್ಡ ಮಟ್ಟದಲ್ಲಿಮುಂದೆ ಬಂದಿಲ್ಲ. ಬಂದಲ್ಲಿಜಿಲ್ಲಾಧಿಕಾರಿ ಅನುಮತಿ ಪಡೆದು ಪ್ರದರ್ಶನ ನೀಡಲು ಸಿದ್ಧರಿದ್ದೇವೆ. ಟೆಂಟ್ ಮೇಳಗಳಿಗೆ ಮೂಲ ಆಸರೆಯಾಗಿರುವ ಕುಂದಾಪುರ ಯಕ್ಷಕಾಶಿಯಲ್ಲಿಪ್ರದರ್ಶನ ನೀಡಲು ನಾವು ಹಂಬಲಿಸುತ್ತಿದ್ದೇವೆ. -ಪಿ. ಕಿಶನ್ ಹೆಗ್ಡೆ, ಬಹುಮೇಳಗಳ ಯಜಮಾನರು
from India & World News in Kannada | VK Polls https://ift.tt/3du0v2I