ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಣತಂತ್ರ ರೂಪಿಸಲು ಅವರ ಐ-ಪ್ಯಾಕ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಕುರಿತು ಭಾನುವಾರ ಟ್ವಿಟರ್ನಲ್ಲಿ ಘೋಷಣೆ ಮಾಡಿರುವ ಡಿಎಂಕೆ ವರಿಷ್ಠ ಅವರು, "2021ರ ವಿಧಾನಸಭೆ ಚುನಾವಣೆ ಸಿದ್ಧತೆಗಾಗಿ ಐ-ಪ್ಯಾಕ್ ಮೂಲಕ ಬುದ್ಧಿವಂತ ಮತ್ತು ವೃತ್ತಿಪರರ ತಂಡವು ಡಿಎಂಕೆ ಪರ ಕೆಲಸ ಮಾಡಲಿದೆ. ರಾಜ್ಯದಲ್ಲಿ ಪಕ್ಷದ ವೈಭವವನ್ನು ಮತ್ತೆ ನೋಡುವಂತಾಗಲು ನಮ್ಮ ಯೋಜನೆಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿಈ ತಂಡ ನೆರವು ನೀಡಲಿದೆ,'' ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, "ತಮಿಳುನಾಡಿನಲ್ಲಿರುವ ನಮ್ಮ ತಂಡವು ಡಿಎಂಕೆ ಮತ್ತೆ ಅಧಿಕಾರಕ್ಕೆ ಮರಳಲು ಖಂಡಿತವಾಗಿಯೂ ಶ್ರಮಿಸಲಿದೆ," ಎಂದು ತಿಳಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಪ್ರಚಾರ ತಂತ್ರಗಳನ್ನು ರೂಪಿಸಿದ್ದ ಪ್ರಶಾಂತ್ ಕಿಶೋರ್, 2015ರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರಿಗೂ ನೆರವಾಗಿದ್ದರು. ನಂತರ ಜೆಡಿಯು ಸೇರಿ ಉಪಾಧ್ಯಕ್ಷರಾಗಿದ್ದ ಅವರನ್ನು ಸಿಎಎ ಕುರಿತು ಪಕ್ಷದ ನಿಲುವು ಪ್ರಶ್ನಿಸಿದ್ದಕ್ಕಾಗಿ ಕೆಲದಿನಗಳ ಹಿಂದೆ ಉಚ್ಚಾಟಿಸಲಾಗಿತ್ತು. 2017ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಕ್ಯಾ. ಅಮರೀಂದರ್ ಸಿಂಗ್, 2018ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯ ಜಗನ್ ಮೋಹನ್ ರೆಡ್ಡಿ ಪರವಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಇದೀಗ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪರ ಚುನಾವಣಾ ರಣತಂತ್ರಗಳನ್ನು ರೂಪಿಸುತ್ತಿರುವ ಅವರು, ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪರವಾಗಿಯೂ ಕೆಲಸ ಮಾಡಲಿದ್ದಾರೆ.
from India & World News in Kannada | VK Polls https://ift.tt/2GO4ky7