ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ವೇಳೆಯಲ್ಲಿ ಕರ್ನಾಟಕ ಸರ್ಕಾದ ಎಚ್ಚೆತ್ತುಕೊಂಡಿದೆ. ನೆರೆಯ ರಾಜ್ಯಗಳಿಂದ ಬರುವವರಿಂದ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದ್ದು, ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದೇ ವೇಳೆ ವಿದೇಶದಿಂದ ರಾಜ್ಯಕ್ಕೆ ಮರಳುವವರಿಗಿದ್ದ ಅಲ್ಪ ಮಟ್ಟಿನ ವಿನಾಯಿತಿಯನ್ನು ಹಿಂಪಡೆಯಲಾಗಿದ್ದು, ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ನೆರೆಯ ರಾಜ್ಯಗಳಿಂದ ಬರುವವರಿಗೆ ಇರುವ ಮಾರ್ಗಸೂಚಿಗಳು ಏನೆಲ್ಲಾ? ವಿದೇಶದಿಂದ ಬರುವವರು ಪಾಲಿಸಬೇಕಾದ ನಿಯಮಗಳು ಯಾವುದೆಲ್ಲಾ? ಯಾವ ದೇಶಗಳಿಂದ ಬರುವವರಿಗೆ ನಿರ್ಬಂಧ ಅನ್ವಯವಾಗಲಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ವೇಳೆಯಲ್ಲಿ ಕರ್ನಾಟಕ ಸರ್ಕಾದ ಎಚ್ಚೆತ್ತುಕೊಂಡಿದೆ. ನೆರೆಯ ರಾಜ್ಯಗಳಿಂದ ಬರುವವರಿಂದ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದ್ದು, ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದೇ ವೇಳೆ ವಿದೇಶದಿಂದ ರಾಜ್ಯಕ್ಕೆ ಮರಳುವವರಿಗಿದ್ದ ಅಲ್ಪ ಮಟ್ಟಿನ ವಿನಾಯಿತಿಯನ್ನು ಹಿಂಪಡೆಯಲಾಗಿದ್ದು, ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ನೆರೆಯ ರಾಜ್ಯಗಳಿಂದ ಬರುವವರಿಗೆ ಇರುವ ಮಾರ್ಗಸೂಚಿಗಳು ಏನೆಲ್ಲಾ? ವಿದೇಶದಿಂದ ಬರುವವರು ಪಾಲಿಸಬೇಕಾದ ನಿಯಮಗಳು ಯಾವುದೆಲ್ಲಾ? ಯಾವ ದೇಶಗಳಿಂದ ಬರುವವರಿಗೆ ನಿರ್ಬಂಧ ಅನ್ವಯವಾಗಲಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಗಲ್ಫ್, ಬ್ರಿಟನ್, ಯೂರೋಪ್ನಿಂದ ಬರುವವಿಗೆ ಕಠಿಣ ನಿಯಮ

ಗಲ್ಫ್, ಬ್ರಿಟನ್, ಮಧ್ಯಪ್ರಾಚ್ಯ, ಅರಬ್ ಹಾಗೂ ಯೂರೋಪ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಆರಂಭವಾಗಿದ್ದು, ದೈನಂದಿನ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಬ್ರಿಟನ್ ಹಾಗೂ ಯೂರೋಪಿಯನ್ ದೇಶಗಳಲ್ಲಿ ಹೊಸ ಮಾದರಿ ವೈರಸ್ ಪತ್ತೆಯಾಗಿದೆ. ಇದರ ಜತೆಗೆ ಗಲ್ಫ್, ಅರಬ್ ಹಾಗೂ ಮಧ್ಯ ಪ್ರಾಚ್ಯದ ರಾಷ್ಟ್ರಗಳಲ್ಲೂ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಅಲ್ಲಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ. 72 ಗಂಟೆಯೊಳಗೆ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಂಡು, ನೆಗೆಟಿವ್ ರಿಪೋರ್ಟ್ ತೋರಿಸಿದರೆ ಮಾತ್ರ ರಾಜ್ಯಕ್ಕೆ ಬರಲು ಪ್ರವೇಶ ನೀಡಲಾಗುತ್ತದೆ.
ಕೇರಳ ಮಹಾರಾಷ್ಟ್ರಕ್ಕೆ ಕಠಿಣ ಮಾರ್ಗಸೂಚಿ

ಕೊರೊನಾ ಎರಡನೇ ಅಲೆಯಿಂದಾಗಿ ದೇಶದ ಒಟ್ಟು ಹೊಸ ಸೋಂಕಿತರ ಸಂಖ್ಯೆಯ ಪೈಕಿ ಶೇ.75 ರಷ್ಟು ಪ್ರಕರಣಗಳು ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ದಾಖಲಾಗುತ್ತಿದೆ. ಈ ಎರಡೂ ರಾಜ್ಯಗಳು ಕರ್ನಾಟಕಕ್ಕೆ ಅಂಟಿಕೊಂಡೇ ಇದ್ದು, ಗಡಿ ಜಿಲ್ಲೆಗಳಲ್ಲಿ ಸೋಂಕು ಏರಿಕೆಯಾಗುವ ಭೀತಿ ಎದುರಾಗಿತ್ತು. ಹೀಗಾಗಿ ಈ ಎರಡೂ ರಾಜ್ಯಗಳಿಂದ ಬರುವವರಿಗೆ ಕೋವಿಡ್ ನಿಯಮಗಳನ್ನು ಬಿಗಿ ಗೊಳಿಸಲಾಗಿದೆ. 72 ಗಂಟೆಗಳಿಗಿಂತ ಹಳೆಯದಲ್ಲದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.
ಈ ಎರಡೂ ರಾಜ್ಯಗಳಿಂದ ರಸ್ತೆ ಮೂಲಕ ಖಾಸಗಿ ವಾಹನಗಳಲ್ಲಿ ಬರುವವರು ಗಡಿ ಭಾಗದಲ್ಲಿ ಪರಹೆ ಕಾಯುವ ನಿಗಾ ಸಿಬ್ಬಂದಿ ನೆಗೆಟಿವ್ ವರದಿ ಪರಿಶೀಲನೆ ನಡೆಸಬೇಕು. ಬಸ್ಗಳಲ್ಲಿ ಬರುವುದಿದ್ದರೆ, ಕಂಡಕ್ಟರ್ ನೆಗೆಟಿವ್ ವರದಿ ಪರಿಶೀಲನೆ ಮಾಡಬೇಕು. ರೈಲ್ವೇ ಮೂಲಕ ಆಗಮಿಸುವುದಾದರೆ ಟಿ.ಸಿ ಹಾಗೂ ವಿಮಾನದ ಮೂಲಕ ಆಗಮಿಸುವುದಿದ್ದರೆ ನೆಗೆಟಿವ್ ವರದಿ ಪರಿಶೀಲನೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ನಿತ್ಯ ಬಂದು ಹೋಗುವ ವಿದ್ಯಾರ್ಥಿಗಳಿಗೆ 15 ದಿನಕ್ಕೊಮ್ಮೆ ಪರೀಕ್ಷೆ ಕಡ್ಡಾಯ

ವಿದ್ಯಾಭ್ಯಾಸಕ್ಕೆಂದು ಗಡಿ ದಾಟಿ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 15 ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಾಸರಗೋಡಿನಿಂದ ಮಂಗಳೂರಿಗೆ, ಬೆಳಗಾವಿ - ಕೊಲ್ಹಾಪುರದ ನಡುವೆ ವಿದ್ಯಾಭ್ಯಾಸಕ್ಕೆಂದು ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಇವರು 15 ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ. ಅಲ್ಲದೇ ಹಾಸ್ಟೆಲ್ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತೀರಾ ಅಗತ್ಯ ಕಾರಣ ಇಲ್ಲದೇ ಮನೆಗೆ ಹೋಗಿ ಬರಕೂಡದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಶಿಕ್ಷಣ ಸಂಸ್ಥೆ, ಹಾಸ್ಟೆಲ್ಗಳಿಗೆ ಮಾರ್ಗಸೂಚಿ

ಕೋವಿಡ್ನ ಮತ್ತೊಂದು ಅಲೆಯನ್ನು ತಡೆಗಟ್ಟಲು ಸರ್ಕಾರ ಪೂರ್ಣ ಪ್ರಮಾಣದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಶಾಲೆ, ಕಾಲೇಜು ಸೇರಿ ಎಲ್ಲಾ ಶಿಕ್ಷಣ ಸಂಸ್ಥೆ ಹಾಗೂ ಹಾಸ್ಟೆಲ್ಗಳಿಗೂ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಸೋಂಕಿನ ಲಕ್ಷಣಗಳಿದ್ದರೆ ಅಂಥ ವಿದ್ಯಾರ್ಥಿಗಳ ಮೇಲೆ ನಿಗ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಈ ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ನಿಗಾ ವಹಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ಸರ್ಕಾರ ಹೇಳಿದೆ. ಅಲ್ಲದೇ ಶಾಲಾ-ಕಾಲೇಜು ತರಗತಿಗಳಲ್ಲಿ, ಹಾಸ್ಟೆಲ್ ಕೊಠಡಿಗಳಲ್ಲಿ ನೋಡಲ್ ವ್ಯಕ್ತಿಯೊಬ್ಬ ಕಡ್ಡಾಯವಾಗಿ ಇರಲೇಬೇಕು ಎಂದು ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಹೋಟೆಲ್, ಪಬ್, ರೆಸಾರ್ಟ್ಗಳಿಗೆ ಮತ್ತೆ ಬಿಗಿ ನಿಯಮ

ಬೆಂಗಳೂರಿನ ಹಲವು ಹೊಟೇಲ್, ಪಾರ್ಟಿ ಕ್ಲಬ್ಗಳಲ್ಲಿ ಭಾಗವಹಿಸಿದವರಲ್ಲಿ ಕೊರೊನಾ ಸೊಂಕು ಪತ್ತೆಯಾಗಿದ್ದರಿದ ಮತ್ತೆ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಡಾಬಾಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳು ಅನುಸರಿಸುವಂತೆ ಸೂಚಿಸಲಾಗಿದೆ. ಕಂಟೈನ್ಮೆಂಟ್ ವಲಯಗಳಲ್ಲಿರುವ ಎಲ್ಲಾ ಹೋಟೆಲ್ಗಳು ಮುಚ್ಚುವಂತೆ ಹಾಗೂ ಕ್ಯಾಟರಿಂಗ್ ಸೇವೆ ಸ್ಥಗಿತಗೊಳಿಸುವತೆ ಸೂಚಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಪಾರ್ಟಿ ಕ್ಲಬ್ಗಳಲ್ಲಿರುವ ಸಿಬ್ಬಂದಿ ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಸೇರಿ ಎಲ್ಲಾ ಸುರಕ್ಷಿತಾ ಕ್ರಮಗಳಲ್ಲಿ ತಪ್ಪದೇ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
from India & World News in Kannada | VK Polls https://ift.tt/37A9qMb