ಟ್ರೀ ಪಾರ್ಕ್ ವಿರೋಧದ ಬೆನ್ನಲ್ಲೇ, ತುರಹಳ್ಳಿಯಲ್ಲಿ 4 ಎಕರೆ ಅರಣ್ಯಕ್ಕೆ ಬಿತ್ತು ಬೆಂಕಿ!

ಕೆಂಗೇರಿ: ಕಿರು ಅರಣ್ಯ ಪ್ರದೇಶಕ್ಕೆ ಬೆಂಕಿ ತಗಲಿ ಸುಮಾರು 4 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ''ಶುಕ್ರವಾರ ಸಂಜೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಸಿಬ್ಬಂದಿ ಸ್ಥಳಕ್ಕೆ ತೆರಳಿ, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಏಳು ಗಂಟೆ ಸತತ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಬೇಸಿಗೆ ಸಮೀಪಿಸಿರುವುದರಿಂದ ಅರಣ್ಯ ಪ್ರದೇಶದ ಲ್ಲಿಹುಲ್ಲುಒಣಗಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿವೆ. ಘಟನೆಯಲ್ಲಿಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ'' ಎಂದು ಕಗ್ಗಲೀಪುರ ಅರಣ್ಯ ವಲಯಾಧಿಕಾರಿ ಗೋಪಾಲ್‌ ತಿಳಿಸಿದ್ದಾರೆ. ಸುಮಾರು 597 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಸುಮಾರು 38 ಎಕರೆಯಷ್ಟು ಪ್ರದೇಶವನ್ನು ವೃಕ್ಷೋದ್ಯಾನಕ್ಕೆ ಮೀಸಲಿರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ವಾಯು ವಿಹಾರಿಗಳು, ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಇದೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುವ ಪ್ರದೇಶದಲ್ಲಿಇದೀಗ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಒಣಹುಲ್ಲು ಹೆಚ್ಚಿನ ಪ್ರಮಾಣದಲ್ಲಿತ್ತು. ತಂತಿಬೇಲಿಯಿಂದ ರಕ್ಷಣೆ ಇಲ್ಲ: ''ತುರಹಳ್ಳಿ ಅರಣ್ಯದ ಸುತ್ತ ತಂತಿಬೇಲಿ ಅಳವಡಿಸಿದ್ದರೂ ಮೂರ್ನಾಲ್ಕು ಅಡಿಯಷ್ಟೇ ಎತ್ತರವಿದೆ. ಅರಣ್ಯ ರಕ್ಷಕರ ಕಣ್ತಪ್ಪಿಸಿ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವಂತಿದೆ. ಆಗಾಗ್ಗೆ ಕಿಡಿಗೇಡಿಗಳು ತಂತಿಯೊಳಗೆ ನುಸುಳಿ ಒಳಗೆ ತೆರಳುವುದುಂಟು. ಹೀಗೆ ಅರಣ್ಯ ಪ್ರದೇಶದ ಒಳಗೆ ತೆರಳಿದವರಿಂದಲೇ ಬೆಂಕಿ ಬಿದ್ದಿರುವ ಶಂಕೆ ಇದೆ. ವಿಸ್ತಾರವಾದ ಪ್ರದೇಶದ ಬಗ್ಗೆ ನಿಗಾ ಇಡಲು 5-6 ಮಂದಿ ಅರಣ್ಯ ರಕ್ಷಕರನ್ನು ನೇಮಿಸಲಾಗಿದೆ. ಅರಣ್ಯ ರಕ್ಷಕರ ಕಣ್ತಪ್ಪಿಸಿ ಕಿಡಿಗೇಡಿಗಳು ಕಾಡಿನ ಒಳಗೆ ನುಗ್ಗಿರುವ ಸಾಧ್ಯತೆ ಇದೆ. ಸಿಬ್ಬಂದಿ ಹೆಚ್ಚಳವಾದರೆ ಇಂತಹ ಅವಘಡ ತಪ್ಪಿಸಬಹುದು,'' ಎಂದು ಸ್ಥಳೀಯ ನಿವಾಸಿ ವಿಜಯ್‌ ತಿಳಿಸಿದರು. ಟ್ರೀಪಾರ್ಕ್ ಆಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯಿಂದಾಗಿ ತುರಹಳ್ಳಿ ಅರಣ್ಯ ಇತ್ತೀಚೆಗೆ ಸುದ್ದಿಯಲ್ಲಿತ್ತು. ಪರಿಸರವಾದಿಗಳ, ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿಟ್ರೀಪಾರ್ಕ್ ಯೋಜನೆಯನ್ನು ಕೈಬಿಡುವುದಾಗಿ ಸರಕಾರ ಪ್ರಕಟಿಸಿದೆ. ಗಸ್ತು ಹೆಚ್ಚಿಸಲು ಕ್ರಮ ''ತುರಹಳ್ಳಿ ಅರಣ್ಯದಲ್ಲಿಮತ್ತೆ ಇಂತಹ ಘಟನೆಗಳು ನಡೆಯದಂತೆ ನಿಗಾ ವಹಿಸಲು ಗಸ್ತು ಹೆಚ್ಚಿಸಲಾಗುವುದು. ಜತೆಗೆ ಅಕ್ರಮವಾಗಿ ಅರಣ್ಯ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,'' ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. ಜನವಸತಿ ಪ್ರದೇಶಕ್ಕೂ ಕಾಣಿಸಿದ ಬೆಂಕಿ ಗಾಣಿಗರ ಪಾಳ್ಯ- ಚಿಕ್ಕೇಗೌಡನ ಪಾಳ್ಯ ನಡುವೆ ಹರಡಿಕೊಂಡಿರುವ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಬಿದ್ದ ಪ್ರದೇಶ ರಸ್ತೆಯಿಂದ ಐದಾರು ಕಿ.ಮೀ.ನಷ್ಟು ದೂರವಿದೆ. ಎತ್ತರದ ಪ್ರದೇಶವಾದ ಕಾರಣ ಅಕ್ಕಪಕ್ಕದ ಜನವಸತಿ ಪ್ರದೇಶಕ್ಕೂ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಾಣಿಸುತ್ತಿತ್ತು. ಇದೇ ಮೊದಲಲ್ಲ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಜನವರಿಯಲ್ಲಿಕನಕಪುರ ರಸ್ತೆಗೆ ಹೊಂದಿಕೊಂಡ ಅರಣ್ಯ ಪ್ರದೇಶದಲ್ಲಿಬೆಂಕಿ ಕಾಣಿಸಿಕೊಂಡಿತ್ತು.


from India & World News in Kannada | VK Polls https://ift.tt/3sce9vv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...