ಸಿರಿಧಾನ್ಯ ಬೆಲೆ ಕುಸಿತ: ಚನ್ನಗಿರಿಯಲ್ಲಿ ಎರಡೇ ವರ್ಷದಲ್ಲಿ ಕುಗ್ಗಿದ ಬಿತ್ತನೆ ಪ್ರದೇಶ!

ಕಿರಣ್‌ ಎಸ್‌.ಜೆ. ಸಂತೆಬೆನ್ನೂರು ದಾವಣಗೆರೆ: ಪರಂಪರಾಗತ ಬೆಳೆಯಾದ ರೈತರಿಗೆ ಖರ್ಚು ಇಲ್ಲದ ವ್ಯವಸಾಯವಾಗಿದೆ. ಇದಕ್ಕೆ ದೊಡ್ಡ ಬೇಡಿಕೆಯು ಇದೆ ಎಂದು ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ 450 ಹೆಕ್ಟೆರ್‌ನಲ್ಲಿ ಸಿರಿಧಾನ್ಯ ಬೆಳೆಯಲಾಗಿತ್ತು, ಆದರೆ ರೈತರಿಗೆ ಈ ವರ್ಷ ಸಿರಿಧಾನ್ಯಗಳ ಪಾತಳ ಕಂಡಿದ್ದು, ಕೇವಲ 50 ಹೆಕ್ಟೆರ್‌ನಲ್ಲಿ ಮಾತ್ರ ರೈತರು ಸಿರಿಧಾನ್ಯ ಬೆಳೆದಿದ್ದಾರೆ. ಒಕ್ಕೂಟದಿಂದ ಪ್ರೇರಣೆ ಮತ್ತು ನಿರ್ಲಕ್ಷ್ಯ ಚಿತ್ರದುರ್ಗ ಮತ್ತು ಸಿರಿಧಾನ್ಯಗಳ ಒಕ್ಕೂಟದಿಂದ ಕಳೆದ ನಾಲ್ಕು ವರ್ಷಗಳಲ್ಲಿ ರೈತರಿಗೆ ಸಿರಿಧಾನ್ಯ ಬೆಳೆಗೆ ಪ್ರೇರಣೆ ನೀಡಲಾಗಿತ್ತು. ಕೃಷಿಗೆ ಬೇಕಾದ ಎಲ್ಲಾ ಮಾಹಿತಿಯಿಂದ ಕೊರ್ಲೆ, ಉದಲು, ನವಣೆ, ಅರ್ಕ ಬೆಳೆಯಲಾಗಿದ್ದು, ಮೊದಲ ಮೂರು ವರ್ಷ ಸಿರಿಧಾನ್ಯಕ್ಕೆ ಕ್ವಿಂಟಲ್‌ಗೆ ಬೆಲೆ 10 ಸಾವಿರದವರೆಗೆ ಕೊಳ್ಳುತ್ತಿದ್ದರು, ಆದರೆ ಈ ವರ್ಷ ಸಿರಿಧಾನ್ಯಕ್ಕೆ ಕ್ವಿಂಟಲ್‌ಗೆ ಕೇವಲ 1700ರಿಂದ 2000ರೂಗಳಿಗೆ ಒಕ್ಕೂಟ ಬೆಲೆ ನೀಡುತ್ತಿದೆ, ಇದರಿಂದ ಭೀಮನೆರೆ ಗ್ರಾಮ ಒಂದರಲ್ಲೆ ಸುಮಾರು 50 ಟನ್‌ಗೂ ಹೆಚ್ಚು ಸಿರಿಧಾನ್ಯಗಳನ್ನು ರೈತರು ತಮ್ಮ ಗೋದಾಮು ಮತ್ತು ಮನೆಯಲ್ಲಿ ಮಾರಾಟ ಮಾಡದೇ ಇಟ್ಟುಕೊಳ್ಳುವಂತಾಗಿದೆ. 'ಸಾರಾ' ಸಂಸ್ಕರಣಾ ಘಟಕ ಬೇಡಿಕೆ ಭೀಮನೆರೆ ಭಾಗದ ಹತ್ತಕ್ಕೂ ಹೆಚ್ಚು ಗ್ರಾಮಗಳ ರೈತರಿಂದ ಸಿರಿಧಾನ್ಯ ಬೆಳೆಯುವ ರೈತರು *ಸಾರಾ* ಬಳಗವನ್ನು ಮಾಡಿಕೊಂಡಿದ್ದು, ಸಿರಿಧಾನ್ಯಗಳಿಗೆ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು, ಈ ಬೆಳೆಗಳಿಗೂ ಬೆಂಬಲ ಬೆಲೆ ನಿಗಧಿ ಮಾಡಬೇಕು, ವಾಣಿಜ್ಯೀಕರಣ ಉತ್ಪನ್ನ ತಯಾರಿಕೆಗೆ ಸಿರಿಧಾನ್ಯ ಸಂಸ್ಕರಣಾ ಘಟಕ ಈ ಭಾಗದಲ್ಲಿ ಸ್ಥಾಪಿಸಬೇಕು ಎಂದು ರೈತರ ಒಕ್ಕೂಟದ ಅಧ್ಯಕ್ಷ ಭೀಮನೆರೆ ಪರಮೇಶ್ವರಪ್ಪ ಸರ್ಕಾರಕ್ಕೆ ಆಗ್ರಯಿಸಿದ್ದಾರೆ. ಸಿರಿಧಾನ್ಯಕ್ಕೆ ಸಹಾಯ ಧನ ಸರ್ಕಾರದ ಕೃಷಿ ಇಲಾಖೆಯಿಂದ ಸಿರಿಧಾನ್ಯ ಬೆಳೆದ ರೈತರಿಗೆ ಎಕರೆಗೆ 4 ಸಾವಿರ ಸಹಾಯಧನ ನೀಡುತ್ತಿದೆ, ಆದರೆ ಬೆಳೆದ ಉತ್ಪನಕ್ಕೆ ಬೆಲೆ ಸಿಕ್ಕಿಲ್ಲ ಹಾಗೂ ಬೆಂಬಲ ಬೆಲೆಯೂ ಕೊಡುತ್ತಿಲ್ಲ. ಸಾವಯವ ಅಕ್ಕಿಗೆ ಮಾರುಕಟ್ಟೆಯಲ್ಲಿ ಕೆಜಿಗೆ ನೂರರಿಂದ ನೂರ ಇಪ್ಪತ್ತು ರೂಪಾಯಿ ಬೆಲೆ ಇದೆ, ಆದರೆ ಸಿರಿಧಾನ್ಯಕ್ಕೆ ಮಾರುಕಟ್ಟೆಯಲ್ಲಿ ಕೇವಲ 20 ರೂಪಾಯಿಯಷ್ಟು ಮಾತ್ರ ಇದೆ ಎಂದು ರೈತ ಭೀಮನೆರೆ ವಿಶ್ವನಾಥ್‌ ರವರ ಅಳಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸಿರಿಧಾನ್ಯಗಳ ಸೂಕ್ತ ಮಾರುಕಟ್ಟೆ ಮತ್ತು ಸಂಸ್ಕರಣಾ ಘಟಕ ನಿರ್ಮಾಣವಾಗಿ, ಸಿರಿಧಾನ್ಯ ಬೆಳೆಗೆ ಅನುಕೂಲ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೂಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ. ಕೊವಿಡ್‌ ಕಾರಣ ಸರ್ಕಾರದಲ್ಲಿ'ರೈತ ಸಿರಿ' ಯೋಜನೆ ಜಾರಿಯಲ್ಲಿ ಇಲ್ಲ. ಸಿರಿಧಾನ್ಯಗಳ ಬಗ್ಗೆ ಜನರಿಗೆ ಜಾಗೃತಿ ಕಡಿಮೆ, ಇದರಿಂದ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳ ಬೆಲೆ ಕಡಿಮೆಯಾಗಿದೆ. ಸಿರಿಧಾನ್ಯಗಳಲ್ಲಿ ಇರುವ ಪೋಷಕಾಂಶವು ಮಗುನಿಂದ ಹಿಡಿದು ವೃದ್ದರವರೆಗೂ ಉತ್ತಮ ಆರೋಗ್ಯಕರ ಆಹಾರವಾಗಿದೆ. ಈ ಕಾರಣಕ್ಕೆ ಅಂಗನಾವಾಡಿ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ಮತ್ತು ಶಾಲೆಯಲ್ಲಿ ಬಿಸಿ ಊಟಕ್ಕೆ ವಿತರಿಸಲು ಸರ್ಕಾರಕ್ಕೆ ಇಲಾಖೆಯಿಂದ ಪ್ರಸ್ತಾವನೆ ನೀಡಲಾಗಿದೆ. ಶಿವಕುಮಾರ್‌ ಮಲ್ಲಾಡದ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಚನ್ನಗಿರಿ


from India & World News in Kannada | VK Polls https://ift.tt/3qHNUwB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...