ಮೈಸೂರು: ಪಾಲಿಕೆ ಮೇಯರ್ ಎಲೆಕ್ಷನ್ ಸಮೀಪಿಸುತ್ತಿದೆ . ಮೇಯರ್ ಹುದ್ದೆಗಾಗಿ ಮೂರು ಪಕ್ಷಗಳು ತೀವ್ರ ಪೈಪೋಟಿ ನಡೆಸ್ತಿದೆ . ಜೆಡಿಎಸ್ ಜತೆ ದೋಸ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಹಾತೊರೆಯುತ್ತಿದೆ. ಹೀಗಿರುವಾಗ್ಲೇ ಶನಿವಾರ ಬೆಳ್ಳಂಬೆಳಗ್ಗೆಯೇ ಮೈಸೂರಿನ ನಿವಾಸದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ಗಳ ಸಭೆ ನಡೆಯಿತು . ಜೆಡಿಎಸ್ ಜತೆ ಮೈತ್ರಿ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡಲಾಯಿತು . ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ದೃಷ್ಟಿಯಿಂದ ಬೇಕಾಗಿರುವ ರಣತಂತ್ರದ ಬಗ್ಗೆಯೂ ಸಿದ್ದರಾಮಯ್ಯ ಸಲಹೆ ಸೂಚನೆ ಕೊಟ್ರು . ಜೆಡಿಎಸ್ ಜತೆ ಮೈತ್ರಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿರೋದ್ರಿಂದ ಮೇಯರ್ ಚುನಾವಣೆ ಮತ್ತಷ್ಟು ರೋಚಕತೆ ಸೃಷ್ಟಿಸಿದೆ. ಇನ್ನು, ಸಭೆ ಬಳಿಕ ಮಾಧ್ಯ,ಗಳ ಜತೆ ಮಾತನಾಡಿದ ಸಿದ್ದರಾಮಯ್ಯಜೆಡಿಎಸ್ ತಾನಾಗಿ ಬಂದು ಮೈತ್ರಿ ಮಾಡಿಕೊಂಡರೆ ನನ್ನ ವಿರೋಧ ಇಲ್ಲ .ಹಳೆಯ ಒಪ್ಪಂದದಂತೆ ನಮಗೆ ಮೇಯರ್ ಸ್ಥಾನ ಅವರು ನೀಡಬೇಕು . ಮೇಯರ್ ಸ್ಥಾನ ಕೊಟ್ಟರೆ ಮೈತ್ರಿ ಮುಂದುವರಿಸಲು ಹೇಳಿದ್ದೇನೆ ಅಂತ ಹೇಳಿದ್ರು. ಅಲ್ದೇ ಎಲ್ಲರಿಗೂ ಒಗ್ಗಟ್ಟಾಗಿರಿ ಜಗಳ ಮಾಡಿಕೊಳ್ಳಬೇಡಿ ಅಂತ ಸಭೆಯಲ್ಲಿ ಹೇಳಿದ್ದೇನೆ ಅಂತ ಸಿದ್ದರಾಮಯ್ಯ ತಿಳಿಸಿದ್ರು. ಕಮಲಪಾಳಯ ನಡೆ ಇನ್ನೂ ನಿಗೂಢ..! ಶತಾಯಗತಾಯ ಮೇಯರ್ಗಾದಿಗಾಗಿ ಪ್ರಯತ್ನಿಸುತ್ತಿರುವ ಬಿಜೆಪಿ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ . ಮೇಯರ್ ಎಲೆಕ್ಷನ್ ಬಗ್ಗೆ ಅಖಾಡಕ್ಕೆ ಶಾಸಕ ತನ್ವೀರ್ ಸೇಠ್ ಧುಮುಕಿರೋದು ಕಮಲಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಈಗಾಗಲೇ ಜೆಡಿಎಸ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ದಳಪತಿಗಳ ನಿರ್ಧಾರಕ್ಕಾಗಿ ಕಾದುಕುಳಿತಿದೆ. ದಳಪತಿಗಳ ನಿರ್ಧಾರವೇ ಫೈನಲ್! ಇನ್ನೂ, ಯಾರ ಜತೆ ಮೈತ್ರಿ ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ದಳಪತಿಗಳು ತಲೆಕೆಡಿಸಿಕೊಂಡಿದ್ದಾರೆ . ಸಾರಾಮಹೇಶ್ ನೇತೃತ್ವದಲ್ಲಿ ಮೊನ್ನೆ ಸಭೆ ನಡೆಸಲಾಗಿದ್ದು , ಜೆಡಿಎಸ್ ವರಿಷ್ಠರ ಅಂಗಳದಲ್ಲಿ ಚೆಂಡುಬಿದ್ದಿದೆ . ಒಟ್ಟಾರೆ ಫೆ 24ರಂದು ನಡೆಯುವ ಪಾಲಿಕೆ ಮೇಯರ್ ಎಲೆಕ್ಷನ್ ರಣಾಂಗಣ ಸದ್ದಿಲ್ಲದೇ ರೋಚಕಗೊಂಡಿದ್ದು , ಯಾರ ಮೈತ್ರಿ ವರ್ಕೌಟ್ ಆಗಲಿದೆ ಅನ್ನೋದು ಸದ್ಯದ ಕುತೂಹಲವಾಗಿದೆ. ಜೆಡಿಎಸ್ ಯಾರಿಗೆ ಕೈಕೊಡುತ್ತೆ ಯಾರ ಜತೆ ದೋಸ್ತಿ ಬೆಳೆಸುತ್ತೆ ಅನ್ನೋದು ಫೆ 24 ರಂದು ನಿರ್ಧಾರವಾಗಲಿದೆ.
from India & World News in Kannada | VK Polls https://ift.tt/3ud9tHA