ಭಾಗ್ಯಲಕ್ಷ್ಮಿ ಯೋಜನೆ ಅಂಚೆ ಕಚೇರಿಗೆ ಶಿಫ್ಟ್‌; ಹೆಸರು ಬದಲಾವಣೆ ಜತೆಗೆ ಹೊಸ ಸೌಲಭ್ಯ

* ಎಚ್‌.ಪಿ.ಪುಣ್ಯವತಿ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭರವಸೆಯಾಗಿರುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ 'ಭಾಗ್ಯಲಕ್ಷ್ಮಿ ಯೋಜನೆ'ಯನ್ನು ಜೀವವಿಮಾ ನಿಗಮದಿಂದ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಮುಂದೆ ಇದರ ಹೆಸರು ಸುಕನ್ಯಾ ಯೋಜನೆ ಎಂದಾಗಲಿದೆ. ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆಯನ್ನೂ ಅಂಚೆ ಇಲಾಖೆಯೇ ನಿರ್ವಹಿಸುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕೆ ನೆರವಾಗುವಂತೆ 2006- 07ರಲ್ಲಿ ಅಂದಿನ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರಕಾರ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತ್ತು. ಸರಕಾರವೇ ಹಣ ತುಂಬಿಸಿ ಆ ಮಕ್ಕಳಿಗೆ 18 ವರ್ಷ ತುಂಬಿದಾಗ ಎಲ್ಐಸಿ ವತಿಯಿಂದ ಒಂದು ಲಕ್ಷ ರೂ. ಮೆಚ್ಯೂರಿಟಿ ಹಣ ನೀಡುವುದಾಗಿ ಒಪ್ಪಂದ ನಡೆದಿತ್ತು. ಆದರೆ, ಕ್ರಮೇಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಠೇವಣಿ ಮೊತ್ತಕ್ಕೂ, 18 ವರ್ಷ ತುಂಬಿದ ನಂತರ ಆ ಫಲಾನುಭವಿಗಳಿಗೆ ಒಂದು ಲಕ್ಷ ರೂ. ನೀಡುವುದಕ್ಕೂ ವ್ಯತ್ಯಾಸವಾಗಲಿದೆ ಎಂದು ಎಲ್ಐಸಿಯು ಈ ಯೋಜನೆಯಿಂದ ಹಿಂದೆ ಸರಿದ ಪರಿಣಾಮ ಇದೀಗ ಅಂಚೆ ಇಲಾಖೆಗೆ ಯೋಜನೆಯನ್ನು ವರ್ಗಾಯಿಸಲಾಗಿದೆ. ಹಳೆ ಬಾಂಡ್‌ಗೆ ಎಲ್‌ಐಸಿಯಿಂದಲೇ ಹಣಯೋಜನೆ ಆರಂಭದಿಂದ 2020ರ ಮಾರ್ಚ್ ಅಂತ್ಯದವಧಿರೆಗೆ ಭಾಗ್ಯಲಕ್ಷ್ಮಿ ಬಾಂಡ್‌ ಮಾಡಿಸಿರುವವರಿಗೆ ಹಳೆಯ ನಿಯಮಗಳಂತೆ, ಭಾಗ್ಯಲಕ್ಷ್ಮಿ ಯೋಜನೆ ಎಂದೇ ಮುಂದುವರಿಯುತ್ತದೆ. ಜತೆಗೆ ಎಲ್‌ಐಸಿಯೇ ಮೆಚ್ಯೂರಿಟಿ ಹಣ ನೀಡಲಿದೆ. ಬಾಂಡ್‌ನಲ್ಲಿರುವ ಷರತ್ತುಗಳ ಪ್ರಕಾರವೇ ಹಣ ಸಿಗಲಿದೆ. ಆದರೆ, 2020ರ ಏಪ್ರಿಲ್‌ನಿಂದ ಯಾರೆಲ್ಲಾ ಭಾಗ್ಯಲಕ್ಷ್ಮಿ ಬಾಂಡ್‌ ಮಾಡಿಸಿದ್ದಾರೋ ಅವರಿಗೆ 'ಭಾಗ್ಯಲಕ್ಷ್ಮಿ ಸುಕನ್ಯಾ ಯೋಜನೆ' ಎಂದು ಬದಲಾಗಿದೆ.


from India & World News in Kannada | VK Polls https://ift.tt/37zSKEz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...