4 ತಿಂಗಳಿನಿಂದ ಸಿಬ್ಬಂದಿಗಳಿಗೆ ಸಂಬಳವೇ ಇಲ್ಲ: ದಕ್ಷಿಣ ಕನ್ನಡ ಜಿಲ್ಲೆಯ 3 ಇಂದಿರಾ ಕ್ಯಾಂಟೀನ್‌ ಬಂದ್‌!

ಪುತ್ತೂರು: ಬಡ ಮತ್ತು ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ನೀಡುವ ಉದ್ದೇಶದಿಂದ ಸಿದ್ದರಾಮಯ್ಯ ಸರಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್‌ ಇದೀಗ ಸರಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಕಂಗೆಟ್ಟಿದೆ. 4 ತಿಂಗಳಿನಿಂದ ಸಿಬ್ಬಂದಿಗಳಿಗೆ ಸಂಬಳ ನೀಡದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ , ಮತ್ತು ಬಂಟ್ವಾಳದ ಇಂದಿರಾ ಕ್ಯಾಂಟೀನ್‌ಗಳು ಕಳೆದ 3 ದಿನಗಳಿಂದ ಮುಚ್ಚಿವೆ! ಈ ಮೂರು ಕ್ಯಾಂಟೀನ್‌ಗಳಲ್ಲಿ ತಲಾ ಏಳರಂತೆ ಸುಮಾರು 21 ಮಂದಿ ಕೆಲಸ ಮಾಡುತ್ತಿದ್ದು, ಅಕ್ಟೋಬರ್‌ ನಂತರ ಯಾರಿಗೂ ಸಂಬಳ ಸಿಕ್ಕಿಲ್ಲ. ಇವತ್ತು, ನಾಳೆ ಎಂದು ವೇತನಕ್ಕಾಗಿ ಕಾದು ಸುಸ್ತಾದ ಸಿಬ್ಬಂದಿ ಶನಿವಾರದಿಂದ ಕ್ಯಾಂಟೀನ್‌ಗಳನ್ನೇ ಮುಚ್ಚಿ ಮನೆಯಲ್ಲಿ ಕೂತಿದ್ದಾರೆ. ದ.ಕ. ಜಿಲ್ಲೆಯ 3 ಕ್ಯಾಂಟೀನ್‌ ಸೇರಿದಂತೆ ರಾಜ್ಯದಲ್ಲಿ 130 ಕ್ಯಾಂಟೀನ್‌ಗಳನ್ನು ನಡೆಸುತ್ತಿರುವ ಭಾರತೀಯ ಮಾನವ ಕಲ್ಯಾಣ ಪರಿಷದ್‌ನವರಲ್ಲಿ ಈ ಬಗ್ಗೆ ಕೇಳಿದರೆ, ನಮಗೆ ಆಯಾ ಜಿಲ್ಲಾಡಳಿತಗಳು ಕಳೆದ 11 ತಿಂಗಳಿನಿಂದ ಹಣ ನೀಡಿಲ್ಲ. ನಾವು ಕೈಯಿಂದ ಎಷ್ಟು ಭರಿಸಲು ಸಾಧ್ಯ ಎಂದು ಕೇಳುತ್ತಿದ್ದಾರೆ. ಕ್ಯಾಂಟೀನ್‌ ವಹಿಸಿಕೊಂಡ ಕಂಪನಿಗಳಿಗೆ ಜಿಲ್ಲಾಡಳಿತಗಳ ಮೂಲಕ ಅನುದಾನ ನೀಡಲು ರಾಜ್ಯ ಸರಕಾರ ಯಾಕೆ ಸೂಚಿಸಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಬಂಟ್ವಾಳದಲ್ಲಿ ಎರಡೂವರೆ ವರ್ಷದಿಂದ, ಪುತ್ತೂರಿನಲ್ಲಿ 2 ವರ್ಷದಿಂದ, ಸುಳ್ಯದಲ್ಲಿ 1 ವರ್ಷದಿಂದ ಇಂದಿರಾ ಕ್ಯಾಂಟೀನ್‌ ನಡೆಯುತ್ತಿದೆ. ಪುತ್ತೂರಿನಲ್ಲಿ ಮಧ್ಯಾಹ್ನ ಸುಮಾರು 500, ಸುಳ್ಯ ಮತ್ತು ಬಂಟ್ವಾಳದಲ್ಲಿ 300 ಊಟ ಖರ್ಚಾಗುತ್ತಿದೆ. ಬೆಳಗ್ಗಿನ ಉಪಾಹಾರ ಮತ್ತು ರಾತ್ರಿ ಊಟ ಇದರ ಅರ್ಧದಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂದು ಈ ಕ್ಯಾಂಟೀನ್‌ಗಳ ಸಹಾಯಕ ಮ್ಯಾನೇಜರ್‌ ಮಜೀದ್‌ ಆರ್ಲಪದವು ಹೇಳುತ್ತಾರೆ. ಕೊರೊನಾ ಕಾಲಘಟ್ಟದಲ್ಲಿ, ಅದರಲ್ಲೂ ಲಾಕ್‌ಡೌನ್‌ ಕಾಲದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ವ್ಯವಹಾರ ವಿರಳಗೊಂಡಿದ್ದರೂ, ಸಂತ್ರಸ್ತ ಕಾರ್ಮಿಕರು, ಅಲೆಮಾರಿ ಜನರಿಗೆ ಊಟ ನೀಡಲು ಇಂದಿರಾ ಕ್ಯಾಂಟೀನ್‌ ಬಳಕೆಯಾಗುತ್ತಿತ್ತು. ಲಾಕ್‌ಡೌನ್‌ ತೆರವುಗೊಂಡ ಬಳಿಕ ಚಟುವಟಿಕೆ ಬಿರುಸುಗೊಂಡಿದ್ದು, ಇತ್ತೀಚೆಗೆ ಕಾಲೇಜುಗಳ ಆರಂಭದ ಬಳಿಕ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದರು. ಇದೀಗ ದಿಢೀರ್‌ ಕ್ಯಾಂಟೀನ್‌ ಬಂದಾಗಿರುವುದು ಸಾಮಾನ್ಯ ಜನರಿಗೆ ಸಂಕಟ ತಂದಿದೆ. ಅಕ್ಟೋಬರ್‌ನ ಸಂಬಳ ನೀಡಿದ್ದಾರೆ. ಆ ಬಳಿಕ ಸಿಕ್ಕಿಲ್ಲ. ಸಿಬ್ಬಂದಿಗಳೆಲ್ಲ ಕಂಗಾಲಾಗಿದ್ದು, ಸಾಲ ಮಾಡಿ ಬಸವಳಿದಿದ್ದಾರೆ. ನಮ್ಮ ಕಂಪನಿಗೆ ತಿಳಿಸಿದ್ದೇವೆ. ಬೇರೆ ದಾರಿಯಿಲ್ಲದೆ ಕ್ಯಾಂಟೀನ್‌ ಮುಚ್ಚಿದ್ದೇವೆ ಎಂದು ಮಜೀದ್‌ ಹೇಳುತ್ತಾರೆ. 21 ಕೋಟಿ ರೂ. ಬಾಕಿ ಇದೆ ಬೆಂಗಳೂರು ನಗರದಲ್ಲಿ 45 ಮತ್ತು ರಾಜ್ಯದ ಇತರೆಡೆ 85 ಕ್ಯಾಂಟೀನ್‌ಗಳನ್ನು ನಾವು ನಡೆಸುತ್ತಿದ್ದೇವೆ. 21 ಕೋಟಿ ರೂ. ನಮಗೆ ಸರಕಾರದ ಕಡೆಯಿಂದ ಬರಲು ಬಾಕಿ ಇದೆ. ತಿಂಗಳೊಂದಕ್ಕೆ ಸಿಬ್ಬಂದಿ ವೇತನಕ್ಕಾಗಿಯೇ ನಾವು 95 ಲಕ್ಷ ಖರ್ಚು ಮಾಡಬೇಕು. ಆಹಾರ ಸಾಮಗ್ರಿ ಖರೀದಿಯ ಖರ್ಚು ಬೇರೆಯೇ ಇದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕಳೆದ ಮಾರ್ಚ್ ನಿಂದ ಹಣ ನೀಡಿಲ್ಲ. 3 ಕ್ಯಾಂಟೀನ್‌ ಮುಚ್ಚಿರುವ ವಿಷಯ ಗಮನಕ್ಕೆ ಬಂದಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ಶಶಿಕುಮಾರ್‌, ಆಡಳಿತ ವಿಭಾಗ, ಭಾರತೀಯ ಮಾನವ ಕಲ್ಯಾಣ ಪರಿಷದ್‌ (ಇಂದಿರಾ ಕ್ಯಾಂಟೀನ್‌ ನಿರ್ವಹಿಸುತ್ತಿರುವ ಸಂಸ್ಥೆ)


from India & World News in Kannada | VK Polls https://ift.tt/3dBYUYC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...