ಪುದುಚೇರಿ: ಕರ್ನಾಟಕ, ಮಧ್ಯಪ್ರದೇಶದಲ್ಲಿ ಕಳೆದುಕೊಂಡಿದ್ದ ಇದೀಗ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ಸರ್ಕಾರ ಕಳೆದುಕೊಂಡಿದೆ. ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಇರುವಾಗ ಪುದುಚೇರಿಯ ವಿ. ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಐದವರು ಶಾಸಕರ ರಾಜೀನಾಮೆ ಹಾಗೂ ಒಬ್ಬ ಶಾಸಕರ ಅನರ್ಹತೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಹೀಗಾಗಿ ಲೆಫ್ಟಿನೆಂಟ್ ಗೌರ್ನರ್ ತಮಿಳ್ಸಾಯಿ ಸೌಂದರ್ಯರಾಜನ್ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ನಾರಾಯಣಸಾಮಿಗೆ ತಿಳಿಸಿದ್ದರು. ಹೀಗಾಗಿ ಸೋಮವಾರ ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಇಂದು ನಡೆದ ಅಧಿವೇಶನಲ್ಲಿ ಬಹುಮತ ಸಾಬೀತು ಪಡಿಸಲು ನಾರಾಯಣಸಾಮಿ ವಿಫಲರಾಗಿದ್ದಾರೆ. ಅಲ್ಲದೇ ಬಹುಮತ ಸಾಬೀತು ಪಡಿಸುವುದಕ್ಕಿಂತಲೂ ಮುಂಚಿತವಾಗಿ ಸದನದಿಂದ ಹೊರ ನಡೆದಿದ್ದಾರೆ. ಅಲ್ಲಿಗೆ ಬಹುಮತ ಸಾಬೀತು ಪಡಿಸಲು ಸರ್ಕಾರ ವಿಫಲವಾಗಿದ್ದು, ಕಲಾಪವನ್ನು ಸ್ಪೀಕರ್ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ವಿಶ್ವಾಸ ಮತದಲ್ಲಿ ಸೋಲಾಗುತ್ತಲೇ ನಾರಾಯಣಸಾಮಿ ರಾಜೀನಾಮೆ ನೀಡಲು ಲೆಫ್ಟಿನೆಂಟ್ ಗೌರ್ನರ್ ನಿವಾಸಕ್ಕೆ ನಾರಾಯಣಸಾಮಿ ತೆರಳಿದ್ದಾರೆ. ವಿಧಾನಸಭೆ ಅವಧಿ ಮುಗಿಯಲು ಇನ್ನು ಆರು ತಿಂಗಳು ಮಾತ್ರ ಬಾಕಿ ಇದ್ದು, ಹೊಸ ಸರ್ಕಾರ ರಚಿಸಲು ವಿಪಕ್ಷಗಳಿಗೆ ರಾಜ್ಯಪಾಲರು ಆಹ್ವಾನ ನೀಡುತ್ತಾರೆಯೋ ಅಥವಾ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುತ್ತಾರೆ ಎನ್ನುವುದು ಕಾದು ನೋಡಬೇಕಿದೆ. ಮೂವರು ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 33 ಮಂದಿ ಬಲಾಬಲದ ವಿಧಾನಸಭೆಯಲ್ಲಿ, ಆರು ಮಂದಿಯ ರಾಜೀನಾಮೆಯಿಂದಾಗಿ ಸಂಖ್ಯಾಬಲ 26 ಕ್ಕೆ ಕುಸಿದಿತ್ತು, ಕಾಂಗ್ರೆಸ್ನ 9, ಡಿಎಂಕೆಯ ಎರಡು ಹಾಗೂ ಓರ್ವ ಪಕ್ಷೇತರ ಸೇರಿ ಆಡಳಿತ ಪಾಳಯದಲ್ಲಿ ಕೇವಲ 12 ಶಾಸಕರು ಮಾತ್ರ ಬಾಕಿಯಾಗಿದ್ದರು.ವಿರೋಧ ಪಕ್ಷದಲ್ಲಿ ಸದ್ಯ 14 ಮಂದಿ ಶಾಸಕರಿದ್ದಾರೆ.
from India & World News in Kannada | VK Polls https://ift.tt/3bsXVr5