ಕೊರೊನಾ ಸೋಂಕು ಇಳಿಮುಖ: ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸಿಲಿಂಡರ್‌ ಡಿಮ್ಯಾಂಡ್‌ ಕುಸಿತ!

ಎಸ್‌. ಜಿ. ಕುರ್ಯ, ಉಡುಪಿ ಉಡುಪಿ: ಉಡುಪಿ ನಗರವೊಂದರಲ್ಲೇ ದಿನಕ್ಕೆ 150ರಿಂದ 200 ಆಕ್ಸಿಜನ್‌ ಸಿಲಿಂಡರ್‌ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದರೆ ಈಗ ಅಬ್ಬಬ್ಬಾವೆಂದರೆ 25ರಿಂದ 30ಸಿಲಿಂಡರ್‌ಗಳಿಗಷ್ಟೇ ಬೇಡಿಕೆಯಿದೆ. ಆಸ್ಪತ್ರೆಗಳಿಗೆ ಬರುವ ಕೊರೊನಾ, ಕೊರೊನೇತರ ಗಂಭೀರ ಪ್ರಕರಣಗಳು ಬಹುತೇಕ ಕಡಿಮೆಯಾಗಿದ್ದು ಆಸ್ಪತ್ರೆಯ ಒಟ್ಟು ವ್ಯವಸ್ಥೆ, ನಿರ್ವಹಣೆಗೆ ಪೇಚಾಡುವಂತಾಗಿದೆ. ಕುಂದಾಪುರ ತಾಲೂಕಿನ ಆಸ್ಪತ್ರೆಗಳಿಗೆ ನಿತ್ಯ 200 ಆಕ್ಸಿಜನ್‌ ಸಿಲಿಂಡರ್‌ ಪೂರೈಕೆ ಈಗ 50ಕ್ಕಿಳಿದಿದ್ದರೆ ಕಾರ್ಕಳ ತಾಲೂಕಿನಲ್ಲಿದ್ದ ನಿತ್ಯ 75 ಆಕ್ಸಿಜನ್‌ ಸಿಲಿಂಡರ್‌ ಬೇಡಿಕೆ ಈಗ 25ಕ್ಕಿಳಿದಿದೆ. ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್‌ ಸಿಲಿಂಡರಲ್ಲಿ ಶೇ. 80ರಷ್ಟು ಕೊರೊನಾ ರೋಗಿಗಳಿಗೆ ಬಳಕೆಯಾಗುತ್ತಿತ್ತು. ಆಸ್ಪತ್ರೆಗಳ ಶೇ. 50ಕ್ಕೂ ಅಧಿಕ ಬೆಡ್‌ಗಳು ಈಗ ಖಾಲಿ ಬಿದ್ದಿವೆ. ಆಕ್ಸಿಜನ್‌ ಸಿಲಿಂಡರ್‌ ಕೊರತೆಯಿಂದ ರೋಗಿಗಳು ಸಾಯದಂತೆ ಕೈಗಾರಿಕೆಗೆ ಬಳಸುವ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಆಸ್ಪತ್ರೆಗಳಿಗೆ ಪೂರೈಸಲು ಕೇಂದ್ರದ ಸೂಚನೆಯಂತೆ ಜಿಲ್ಲಾಡಳಿತ 2ತಿಂಗಳ ಹಿಂದೆ ಆದೇಶ ಹೊರಡಿಸಿತ್ತು. ಉಡುಪಿ ಜಿಲ್ಲೆಯಲ್ಲಿ 27ಕೊರೊನಾ ಸಂಬಂಧಿ , ಕೊರೊನೇತರ 35ಆಸ್ಪತ್ರೆಗಳಿಗೆ ದಿನಕ್ಕೆ ಸರಾಸರಿ 450 ಆಕ್ಸಿಜನ್‌ ಸಿಲಿಂಡರ್‌ ಬೇಡಿಕೆಯಿತ್ತು. ಮಂಗಳೂರು ಬೈಕಂಪಾಡಿಯ ಮಲಬಾರ್‌ ಆಕ್ಸಿಜನ್‌, ಲಕ್ಷ್ಮಿ ಕ್ರಿಯೋಜೆನಿಕ್ಸ್‌, ಕಾರ್ನಾಡ್‌ ಗ್ಯಾಸಸ್‌ನಿಂದ ಉಡುಪಿ ಜಿಲ್ಲೆಗೆ ಬೇಡಿಕೆಯಿಟ್ಟಷ್ಟು ಆಕ್ಸಿಜನ್‌ ಸಿಲಿಂಡರ್‌ ಪೂರೈಕೆಯಾಗುತ್ತಿದ್ದು ಈ ಹಿಂದಿದ್ದ ಕೊರತೆಯೆಲ್ಲಾ ನೀಗಿದೆ. ಆಕ್ಸಿಜನ್‌ ಘಟಕಗಳಿಗೆ ಬೆಂಗಳೂರು, ಬಳ್ಳಾರಿಯಿಂದ ಲಿಕ್ವಿಡ್‌ ಆಕ್ಸಿಜನ್‌ ಪೂರೈಕೆಯಾಗುತ್ತಿದೆ. ನವರಾತ್ರಿ ಹಬ್ಬದ ಗೌಜಿ ಗದ್ದಲ, ಮೂರು ದಿನಗಳಿಂದ ರಾತ್ರಿ ಚಳಿ, ಸೈಕ್ಲೋನ್‌ಗಳಿಂದಾಗಿ ವಿಸ್ತರಣೆಯಾದ ಮಳೆ, ಬರಲಿರುವ ದೀಪಾವಳಿ ಸಂಭ್ರಮದ ನಡುವೆ ಕೋವಿಡ್‌ ಶಿಷ್ಟಾಚಾರ ಪಾಲಿಸದೆ ಜನರು ಮೈಮರೆತರೆ ಮತ್ತೆ ವಕ್ಕರಿಸಬಹುದಾದ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ವರ್ಷಗಳೇ ಬೇಕಾದೀತು, ಆಕ್ಸಿಜನ್‌ ಸಿಲಿಂಡರ್‌ ಬೇಡಿಕೆ ಆಸ್ಪತ್ರೆಗಳಲ್ಲಿ ಹೆಚ್ಚೀತು. ಆಸ್ಪತ್ರೆಗಳ ಬೇಡಿಕೆ ಪೂರೈಸಿ ಉಳಿವ ಆಕ್ಸಿಜನ್‌ ಸಿಲಿಂಡರನ್ನು ಕೈಗಾರಿಕೆಗಳಿಗೆ ಪೂರೈಸಲು ಕೇಂದ್ರ, ರಾಜ್ಯ, ಜಿಲ್ಲಾಡಳಿತ ಆದೇಶ ಬದಲಾಯಿಸಿ ಅವಕಾಶ ಮಾಡಿಕೊಟ್ಟರೆ ಕೈಗಾರಿಕಾ ಪುನಶ್ಚೇತನಕ್ಕೆ ಪೂರಕವಾದೀತು. ದಿನೇಶ್‌ ಬಂಗೇರ, ಜನರಲ್‌ ಮ್ಯಾನೇಜರ್‌, ವೆಸ್ಟ್‌ಕೋಸ್ಟ್‌ ಗ್ಯಾಸ್‌ ಏಜೆನ್ಸಿ, ಉಡುಪಿ ಕೇಂದ್ರ, ರಾಜ್ಯದ ಸೂಚನೆಗೆ ಅನುಗುಣವಾಗಿ ಜನರ ಜೀವ ಉಳಿಸಲು, ಆಸ್ಪತ್ರೆಗಳಿಗೆ ಕೈಗಾರಿಕಾ ಆಕ್ಸಿಜನ್‌ ಸಿಲಿಂಡರ್‌ ಪೂರೈಕೆಗೆ ಜಿಲ್ಲಾಡಳಿತ ಆದೇಶ ಮಾಡಿದೆ. ಕೈಗಾರಿಕೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ ಪೂರೈಸಬೇಕಿದ್ದರೆ ಸರಕಾರದ ಆದೇಶ ಬರಬೇಕು. ಅಕ್ರಮವಾಗಿ ಕೈಗಾರಿಕೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ ಒದಗಿಸಿದರೆ ಅಗತ್ಯ ವಸ್ತುಗಳ ಕಾಯಿದೆ ಪ್ರಕಾರ ಕ್ರಮ ಖಚಿತ. ನಾಗರಾಜ್‌ ಕೆ.ವಿ., ಸಹಾಯಕ ಔಷಧ ನಿಯಂತ್ರಕರು, ಉಡುಪಿ ಆಕ್ಸಿಜನ್‌ ಸಿಲಿಂಡರಿಗೆ ಎನ್‌ಸಿಪಿಎ ದರ ನಿಗದಿ ನ್ಯಾಷನಲ್‌ ಫಾರ್ಮಾಸ್ಯುಟಿಕಲ್‌ ಪ್ರೈಸಿಂಗ್‌ ಅಥಾರಿಟಿ(ಎನ್‌ಸಿಪಿಎ) ಸಾರ್ವಜನಿಕರಿಗೆ ತೊಂದರೆಯಾಗದಂತೆ ಔಷಧ ದರ ನಿಗದಿಪಡಿಸಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಔಷಧ(ದರ ನಿಯಂತ್ರಣ) ಆದೇಶ 2013ಕ್ಕೆ ಅನುಗುಣವಾಗಿ ಅ. 15ರಂದು ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌(ಎಲ್‌ಎಂಒ) ದರ ಪ್ರತಿ ಕ್ಯುಬಿಕ್‌ ಮೀಟರಿಗೆ 15.22ರೂ. ನಿಗದಿಪಡಿಸಿದೆ. ಆಕ್ಸಿಜನ್‌ ಇನ್‌ ಹೇಲೇಶನ್‌(ಮೆಡಿಸಿನಲ್‌ ಗ್ಯಾಸ್‌) ಸಿಲಿಂಡರ್‌ ದರ ಪ್ರಿ ಕ್ಯುಬಿಕ್‌ ಮೀಟರಿಗೆ 25.71ರೂ. ನಿಗದಿಪಡಿಸಿದೆ(ಸಾರಿಗೆ ವೆಚ್ಚ ಹೊರತು)ಆಕ್ಸಿಜನ್‌ ಸಿಲಿಂಡರ್‌ ತೀವ್ರ ಕೊರತೆ, ಜೀವ ಉಳಿಸುವ ಪ್ರಶ್ನೆ ಬಂದಾಗ ದರ ಏರುತ್ತಿದ್ದು ಕುಮಟಾದಿಂದ ಪ್ರತಿ ಕ್ಯುಬಿಕ್‌ಗೆ 40ರೂ.(ಸಾರಿಗೆ 40ರೂ.) ನೀಡಿ ತಂದ ಸಿಲಿಂಡರ್‌ಗೆ 250ರೂ. ವೆಚ್ಚವಾದರೆ ಸಾರಿಗೆ ವೆಚ್ಚ ಸೇರಿಸಿ 500ರೂ. ಗಳಿಗೆ ಮಾರುವುದು ಅನಿವಾರ್ಯ. ಹೀಗಾಗಿ ಸರಕಾರ ನಿಗದಿಪಡಿಸಿದ ದರ ಪರಿಷ್ಕರಿಸಲು ಗ್ಯಾಸ್‌ ಏಜೆನ್ಸಿಗಳು ಮನವಿ ಸಲ್ಲಿಸಿವೆ.


from India & World News in Kannada | VK Polls https://ift.tt/2J7Haav

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...