
ಹೊಸ ದಿಲ್ಲಿ: ಸ್ಥಿತಿ ಹಾಗೂ ಈ ಎರಡರ ಸಮ್ಮಿಶ್ರಣ ಅತ್ಯಂತ ಅಪಾಯಕಾರಿ, ಪಕ್ಷ ಈ ಎರಡನ್ನೂ ಹೊಂದಿದೆ ಎಂದು ರಾಷ್ಟ್ರಾಧ್ಯಕ್ಷ ಹರಿಹಾಯ್ದಿದ್ದಾರೆ. ಸರಣಿ ಟ್ವೀಟ್ಗಳನ್ನು ಮಾಡಿರುವ ನಡ್ಡಾ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದೆಡೆ ತಾಯಿ ತನ್ನ ವಾಕ್ಚಾತುರ್ಯದ ಮೂಲಕ ಸಭ್ಯತೆ, ಪ್ರಜಾಪ್ರಭುತ್ವದ ಮಾತನ್ನಾಡಿದರೆ, ಇನ್ನೊಂದೆಡೆ ಮಗ ರಾಜಕೀಯ ದ್ವೇಷ, ಸಿಟ್ಟು, ಸುಳ್ಳು ಹಾಗೂ ಆಕ್ರಮಣಕಾರಿ ವರ್ತನೆ ತೋರಿಸುತ್ತಿದ್ದಾರೆ. ಇದು ಇಬ್ಬಗೆ ನೀತಿ ಎಂದು ನಡ್ಡಾ ಬಣ್ಣಿಸಿದ್ದಾರೆ. ಪಂಜಾಬ್ನಲ್ಲಿ ಪ್ರಧಾನಿ ಮೋದಿ ಅವರ ಪ್ರತಿಕೃತಿ ಸುಡುವಂತೆ ರಾಹುಲ್ ಗಾಂಧಿ ನಿರ್ದೇಶನ ನೀಡುತ್ತಾರೆ. ಇದು ನಾಚಿಕೆಗೇಡಿನ ಸಂಗತಿ. ಆದ್ರೆ, ಅನಿರೀಕ್ಷಿತ ಬೆಳವಣಿಗೆ ಏನಲ್ಲ ಎಂದಿರುವ ನಡ್ಡಾ, ನೆಹರೂ - ಗಾಂಧಿ ಪರಿವಾರ ಎಂದಿಗೂ ಪ್ರಧಾನಿ ಕಚೇರಿಗೆ ಗೌರವ ನೀಡಲೇ ಇಲ್ಲ. 2004-2014ರ ಅವಧಿಯಲ್ಲಿ ಪ್ರಧಾನಿಯ ಅಧಿಕಾರ ವ್ಯಾಪ್ತಿಯನ್ನು ಕುಗ್ಗಿಸುವ ಪ್ರಯತ್ನ ನಡೆಯಿತು ಎಂದು ನಡ್ಡಾ ಹರಿಹಾಯ್ದಿದ್ದಾರೆ. ಅಸಹ್ಯದ ಪುನರಾವರ್ತನೆ ಮಾಡೋದ್ರಲ್ಲಿ ಕಾಂಗ್ರೆಸ್ ಪಕ್ಷ ಎತ್ತಿದ ಕೈ ಎಂದಿರುವ ಜೆಪಿ ನಡ್ಡಾ, ರಾಜಸ್ಥಾನದಲ್ಲಿ ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ಸಾರ್ವಕಾಲಿಕ ಏರಿಕೆ ಕಂಡಿದೆ, ರಾಜಸ್ಥಾನ ಹಾಗೂ ಪಂಜಾಬ್ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದೆ, ಪಂಜಾಬ್ನ ಸಚಿವರು ಸ್ಕಾಲರ್ಶಿಪ್ ಹಗರಣದಲ್ಲಿ ನಿರತರಾಗಿದ್ದಾರೆ ಎಂದು ಜೆಪಿ ನಡ್ಡಾ ಆರೋಪಿಸಿದ್ದಾರೆ. ವಾಕ್ ಸ್ವಾತಂತ್ರ್ಯದ ಹಕ್ಕಿನ ಕುರಿತಾಗಿ ಕಾಂಗ್ರೆಸ್ ಪಕ್ಷ ಮಾತನಾಡುವಂತೆಯೇ ಇಲ್ಲ. ಏಕೆಂದರೆ, ದಶಕಗಳಿಂದ ಆ ಪಕ್ಷ ಭಿನ್ನಾಭಿಪ್ರಾಯಗಳನ್ನು ದಮನ ಮಾಡುತ್ತಲೇ ಬಂದಿದೆ ಎಂದು ಹರಿಹಾಯ್ದಿರುವ ಜೆಪಿ ನಡ್ಡಾ, ತುರ್ತು ಪರಿಸ್ಥಿತಿಯೇ ಇದಕ್ಕೆ ಸಾಕ್ಷಿ ಎಂದಿದ್ದಾರೆ. ರಾಜೀವ್ ಗಾಂಧಿ ಆಡಳಿತಾವಧಿಯಲ್ಲೂ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಲಾಯ್ತು. ಕಾಂಗ್ರೆಸ್ ಪಕ್ಷವು ಪತ್ರಿಕೋದ್ಯಮ ಸ್ವಾತಂತ್ರ್ಯವನ್ನೇ ಬುಡಮೇಲು ಮಾಡಲು ಹೊರಟಿತ್ತು ಎಂದು ನಡ್ಡಾ ಆರೋಪಿಸಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ವಿವೇಚನಾರಹಿತವಾಗಿ ಕಾಂಗ್ರೆಸ್ ಶೈಲಿಯಲ್ಲಿ ಆಡಳಿತ ನಡೆಸುವ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡುವ ಸರ್ಕಾರವೊಂದು ಮಹಾರಾಷ್ಟ್ರದಲ್ಲಿದೆ. ಇದನ್ನ ಕಾಂಗ್ರೆಸ್ ಶೈಲಿಯ ಪ್ರಯೋಗಾಲಯವೆಂಬಂತೆ ನೋಡಬಹುದು. ಮಹಾರಾಷ್ಟ್ರ ಸರ್ಕಾರ ಆಡಳಿತ ನಡೆಸೋದನ್ನು ಬಿಟ್ಟು ಮಿಕ್ಕೆಲ್ಲವನ್ನೂ ಮಾಡ್ತಿದೆ ಎಂದು ನಡ್ಡಾ ಕಿಡಿಕಾರಿದ್ದಾರೆ. ಬಡತನದಲ್ಲಿ ಹುಟ್ಟಿ ಬೆಳೆದು ದೇಶದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ ವ್ಯಕ್ತಿಯ ವಿರುದ್ಧ ಒಂದು ಕುಟುಂಬ ದ್ವೇಷ ರಾಜಕಾರಣ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಸುಳ್ಳು ಹಾಗೂ ದ್ವೇಷ ಹೆಚ್ಚಾದಷ್ಟೂ ದೇಶದ ಜನರು ಪ್ರಧಾನಿಗೆ ನೀಡುತ್ತಿರುವ ಪ್ರೀತಿಯೂ ಹೆಚ್ಚುತ್ತಿದೆ ಎಂದು ಜೆಪಿ ನಡ್ಡಾ ಬಣ್ಣಿಸಿದ್ದಾರೆ.
from India & World News in Kannada | VK Polls https://ift.tt/35zciqT