ಐ ವಿಲ್‌ ಕಮ್‌ ಬ್ಯಾಕ್,‌ ಸೀ: ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೀಗೆ ಎಂದಿದ್ಯಾಕೆ?

ಕೃಷ್ಣರಾಜನಗರ: ಮುಂದಿನ ಎರಡು ವರ್ಷದಲ್ಲಿ ಚುನಾವಣೆ ಬರಲಿದ್ದು, ಮತ್ತೆ ನಾವೇ 100% ಅಧಿಕಾರಕ್ಕೆ ಬರುತ್ತೇವೆ. ಐ ವಿಲ್‌ ಕಮ್‌ ಬ್ಯಾಕ್‌ ಸೀ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಗಂಧನಹಳ್ಳಿಯಲ್ಲಿ ಶುಕ್ರವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ''ಈ ಹಿಂದೆ ನೀಡುತ್ತಿದ್ದ ಬಡವರ ಪಡಿತರ ಅಕ್ಕಿಯನ್ನು ಕಡಿಮೆ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆಯುವುದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಎಷ್ಟು ಖರ್ಚಾದರೂ ಪಡಿತರದಾರರಿಗೆ 10 ಕೆ.ಜಿ. ಅಕ್ಕಿ ನೀಡಲಾಗುವುದು. ಈಗಿರುವವರು ಬಡವರ ವಿರೋಧಿಗಳು'' ಎಂದು ಸರಕಾರದ ವಿರುದ್ಧ ವಾಧಿಗ್ದಾಳಿ ನಡೆಸಿದರು. ''ಟಿ.ವಿ., ಸ್ಕೂಟರ್‌ ಇದ್ದರೆ ಪಡಿತರ ಕಾರ್ಡ್‌ ಕೊಡುವುದಿಲ್ಲಎನ್ನುತ್ತಿದ್ದಾರೆ. ಯಾರೂ ಅವರ ಮನೆಯಿಂದ ತಂದು ಕೊಡುವುದಿಲ್ಲ. ಜನತೆಯೆ ತೆರಿಗೆ ಹಣದಲ್ಲಿಎಲ್ಲವನ್ನೂ ನೀಡಲಾಗುತ್ತಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿ ನೀಡುತ್ತೇವೆ,'' ಎಂದು ತಿಳಿಸಿದರು. ''ಅಕ್ಕಿ ಏಕೆ ಕಡಿಮೆ ಮಾಡಿದಿರಿ ಎಂದು ಕೇಳಿದ್ದಕ್ಕೆ ಕೊರೊನಾ ಕಾರಣ ಎಂದರು. ಕೊರೊನಾಗೆ ಖರ್ಚಾಗಿರುವುದು ಐದಾರು ಸಾವಿರ ಕೋಟಿ, ಸರಕಾರದ ಬಜೆಟ್‌ 2 ಲಕ್ಷದ 37 ಸಾವಿರ ಕೋಟಿ. ಅದಕ್ಕೂ ಇದಕ್ಕೂ ಏನು ಸಂಬಂಧ? ನಾನು ಅಕ್ಕಿ ಕೊಟ್ಟರೆ ನಮ್ಮಪ್ಪನ ಮನೆಯಿಂದ ಕೊಡುತ್ತೇನೆಯೇ? ಆ ದುಡ್ಡು, ಜನರ ತೆರಿಗೆ ಹಣ. ಯಡಿಯೂರಪ್ಪ ಅವರಪ್ಪನ ಮನೆಯಿಂದ ಕೊಡುತ್ತಾನೆಯೆ,'' ಎಂದು ಏಕ ವಚನದಲ್ಲಿ ದೂರಿದರು. ''ಗ್ರಾಮದವರು ಸಲ್ಲಿಸಿರುವ ಬೇಡಿಕೆಗಳಾದ ಸಮುದಾಯ ಭವನ, ಕಪ್ಪಡಿ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣ, ಕುಡಿಯುವ ನೀರಿನ ಘಟಕ ಹಾಗೂ ಮೊರಾರ್ಜಿ ಶಾಲೆ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುತ್ತೇನೆ. ನೀವು ಮಾತ್ರ ಯಾರ ಮಾತೂ ಕೇಳದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿ.ರವಿಶಂಕರ್‌ರನ್ನು ಗೆಲ್ಲಿಸಿ,'' ಎಂದು ಮನವಿ ಮಾಡಿದರು.


from India & World News in Kannada | VK Polls https://ift.tt/3brUIbv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...