ಪಾಟ್ನಾ: ಬಿಹಾರದ ವಿಧಾನಸಭೆ ಚುನಾವಣೆಯ ಕಾವು ಏರುತ್ತಿದ್ದಂತೆ ಇತ್ತ ಒಂದೊಂದೆ ಪಕ್ಷಗಳು ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸುತ್ತಿದೆ. ಬಿಜೆಪಿಯ ಬಳಿಕ ಬಿಹಾರದ ಪ್ರಮುಖ ಪಕ್ಷವಾಗಿರುವ ಆರ್ಜೆಡಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು ಬಿಹಾರಿ ಮತದಾರರನ್ನು ಸೆಳೆಯಲು ಭರಪೂರ ಭರವಸೆಗಳನ್ನು ನೀಡಿದೆ. ಆರ್ಜೆಡಿ ಮುಖ್ಯಸ್ಥ ಪ್ರಣಾಳಿಕೆಯನ್ನು ಪಾಟ್ನಾದಲ್ಲಿ ಬಿಡುಗಡೆಗೊಳಿಸಿದ್ದು, ರೈತರ ಸಾಲಮನ್ನಾ, 10 ಲಕ್ಷ ಉದ್ಯೋಗ ಸೃಷ್ಟಿ, ಹೊಸ ಉದ್ಯಮ ಸ್ಥಾಪಿಸಲು ತೆರಿಗೆ ಮನ್ನಾ ಯೋಜನೆ ಮತ್ತು ಬಿಹಾರದ ಜನರಿಗೆ 1,500 ರೂ.ಗಳ ನಿರುದ್ಯೋಗ ಭತ್ಯೆಯ ಭರವಸೆಯನ್ನು ನೀಡಲಾಗಿದೆ. ಪ್ರಮುಖ ಭರವಸೆಗಳು ಇಲ್ಲಿದೆ!1. ರೈತರ ಸಂಪೂರ್ಣ ಸಾಲಮನ್ನಾ 2.1,500 ರೂ. ನಿರುದ್ಯೋಗ ಭತ್ಯೆ 3.10 ಲಕ್ಷ ಉದ್ಯೋಗ ಸೃಷ್ಟಿ 4.ಹೊಸ ಉದ್ಯಮಕ್ಕೆ ತೆರಿಗೆ ಮನ್ನಾ 5. ಹೊಸ ಕೈಗಾರಿಕಾ ನೀತಿ 6. ಗುತ್ತಿಗೆ ಶಿಕ್ಷಕರು, ಉರ್ದು ಶಿಕ್ಷಕರ ನೇಮಕಾತಿ 7. ಸರ್ಕಾರಿ ಉದ್ಯೋಗಗಳು, ಸರ್ಕಾರಿ ಪರೀಕ್ಷೆಗಳಲ್ಲಿ ಅರ್ಜಿ ಸಲ್ಲಿಸಲು ಬಿಹಾರದವರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ 8. ಹಳ್ಳಿಗಳಲ್ಲಿ ಸಿಸಿಟಿವಿ ಅಳವಡಿಕೆ 9. ಬಡ ಮತ್ತು ವೃದ್ಧರಿಗೆ ಪಿಂಚಣಿ 400 ರಿಂದ 1000ಕ್ಕೆ ಏರಿಸುವುದು. ಯುವ ನೇತಾರರಾಗಿ ತೇಜಸ್ವಿ ಯಾದವ್ ಬೆಳೆಯುತ್ತಿದ್ದ ಭಾರೀ ಜನಪ್ರಿಯತೆಯನ್ನು ತಮ್ಮ ನಾಡಿನಲ್ಲಿ ಗಳಿಸಿದ್ದಾರೆ. ಇನ್ನು ಇವರಿಗೆ ಸಹೋದರ ತೇಜ್ ಪ್ರತಾಪ್ ಯಾದವ್ ಕೂಡ ಸಾಥ್ ನೀಡಿದ್ದು ಚುನಾವಣೆ ಗೆಲ್ಲುವ ಭರವಸೆಯಲ್ಲಿದ್ದಾರೆ. ಎಲೆಕ್ಷನ್ ವೇಳೆಗೆ ಜೈಲಿನಲ್ಲಿರುವ ತಂದೆ ಲಾಲೂ ಪ್ರಸಾದ್ ಯಾದವ್ ಕೂಡ ಇವರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಬಾರಿಯ ಭಾರೀ ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/34qZuU0