ಶತ್ರು ರಾಷ್ಟ್ರಗಳಿಗೆ ರಾಹುಲ್ ಹೇಳಿಕೆಗಳಿಂದ ಲಾಭ: ರಾಮ್ ಮಾಧವ್ ಆಕ್ರೋಶ!

ನವದೆಹಲಿ: ಲಡಾಖ್ ಗಡಿಯಲ್ಲಿ ಸಂಭವಿಸಿರುವ ಭಾರತ-ಚೀನಾ ಸೈನಿಕರ ಭೀಕರ ಘರ್ಷಣೆ ಕುರಿತು ನಿರಂತರವಾಗಿ ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆಗಳು ಶತ್ರು ರಾಷ್ಟ್ರಗಳಿಗೆ ಲಾಭ ಕಲ್ಪಿಸುತ್ತಿವೆ ಎಂದು ರಾಮ್ ಮಾಧವ್ ಗಂಭೀರ ಆರೋಪ ಮಾಡಿದ್ದಾರೆ. ಇಡೀ ದೇಶ ಒಂದಾಗಿ ಸೈನ್ಯದ ಮನೋಬಲ ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಇಂತಹ ಹೇಳಿಕೆಗಳನ್ನು ನೀಡುವುದು ಸಲ್ಲ ಎಂದು ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ. ವಿಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶತ್ರು ರಾಷ್ಟ್ರಗಳಿಗೆ ಲಾಭವಾಗುವಂತೆ ಹೇಳಿಕೆಗಳನ್ನು ನೀಡುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ರಾಮ್ ಮಾಧವ್ ಬೇಸರ ವ್ಯಕ್ತಪಡಿಸಿದ್ದಾರೆ. ಇಡೀ ದೇಶ ಸೇನೆ ಮತ್ತು ಸರ್ಕಾರದ ಪರವಾಗಿ ನಿಂತಿದ್ದು, ಭಾರತೀಯ ಯೋಧರ ಬಲಿದಾನಕ್ಕೆ ಕಂಬನಿ ಮಿಡಿಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳು ಈ ಒಗ್ಗಟ್ಟನ್ನು ಮುರಿಯುವಂತಿದೆ ಎಂದು ರಾಮ್ ಮಾಧವ್ ಹೇಳಿದರು. ಭಾರತ ಸಾರ್ವಭೌಮತ್ವದ ಮೇಲೆ ಯಾವ ರಾಷ್ಟ್ರವೂ ಸವಾರಿ ಮಾಡಲಾಗದು ಎಂದು ಹೇಳಿದ ರಾಮ್ ಮಾಧವ್, ಶಾಂತಿಯ ಬಯಕೆ ನಮ್ಮ ದೌರ್ಬಲ್ಯವೆಂದು ಯಾವ ರಾಷ್ಟ್ರವೂ ಪರಿಗಣಿಸದಿರುವಂತೆ ತಾಕೀತು ಮಾಡಿದರು.


from India & World News in Kannada | VK Polls https://ift.tt/3hCSwA0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...