ಬೆಳೆದ ತಂಬಾಕು ಮುಗಿದ ಮೇಲೆ ರೇಟ್‌ ಹೆಚ್ಚಾಯ್ತು: ಉತ್ತಮ ದರ್ಜೆ ತಂಬಾಕಿಗೆ ಈಗ 250 ರೂ. ದರ!

ಕೆ.ವಿ.ಸತೀಶ್‌ ಕೊಣನೂರು ಹಾಸನ: ರಾಮನಾಥಪುರದ ಹರಾಜು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತಂಬಾಕಿನ 250 ರೂ. ದೊರೆತು ಬೆಳೆಗಾರರನ್ನು ಬೆರಗುಗೊಳಿಸಿದ್ದರೂ ಕೊನೆ ಹಂತದಲ್ಲಿ ಏರಿದ್ದರಿಂದ ಬಹಳಷ್ಟು ರೈತರಿಗೆ ನಿರಾಸೆಯಾಗಿದೆ. ರಾಮನಾಥಪುರದ ತಂಬಾಕು ಮಂಡಳಿಯ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ್ಜೆಯ ಹೊಗೆಸೊಪ್ಪು 250 ರೂ.ಗೆ ಮಾರಾಟವಾಗಿದೆ. ಮಾರುಕಟ್ಟೆ ಪ್ರಾರಂಭವಾದ ಅನೇಕ ವರ್ಷದಿಂದ ಇದುವರೆಗೆ ಪ್ರತಿ ಕೆ.ಜಿ.ತಂಬಾಕಿಗೆ ದೊರೆತಿರುವ ಗರಿಷ್ಠ ಬೆಲೆ ಇದಾಗಿದೆ. ಬೆಲೆ ಏರಿಕೆ ಎಂದು ಕಂಪನಿಗಳು ಮತ್ತು ಅಧಿಕಾರಿಗಳು ಹೇಳಿದರೂ ನೈಜವಾಗಿ ಬೆಳೆಗಾರರ ಮೂಗಿಗೆ ತುಪ್ಪ ಸವರಿದಂತಿದೆ. ವರ್ಷಕ್ಕೆ ನೂರಾರು ಕೋಟಿ ರೂ. ವಹಿವಾಟಿಗೆ ಅವಕಾಶ ನೀಡಿರುವ ವರ್ಜೀನಿಯಾ ತಂಬಾಕು ಅರಕಲಗೂಡು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ನಾನಾ ಭಾಗಗಳ ಒಟ್ಟು 7 ಸಾವಿರಕ್ಕೂ ಹೆಚ್ಚು ಪರವಾನಗಿ ಹೊಂದಿರುವ ಬೆಳೆಗಾರರ ಭವಿಷ್ಯ ನಿರ್ಧರಿಸುತ್ತದೆ. ಹವಾಮಾನದ ವೈಪರಿತ್ಯ, ಕಟಾವಿನಲ್ಲಾಗುವ ವ್ಯತ್ಯಾಸ, ಹದಮಾಡುವಲ್ಲಿ ಆಗುವ ಏರುಪೇರು, ರಾಸಾಯನಿಕ ಗೊಬ್ಬರ ಬಳಕೆಯಲ್ಲಾಗುವ ವ್ಯತ್ಯಾಸಗಳಿಂದ ಹಾಲಿ ಹೊಗೆಸೊಪ್ಪು ಬೆಳೆಯುತ್ತಿರುವ ಬೆಳೆಗಾರರು ತಮ್ಮ ಉತ್ಪಾದನೆಯ ಒಟ್ಟು ಸೊಪ್ಪಿನ ಪೈಕಿ 50 ಕೆಜಿಯಿಂದ 1 ಕ್ವಿಂಟಾಲ್‌ ಅತ್ಯುತ್ತಮ ದರ್ಜೆಯ, 2 ಕ್ವಿಂಟಾಲ್‌ ಉತ್ತಮ ದರ್ಜೆಯ, 3 ಕ್ವಿಂಟಾಲ್‌ ಮಧ್ಯಮ ದರ್ಜೆಯ ಮತ್ತು ಅರ್ಧದಷ್ಟು ಅಥವಾ ಅದಕ್ಕಿಂತ ಹೆಚ್ಚು ಕಡಿಮೆ ಗುಣಮಟ್ಟದ ಸೊಪ್ಪನ್ನು ಉತ್ಪಾದಿಸಲು ಸಾಧ್ಯವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ನಾನಾ ಸಮಸ್ಯೆಗಳಿಂದಾಗಿ ಗುಣಮಟ್ಟದ ಹೊಗೆಸೊಪ್ಪಿನ ಉತ್ಪಾದನೆಯೂ ಇಳಿಮುಖವಾಗಿ ಇತ್ತೀಚಿನ ದಿನಗಳಲ್ಲಿ ಕಡಿಮೆ ದರ್ಜೆಯ ಹೊಗೆಸೊಪ್ಪು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದೆ. ಈ ಸೊಪ್ಪಿಗೆ ಪ್ರತಿ ಬೇಲ್‌ಗೆ 150 ರೂ.ವರೆಗೂ ಏರಿಕೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಅತ್ತುತ್ತಮ ದರ್ಜೆಯ ಹೊಗೆಸೊಪ್ಪಿಗೆ ಕೆ.ಜಿ ಗೆ 250 ರೂ. ಕೆಲವು ಮಂದಿಗಷ್ಟೇ ಲಾಭ ಎಂಬುದು ರೈತರ ಆರೋಪ. ಕಡಿಮೆ ದರ್ಜೆಯ ಹೊಗೆಸೊಪ್ಪಿಗೆ ಉತ್ತಮ ದರ ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಸದಸ್ಯರು ಮತ್ತು ಬೆಳೆಗಾರರು ರಾಮನಾಥಪುರದ ಮಾರುಕಟ್ಟೆಯಲ್ಲಿ ಕೆಲದಿನಗಳ ಹಿಂದೆ ಚಪ್ಪಡಿ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ನೀಡಿದ್ದ ಆಶ್ವಾಸನೆ ಇನ್ನೂ ಈಡೇರಿಲ್ಲ. ಶಾಸಕರು ಮತ್ತು ರೈತರ ನಿಯೋಗ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಹೆಚ್ಚಿನ ಪ್ರಮಾಣದಲ್ಲಿರುವ ಕಡಿಮೆ ದರ್ಜೆಯ ಹೊಗೆಸೊಪ್ಪಿಗೆ ಬೆಲೆ ಹೆಚ್ಚಾಗುವ ಬದಲು ಕಡಿಮೆಯಾಗುತ್ತಲೇ ಇದ್ದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಹೊಗೆಸೊಪ್ಪು ಮಾರಾಟದ ವಹಿವಾಟು ಕೊನೆ ದಿನಗಳನ್ನು ತಲುಪುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷಕ್ಕೆ ರೈತರು ಹೊಗೆಸೊಪ್ಪನ್ನು ಬೆಳೆಯಲು ಉತ್ತೇಜಿಸುವ ಸಲುವಾಗಿ ಇದೀಗ 250 ರೂ. ದರ ನೀಡುತ್ತಿರುವುದು ತಂಬಾಕು ಮಂಡಳಿ ಮತ್ತು ಕೊಳ್ಳುವ ಕಂಪನಿಗಳು ಹುನ್ನಾರ ಮಾಡುತ್ತಿವೆ. ಸೀಬಳ್ಳಿ ಯೋಗಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ತಂಬಾಕು ಮಂಡಳಿ ಹೊಗೆಸೊಪ್ಪು ಬೆಳೆಗಾರರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿದೆ. ಸರಕಾರ ಮತ್ತು ಮಂಡಳಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ದಿನೇ ದಿನೆ ಬೆಲೆ ಕುಸಿತ ಕಂಡಿದೆ. ಇನ್ನು ಮುಂದೆ ಬೆಳೆಗಾರರು ತಂಬಾಕು ಬೆಳೆಯಿಂದ ವಿಮುಖರಾಗುವುದು ಒಳ್ಳೆಯದು. ದಿಲೀಪ್‌ ಕುಮಾರ್‌ ತಂಬಾಕು ಬೆಳೆಗಾರ


from India & World News in Kannada | VK Polls https://ift.tt/3khF0Um

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...